ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭೂಕಂಪ ಪರಿಹಾರ ನಿಧಿಗೆ ಹಣ ಕಳಿಸಲು ಅಂಚೆ ಶುಲ್ಕ ವಿನಾಯಿತಿ
ನವದೆಹಲಿ : ಭೂಕಂಪ ಪರಿಹಾರ ನಿಧಿಯೂ ಸೇರಿದಂತೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ನಾಗರಿಕರು ಕಳುಹಿಸುವ ದೇಣಿಗೆಗೆ ಅಂಚೆ ವೆಚ್ಚದಿಂದ ವಿನಾಯಿತಿ ನೀಡಲಾಗಿದೆ. ಸೋಮವಾರ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ರಾಷ್ಟ್ರದ ಯಾವುದೇ ಅಂಚೆ ಕಚೇರಿಯಿಂದ ಯಾವುದೇ ಶುಲ್ಕವಿಲ್ಲದೆ ಪರಿಹಾರ ಸಾಮಗ್ರಿ, ಮನಿ ಆರ್ಡರ್ ಅಥವಾ ರಿಜಿಸ್ಟರ್ಡ್ ಅಂಚೆಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ನಾಗರಿಕರು ಈ ಯೋಜನೆಯ ಲಾಭ ಪಡೆದು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ, ಪರಿಹಾರ ಸಾಮಗ್ರಿ ಕಳುಹಿಸುವ ಮೂಲಕ ಗುಜರಾತ್ ಭೂಕಂಪ ಸಂತ್ರಸ್ತರಿಗೆ ನೆರವಾಗುವಂತೆ ಕೋರಲಾಗಿದೆ.
Story first published: Tuesday, February 20, 2001, 5:30 [IST]