ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಕಂಪ ಪರಿಹಾರ ನಿಧಿಗೆ ಹಣ ಕಳಿಸಲು ಅಂಚೆ ಶುಲ್ಕ ವಿನಾಯಿತಿ

By Staff
|
Google Oneindia Kannada News

ನವದೆಹಲಿ : ಭೂಕಂಪ ಪರಿಹಾರ ನಿಧಿಯೂ ಸೇರಿದಂತೆ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಗೆ ನಾಗರಿಕರು ಕಳುಹಿಸುವ ದೇಣಿಗೆಗೆ ಅಂಚೆ ವೆಚ್ಚದಿಂದ ವಿನಾಯಿತಿ ನೀಡಲಾಗಿದೆ. ಸೋಮವಾರ ಈ ಸಂಬಂಧ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ರಾಷ್ಟ್ರದ ಯಾವುದೇ ಅಂಚೆ ಕಚೇರಿಯಿಂದ ಯಾವುದೇ ಶುಲ್ಕವಿಲ್ಲದೆ ಪರಿಹಾರ ಸಾಮಗ್ರಿ, ಮನಿ ಆರ್ಡರ್‌ ಅಥವಾ ರಿಜಿಸ್ಟರ್ಡ್‌ ಅಂಚೆಗಳನ್ನು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಕಳುಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ. ನಾಗರಿಕರು ಈ ಯೋಜನೆಯ ಲಾಭ ಪಡೆದು ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ, ಪರಿಹಾರ ಸಾಮಗ್ರಿ ಕಳುಹಿಸುವ ಮೂಲಕ ಗುಜರಾತ್‌ ಭೂಕಂಪ ಸಂತ್ರಸ್ತರಿಗೆ ನೆರವಾಗುವಂತೆ ಕೋರಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X