ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ಮಗನ ಹತ್ತಿರ ಜಗಳವಾಗಬಹುದು. ಮನೆಗೆ ಸಂಬಂಧಿಸಿದಂತೆ ನಡೆಯುವ ವಾಗ್ಯುದ್ಧದಲ್ಲಿ ನೀವು ಸೋತರೆ ಸುಮ್ಮನೇ ಮುಖ ಊದಿಸಿಕೊಳ್ಳಬೇಡಿ. ಆಫೀಸಿನಲ್ಲಿಯೂ ಮೂಡ್ ಔಟ್ ಮಾಡಿಕೊಂಡರೆ ದಿನ ಚೆಂದ ಇರುತ್ತದಾ?ವೃಷಭ : ನಿಮ್ಮ ವ್ಯಾಸಂಗಕ್ಕೆ ಭಂಗ ಬಹಬಹುದು. ಲಾಟರಿ ಗೀಟರಿ ವ್ಯವಹಾರವಾದರೆ ಇವತ್ತು ಲಕ್ ಉಂಟು. ಹಾಗಂತ ಕೈ ಸಡಿಲ ಮಾಡಬೇಡಿ. ನೀವು ಮುಗಿಸಬೇಕಾದ ಜವಾಬ್ದಾರಿಗಳನ್ನು ಮರೆತಿದ್ದೀರಾ?
ಮಿಥುನ : ಎಡವಿದರೆ, ಗಾಯಕ್ಕೆ ಮದ್ದು ಹಚ್ಚಿಕೊಳ್ಳಬೇಕು. ಬೇಸರ ತಂದುಕೊಂಡರೆ ನಿಮಗೂ ತೊಂದರೆ, ನಿಮ್ಮ ಸ್ನೇಹಿತರಿಗೂ ತೊಂದರೆ. ಆಫೀಸಿನಲ್ಲಿ ಖುಷಿಯ ದಿನ. ಆಭರಣ ಧರಿಸುವ ಯೋಗವಿದೆ.
ಕಟಕ : ಆರ್ಥಿಕ ಮುಗ್ಗಟ್ಟಿನಿಂದ ರೋಧಿಸುತ್ತಿರುವ ನಿಮಗೆ ಬಂಧು ಮಿತ್ರರ ನೆರವಿನ ಸುದ್ದಿ ಸಿಗುತ್ತದೆ. ತುಂಬಾ ದಿನದಿಂದ ಪಕ್ಕಕ್ಕೆ ಸರಿಸಿರುವ ಕೆಲಸಗಳಿಗೆ ಇವತ್ತು ಚಾಲನೆ ದೊರೆಯಲಿದೆ.
ಸಿಂಹ : ಕೆಲಸ ಮಾಡುವ ಮೂಡ್ ಇಲ್ಲ ಅಂತ ಮೌನವಾದರೆ ನಿಮ್ಮ ಬಳಿ ಬಂದಿರುವ ಗೆಲುವು ದೂರ ಹೋಗಿಬಿಡುತ್ತದೆ. ಆದ್ದರಿಂದ ಸೋಮಾರಿತನ ಬೇಡ. ಕಮಾನ್, ಬಿ ಆ್ಯಕ್ಟಿವ್.
ಕನ್ಯಾ : ಕೋರ್ಟ್ ನೋಟೀಸೇನಾದರೂ ಬರುವುದಿದೆಯೋ ? ನಿಮ್ಮ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ. ಹಣ ಲಾಭವಾಗಬಹುದು. ಕುಟುಂಬದಲ್ಲಿನ ನೆಮ್ಮದಿ ನಿಮ್ಮನ್ನು ಖುಷಿಯಲ್ಲಿರಿಸುತ್ತದೆ.
ತುಲಾ : ಖುಷಿಯ ಭರದಲ್ಲಿ ಬಾಯಿ ತಪ್ಪಿ ಮಾತನಾಡಬೇಡಿ. ಸ್ನೇಹಿತರ ಸಿಟ್ಟಿಗೆ ಗುರಿಯಾಗುತ್ತೀರಿ. ಮನೆಯಲ್ಲಿ ಶುಭ ಕಾರ್ಯ ನಡೆಸಬೇಕು ಎಂಬ ನಿಮ್ಮ ಯೋಜನೆ ಸದ್ಯಕ್ಕೆ ಕೈಗೂಡದಿದ್ದರೂ ಆ ದಿಕ್ಕಿನಲ್ಲಿ ನಿಮ್ಮ ಪ್ರಯತ್ನ ಕೈ ಬಿಡಬೇಡಿ.
ವೃಶ್ಚಿಕ : ನೀವು ಕಾಣುತ್ತಿರುವ ಕನಸು ಸದ್ಯದಲ್ಲಿಯೇ ಕೈಗೂಡಲಿದೆ. ಆ ಮುನ್ಸೂಚನೆಯಿಂದಲೇ ಉಲ್ಲಸಿತರಾಗಿದ್ದೀರಿ. ಆಫೀಸಿನಲ್ಲಿ ರಾಶಿ ಬಿದ್ದಿರುವ ಕೆಲಸಗಳು ಮತ್ತು ಸಹಕರಿಸದ ಸಹೋದ್ಯೋಗಿಗಳಿಂದ ಬೇಜಾರು ಮಾಡಿಕೊಳ್ಳಬೇಡಿ.
ಧನಸ್ಸು : ಎಂದೋ ಸಾಲ ಮಾಡಿ ಮರೆತುಬಿಟ್ಟಿದ್ದೀರಾ ಅಂತ ನೆನಪಿಸಿಕೊಳ್ಳಿ. ವಿನಾ ಕಲಹ ಎದುರಿಸುವ ಮುನ್ನ ಎಲ್ಲವನ್ನು ಚುಕ್ತ ಮಾಡುವುದು ಒಳ್ಳೆಯದಲ್ವ ? ನೆಂಟರು ಬಂದರೆ ಮುಖ ಸಿಂಡರಿಸಿಕೊಳ್ಳಬಾರದು.
ಮಕರ : ನೌಕರಿಯ ಬಗ್ಗೆ ಸಂತೋಷದಿಂದ ಇರುತ್ತೀರಿ. ಹಣ ಹಾಳು ಮಾಡಿಕೊಂಡರೆ ನಂತರ ಪಶ್ಚಾತ್ತಾಪ ಪಡಬೇಕಾದೀತು. ಸಾಲ ಕೊಡುವಾಗ ಎರಡು ಬಾರಿ ಯೋಚಿಸಿ.
ಕುಂಭ : ಪತ್ನಿಯ ಅನಾರೋಗ್ಯ ನಿಮ್ಮನ್ನು ಕಂಗೆಡಿಸುತ್ತದೆ. ಆದರೆ ನೀವು ಭಯ ಪಟ್ಟುಕೊಂಡಷ್ಟು ಪರಿಸ್ಥಿತಿ ಕೆಟ್ಟು ಹೋಗಿಲ್ಲ. ಗೆಳೆಯರೊಂದಿಗೆ ಜಗಳ ಬೇಡ . ಅವರು ನಿಮ್ಮ ಒಳ್ಳೆಯದನ್ನೇ ಬಯಸುತ್ತಿರುತ್ತಾರೆ ಅಂತ ಮರೆಯಬೇಡಿ.
ಮೀನ : ನಿಮ್ಮ ಕ್ಷಣ ಚಿತ್ತ ಕ್ಷಣ ಪಿತ್ತ ಬುದ್ಧಿ ಅರ್ಥವಾಗದೇ ಸ್ನೇಹಿತರು ಕಕ್ಕಾಬಿಕ್ಕಿಯಾಗುತ್ತಾರೆ. ಆದರೂ ನೀವು ಸದ್ಯಕ್ಕೆ ಆರಾಮವಾಗಿರುತ್ತೀರಿ. ನೌಕರಿಯಲ್ಲಿ ನಿಮ್ಮದೇ ಕಾರುಬಾರು. ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಿ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications