ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಚ್ಚು ನಾಯಿ ಕಡಿತಕ್ಕೆ ಇನ್ನು ಹೊಸ ಬ್ರೀಡ್‌ ಕರ್ಬೂಜವೇ ಮದ್ದು

By Staff
|
Google Oneindia Kannada News

ಬೆಂಗಳೂರು : ಮಾಹಿತಿ ತಂತ್ರಜ್ಞಾನವನ್ನೂ ಮೀರಿಸುವಂತೆ ಬೆಳೆಯುತ್ತಿರುವ ಜೈವಿಕ ತಂತ್ರಜ್ಞಾನ ಹೊಸ ವೈಜ್ಞಾನಿಕ ಸಂಶೋಧನೆಯನ್ನು ಕಂಡಿದೆ. ಇನ್ನು ಮುಂದೆ ಹುಚ್ಚುನಾಯಿ ಕಡಿತಕ್ಕೆ ಕರ್ಬೂಜವೇ ಮದ್ದು ! ಜೈವಿಕ ತಂತ್ರಜ್ಞಾನದ ಈ ಕೊಡುಗೆ ಪ್ರಕಟಿಸಿದವರು ಬೆಂಗಳೂರು ವಿವಿ ಜೀವತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಟಿ.ಕೆ.ಎಸ್‌.ಗೌಡ.

ಹುಚ್ಚುನಾಯಿ ಕಡಿತದಿಂದ ಬರುವ ರ್ಯಾಬಿಸ್‌ ರೋಗದ ವ್ಯಾಕ್ಸೀನಿಗೆ ಬಳಸುವ ವಂಶವಾಹಿಯನ್ನು ಉಪಯೋಗಿಸಿ ವಿದೇಶೀ ವಿಜ್ಞಾನಿಗಳೊಂದಿಗೆ ಸೇರಿ ಭಾರತೀಯ ವಿಜ್ಞಾನಿಗಳು ಕರ್ಬೂಜದ ಹಣ್ಣು ಬೆಳೆಸಿದರು. ಕರ್ಬೂಜ ತಯಾರಾಯಿತು. ರ್ಯಾಬಿಸ್‌ ವ್ಯಾಕ್ಸೀನ್‌= ಜೈವಿಕ ತಂತ್ರಜ್ಞಾನದ ಕರ್ಬೂಜದ ಹಣ್ಣು ಎಂಬುದು ಪ್ರಯೋಗಗಳಿಂದ ಪಕ್ಕಾ ಆಯಿತು. ವಿಜ್ಞಾನಿಗಳು ಯುರೇಕಾ ಅಂದರು. ಗ್ರಾಮ ಸಮಾಚಾರ ಪತ್ರಿಕೆ ಬೆಂಗಳೂರಲ್ಲಿ ಸೋಮವಾರ ಆಯೋಜಿಸಿದ್ದ ಕೃಷಿ ಉತ್ಪನ್ನ ಆಮದು ಮತ್ತು ಜೈವಿಕ ತಂತ್ರಜ್ಞಾನ ವಿಚಾರ ಸಂಕಿರಣದಲ್ಲಿ ಡಾ.ಗೌಡ ಈ ಯಶಸ್ವಿ ಶೋಧವನ್ನು ಬಹಿರಂಗಪಡಿಸಿದರು.

ಇನ್ನು ಮುಂದೆ ಹುಚ್ಚು ನಾಯಿ ಕಡಿತಕ್ಕೆ ಹೊಕ್ಕಳ ಸುತ್ತಾ 14 ಚುಚ್ಚುಮದ್ದು ಕೊಡಿಸಿಕೊಳ್ಳಬೇಕಿಲ್ಲ. ಜೈವಿಕ ತಂತ್ರಜ್ಞಾನದ ಹೊಸ ತಳಿಯ ಕರ್ಬೂಜ ತಿಂದರೆ ಸಾಕು. ಆದರೆ ಇದರ ಬೆಲೆ ಎಷ್ಟಿರಬಹುದೆಂಬುದು ಇನ್ನೂ ಗೊತ್ತಾಗಿಲ್ಲ. ಗೊತ್ತಾದ ತಕ್ಷಣ ನಾವೇ ಮೊದಲು ತಿಳಿಸುತ್ತೇವೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X