Get Updates
Get notified of breaking news, exclusive insights, and must-see stories!

ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿಲ್ಲ -ಹರೇನ್‌ ಪಾಂಡ್ಯ

ಅಹಮದಾಬಾದ್‌ : ಭುಜ್‌ ಮತ್ತು ಕಛ್‌ ಪ್ರದೇಶ ಸೇರಿದಂತೆ ಭೂಕಂಪದಿಂದ ಪೀಡಿತ ಪ್ರದೇಶಗಳಲ್ಲಿ ದರೋಡೆ ಮತ್ತು ಕಳ್ಳತನಗಳಲ್ಲಿ ತೊಡಗಿರುವವರಿಗೆ ಕಂಡಲ್ಲಿ ಗುಂಡಿಕ್ಕುವಂತೆ ಸ್ಥಳೀಯ ಆಡಳಿತವಾಗಲೀ, ಕಛ್‌ನ ಮಿಲಿಟರಿ ಪಡೆಯಾಗಲಿ ಆದೇಶ ಹೊರಡಿಸಿಲ್ಲ ಎಂದು ಗುಜರಾತ್‌ನ ಗೃಹ ಮಂತ್ರಿ ಹರೇನ್‌ ಪಾಂಡ್ಯ ಬುಧವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪಾಂಡ್ಯ ಅವರು ಭೂಕಂಪದಲ್ಲಿ ನೆಲಕಚ್ಚಿರುವ ಕಟ್ಟಡಗಳ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿರುವ ಬೆಲೆ ಬಾಳುವ ವಸ್ತುಗಳನ್ನು ರಕ್ಷಿಸುವಂತೆ ಪರಿಹಾರ ಕಾರ್ಯದಲ್ಲಿ ತೊಡಗಿರುವವರಿಗೆ ಸೂಚನೆ ಕೊಡಲಾಗಿತ್ತು ಎಂದರು. ಅಲ್ಲದೆ ಸಂಪೂರ್ಣವಾಗಿ ನಾಶವಾಗಿರುವ ಊರುಗಳಲ್ಲಿನ ಪರಿಸ್ಥಿತಿಯನ್ನು ಯಾರೂ ದುರುಪಯೋಗ ಪಡಿಸಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸಲು ನಾಗರಿಕರಿಗೆ ತಿಳಿಸಲಾಗಿತ್ತು . ದರೋಡೆಕೋರರು ಹಾಗೂ ಕಳ್ಳರನ್ನು ತೀವ್ರ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಆದೇಶಿಸಲಾಗಿತ್ತೇ ಹೊರತು ಕಂಡಲ್ಲಿ ಗುಂಡಿಕ್ಕುವ ಆದೇಶ ಹೊರಡಿಸಿಲ್ಲ ಎಂದು ಹರೇನ್‌ ಪಾಂಡ್ಯ ಸ್ಪಷ್ಟಪಡಿಸಿದರು.

ಕುಸಿದು ಹೋಗಿರುವ ಕಟ್ಟಡಗಳಡಿಯಿಂದ ಅಳಿದುಳಿದ ವಸ್ತುಗಳನ್ನು ತೆಗೆಯುವ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಪರಿಹಾರ ಕಾರ್ಯಗಳಲ್ಲಿ ತೊಡಗಿರುವವರು ನಿರ್ವಸಿತರಿಗೆ ಆಹಾರ, ಬಟ್ಟೆ ಪೂರೈಕೆ ಹಾಗೂ ಶುಶ್ರೂಷೆ ಮಾಡುವ ಕೆಲಸದಲ್ಲಿ ನಿರತರಾಗಿರುವುದರಿಂದ ಕಳ್ಳತನದ ಸಂಭವವೂ ಇಲ್ಲದಿಲ್ಲ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ನೀಡಲಾಗಿತ್ತೇ ಹೊರತು ಕಂಡಲ್ಲಿ ಗುಂಡು ಹಾರಿಸುವಂತೆ ಆದೇಶಿಸಿಲ್ಲ ಎಂದ ಸಚಿವರು ಸಾಕಷ್ಟು ಪೊಲೀಸ್‌ ಮತ್ತು ಮಿಲಿಟರಿ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+