Get Updates
Get notified of breaking news, exclusive insights, and must-see stories!

ಯಥಾಶಕ್ತಿ ನೆರವು : ದಿನಾಂಕ 01.02.2001 ರವರೆಗೆ

  • ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗೂ ನಗರದ ಡಾಕ್ಟರುಗಳು, ವಕೀಲರು ಮತ್ತು ಉದ್ಯಮಿಗಳು ನಗರಾದ್ಯಂತ ಸಂಚರಿಸಿ ಗುಜರಾತ್‌ ಭೂಕಂಪ ಪರಿಹಾರ ನಿಧಿ ಸಂಗ್ರಹಿಸಿ ಮುಖ್ಯ ಮಂತ್ರಿಗಳ ಪರಿಹಾರ ನಿಧಿ ಮೂಲಕ ನೆರವು ಕಳುಹಿಸಲಿದ್ದಾರೆ.
  • ಬೆಂಗಳೂರಿನ ಭಗವಾನ್‌ ಮಹಾವೀರ್‌ ಜೈನ್‌ ಆಸ್ಪತ್ರೆ ಗುಜರಾತ್‌ ಭೂಕಂಪದಲ್ಲಿ ಹಾನಿಗೊಳಗಾದವರಿಗೆ ಉಚಿತ ಚಿಕಿತ್ಸೆ ಮತ್ತು ಔಷಧಿ ನೀಡಲು ನಿರ್ಧರಿಸಿದೆ. ಆಸ್ಪತ್ರೆಯ ಫೋನ್‌ ನಂ : 080- 2254639/40/41, ಮೊಬೈಲ್‌ 98440-88995
  • ಬೆಂಗಳೂರಿನ ಕರುಣಾಶ್ರಯ ಕ್ಯಾನ್ಸರ್‌ ರೋಗಿಗಳ ಆಶ್ರಮವು ಕಾರ್ನಿವಲ್‌-2001 ಕಾರ್ಯಕ್ರಮದಡಿ , ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಸ್ಪರ್ಧೆಗಳನ್ನು ಫೆ.2ರಂದು ಆಯೋಜಿಸಿದೆ. ಈ ಮೂಲಕ ಸಂಗ್ರಹಿಸಲಾಗುವ ಹಣವನ್ನು ಗುಜರಾತ್‌ ಪರಿಹಾರ ನಿಧಿಗೆ ನೀಡಲಿದೆ. ಸಂಪರ್ಕಿಸಲಿಚ್ಚಿಸುವವರು 080- 8476133 ನಂಬರಿಗೆ ಫೋನಾಯಿಸಬಹುದು.
  • ಅಪೆಕ್ಸ್‌ ಬ್ಯಾಂಕ್‌, ಎನ್‌ಜಿಇಎಫ್‌ ಹಾಗೂ ರಾಜ್ಯ ಪರಿಶಿಷ್ಟ ಜಾತಿ ಮತ್ತು ವರ್ಗ ಅಭಿವೃದ್ಧಿ ನಿಗಮ ನೌಕರರ ಸಂಘ ಗುಜರಾತ್‌ ಭೂಕಂಪ ಪರಿಹಾರ ನಿಧಿಗೆ 19. 54 ಲಕ್ಷ ರೂಪಾಯಿ ನೀಡಿದೆ.
  • ಕೇಂದ್ರ ಜವಳಿ ಖಾತೆ ರಾಜ್ಯ ಸಚಿವ ವಿ. ಧನಂಜಯ ಕುಮಾರ್‌ ಅವರ ಸಂಸದರ ನಿಧಿಯಿಂದ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ ಹತ್ತು ಲಕ್ಷ ರೂಪಾಯಿ.
  • ನಗರದ ಭಾರತೀನಗರ ವಿಧಾನ ಸಭಾ ಕ್ಷೇತದ ಪೀಪಲ್ಸ್‌ ವೆಲ್‌ಫೇರ್‌ ಅಸೋಸಿಯೇಷನ್‌ನ 20 ಮಂದಿ ಸದಸ್ಯರು ಅಗತ್ಯ ಸಾಮಗ್ರಿಗಳೊಂದಿಗೆ ಗುಜರಾತಿಗೆ ತೆರಳಿದ್ದಾರೆ.
  • ಬೆಂಗಳೂರು ಉತ್ತರ ತಾಲ್ಲೂಕಿನ ಕಾಕೋಳು ಗ್ರಾಮದ ಸರಕಾರಿ ಪ್ರೌಢ ಶಾಲೆಯಿಂದ 1001 ರೂಪಾಯಿ
  • ಕೋಲಾರ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ವತಿಯಿಂದ 25 ಸಾವಿರ ರೂಪಾಯಿ ದೇಣಿಗೆ, ನಗರ ಸಭಾ ನೌಕರರ ಒಂದು ದಿನದ ವೇತನ, ಹಾಗೂ ನಗರ ಸಭೆಯಿಂದ ಐದು ಲಕ್ಷ ರೂಪಾಯಿ.
  • ಭಾರತೀಯ ಜನತಾ ಪಕ್ಷದ ಪರವಾಗಿ ಕೇಂದ್ರ ಸಂಸ್ಕೃತಿ ಖಾತೆ ಸಚಿವ ಅನಂತಕುಮಾರ್‌ ಅವರು ಪಕ್ಷದ ಕಾರ್ಯಕರ್ತರೊಂದಿಗೆ ಬೆಂಗಳೂರಿನ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ, ಭೂಕಂಪ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹಿಸಿದರು.
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+