ಮಂಗಳವಾರದೊಳಗೇ ರಾಜ್ ಬಿಡುಗಡೆ - ಕರುಣಾನಿಧಿ ಭರವಸೆ
ಚೆನ್ನೈ : ಸಂಧಾನಕಾರ ಗೋಪಾಲ್ಗೆ ರಾಜ್ ಹಾಗೂ ಇತರೆ ಇಬ್ಬರು ಒತ್ತೆಯಾಳುಗಳನ್ನು ಮಂಗಳವಾರದೊಳಗೆ ಬಿಡಿಸಿಕೊಂಡು ಬರುವ ವಿಶ್ವಾಸ ಈಗಲೂ ಇದೆ. ಆದರೆ ಅವರ 5ನೇ ಯಾತ್ರೆಗೆ ವೀರಪ್ಪನ್ ಗ್ರೀನ್ ಸಿಗ್ನಲ್ ಕೊಡಬೇಕಷ್ಟೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹೇಳಿರುವ ಮಾತಿದು. ಗೋಪಾಲ್, ವೀರಪ್ಪನ್ ಮನವೊಲಿಸಲು ಹೆಚ್ಚೂಕಮ್ಮಿ ಯಶಸ್ವಿಯಾಗಿದ್ದರು. ಆದರೆ ಬುಧವಾರ ರಾತ್ರಿ ನಾಗಪ್ಪ ತಪ್ಪಿಸಿಕೊಂಡು ಬಂದಿದ್ದರಿಂದ ವೀರಪ್ಪನ್ ತನ್ನ ಅಡಗುತಾಣ ಬದಲಿಸುವ ಕಾರ್ಯದಲ್ಲಿ ನಿರತನಾದ. ಹೀಗಾಗಿ ಮಾತುಕತೆಗೆ ಅಡಚಣೆಯುಂಟಾಯಿತು. ಈಗಲೂ ವೀರಪ್ಪನ್ ಯಾವುದೇ ಗಳಿಗೆಯಲ್ಲಿ ಬೇಕಾದರೂ ಗೋಪಾಲ್ಗೆ ಕರೆ ಕೊಡಬಹುದು. ಕರೆ ಕೊಟ್ಟ ತಕ್ಷಣ ಗೋಪಾಲ್ ಕಾಡಿಗೆ ಹೋಗಿ, ಮಂಗಳವಾರದೊಳಗೆ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಬರುತ್ತಾರೆ ಎಂಬ ಭರವಸೆಯ ಮಾತುಗಳನ್ನಾಡಿದರು.
ವೀರಪ್ಪನ್ಗೆ ಒತ್ತೆಯಾಳು ತಪ್ಪಿಸಿಕೊಂಡು ಬಂದದ್ದು ಕೋಪ ತರಿಸಿತ್ತು. ಆತ ತಣ್ಣಗಾಗುವವರೆಗೆ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ ಎನಿಸಿದ ಕಾರಣ ನಾನು ವಾಪಸ್ಸಾದೆ. ಉಭಯ ಸರ್ಕಾರಗಳೂ ವೀರಪ್ಪನ್ ಬೇಡಿಕೆಗಳಿಗೆ ಸ್ಪಂದಿಸಿರುವುದು ಆತನಿಗೆ ತೃಪ್ತಿ ತಂದಿದೆ. ಟಾಡಾ ಬಂದಿಗಳ ಬಿಡುಗಡೆ ತಕರಾರಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸುಪ್ರಿಂಕೋರ್ಟ್ಗೆ ಸಲ್ಲಿಸಿರುವ ಮನವಿ ಪತ್ರದ ಬಗೆಗೂ ವೀರಪ್ಪನ್ ತೃಪ್ತಿ ವ್ಯಕ್ತಪಡಿಸಿದ್ದಾನೆ. ಅವನ ಕರೆಗೆ ಕಾಯುತ್ತಿದ್ದೇನೆ. ಕರೆದೊಡನೆಯೇ 5ನೇ ಬಾರಿಗೆ ಕಾಡಿಗೆ ಹೋಗಿ ಒತ್ತೆಯಾಳುಗಳನ್ನು ಕರೆ ತರಲು ನಾನು ಸಿದ್ಧ ಎಂದು ಗೋಪಾಲ್ ಹೇಳಿದ್ದಾರೆ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ












Click it and Unblock the Notifications