ಕೇಂದ್ರ ಗೃಹ ಕಾ-ರ್ಯ-ದರ್ಶಿ-ಗೆ ಅಬ್ದುಲ್‌ ಕರೀಂ ನೋಟೀಸು

ಮೈಸೂರು : ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳ ನಡಾವಳಿಗಳ ನಡುವೆ ತಲೆ ಹಾಕುವಂತೆ ನಾಗರಿಕ ನೀತಿ ಸಂಹಿತೆಯ 80ನೇ ವಿಧಿಯನ್ವಯ ಕೇಂದ್ರ ಗೃಹ ಕಾ-ರ್ಯದರ್ಶಿ-ಗೆ ಅಬ್ದುಲ್‌ ಕರೀಂ ನೋಟೀಸು ಕೊಟ್ಟಿದ್ದಾರೆ.

ವೀರಪ್ಪನ್‌ ಗುಂಡಿಗೆ ಬಲಿಯಾದ ಸಬ್‌ ಇನ್ಸ್‌ಪೆಕ್ಟರ್‌ ಶಕೀಲ್‌ ಅಹ್ಮದ್‌ ತಂದೆ ಕರೀಂ ಖಾನ್‌ ಅವರ ವಕೀಲ ರಾಮಕೃಷ್ಣ ಕಳುಹಿಸಿರುವ ನೋಟೀಸಿನಲ್ಲಿ , ‘ಉಭಯ ಸರ್ಕಾರಗಳಲ್ಲಿ ಸಂವಿಧಾನಾತ್ಮಕ ಕಾರ್ಯತಂತ್ರಕ್ಕೆ ಚ್ಯುತಿ ಉಂಟಾಗಿದೆ. ವೀರಪ್ಪನ್‌ನನ್ನು ಹಿಡಿಯಲು ಸರ್ಕಾರಗಳು ವಿಫಲವಾಗಿರುವುದು ಒಂದು ದುರಂತ. ಅರ್ಥಶಾಸ್ತ್ರಜ್ಞ ಡಿ.ಎಂ. ನಂಜುಂಡಪ್ಪ ತಿಳಿಸಿರುವಂತೆ, ರಾಜ್‌ಕುಮಾರ್‌ ಅಪಹರಣವಾದಾಗಿನಿಂದ ಉಭಯ ರಾಜ್ಯಗಳ ವ್ಯಾಪಾರ- ವಹಿವಾಟಿನಲ್ಲಿ 15 ಸಾವಿರ ಕೋಟಿ ರುಪಾಯಿ ನಷ್ಟವಾಗಿದ್ದು, ಈ ನಷ್ಟ ಮುಂದುವರೆದಿದೆ. ಇಂಥ ಸನ್ನಿವೇಶದಲ್ಲಿ ಸಂವಿಧಾನದ 355ನೇ ವಿಧಿಯನ್ವಯ ಉಭಯ ಸರ್ಕಾರಗಳ ಕಾರ್ಯವೈಖರಿಯನ್ನು ಕೇಂದ್ರ ಸರ್ಕಾರ ಪ್ರಶ್ನಿಸಬೇಕು ’ ಎಂದು ತಿಳಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯಕ್ಕೆ -ನೀ-ಡಿ-ರು-ವ 60 ದಿನಗಳ ಗಡುವಿನ-ಲ್ಲಿ ಸರ್ಕಾರಗಳು ತಮ್ಮ ಕಾರ್ಯತಂತ್ರದಲ್ಲಿ ಸುಧಾರಣೆ ತರಬೇಕು. ಇಲ್ಲವಾದಲ್ಲಿ ಕಾನೂನು ಅವಕಾಶಗಳನ್ನು ಉಪಯೋಗಿಸಿಕೊಂಡು ಮೈಸೂರು ಕೋರ್ಟಿನಲ್ಲಿ ಗೃಹ ಸಚಿವಾಲಯದ ವಿರುದ್ಧ ಮೊಕದ್ದಮೆ ದಾಖಲು ಮಾಡಬಹುದಾಗಿದೆ ಎಂದು ರಾಮಕೃಷ್ಣ ಹೇಳಿದ್ದಾರೆ.

(ಇನ್ಫೋ ವರದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+