ಇಂದೋ ನಾಳೆಯೋ ತುಂಬಲಿದೆ ಕೆ.ಆರ್.ಎಸ್.
ಬೆಂಗಳೂರು : ಬುಧವಾರ ಬೆಂಗಳೂರಿನಲ್ಲಿ ಬೆಳಗ್ಗೆನಿಂದಲೇ ಮೋಡ ಮುಸುಕಿತ್ತು, ಶಾಲೆಗೆ ಹೋಗುವ ಮಕ್ಕಳು, ಕಚೇರಿಗೆ ತೆರಳುವ ಬೆಂಗಳೂರಿಗರು ಛತ್ರಿ ಹಿಡಿದು, ರೈನ್ ಕೋಟ್ ಧರಿಸಿ ಮನೆ ಬಿಟ್ಟರು. ಆಗಲೇ ತುಂತುರು ಸಿಂಚನ. ಹತ್ತು ಗಂಟೆಯ ಹೊತ್ತಿಗೆ ಕೊಂಚ ಬಿಸಿಲು ಮೂಡಿತು. ಆದರೂ ಚಳಿಚಳಿ ಎನ್ನಿಸುತ್ತಿತ್ತು.
ಬೆಳಗ್ಗೆ ಕಚೇರಿಗೆ ಹೋಗುವಾಗ ಮಳೆಯಿಂದಾದ ಕಿರಿಕಿರಿಯ ಬಗ್ಗೆ ಮಾತಾಡುತ್ತಾ, ಹಾಳು ಮಳೆ ಎಂದ ಮಂದಿಗೆ ಬುದ್ಧಿ ಕಲಿಸುವಂತೆ ಮಳೆರಾಯ ಮತ್ತೆ ಸಂಜೆ 5 ಗಂಟೆಗೆ ತನ್ನ ಪ್ರತಾಪ ಮೆರೆದ. ಮೋಡಗಳನ್ನೆಲ್ಲಾ ಬೆಂಗಳೂರಿನ ಮೇಲೆ ಕೇಂದ್ರೀಕರಿಸುವಂತೆ ಮಾಡಿ ಒಂದೇ ಸಮನೆ ಸುರಿಮಳೆ ಸುರಿಸಿದ. ಸರಿ ಸುಮಾರು 40 ನಿಮಿಷಗಳ ಕಾಲ ಮಳೆಯ ಆರ್ಭಟ ಕಡಿಮೆಯೇ ಆಗಲಿಲ್ಲ.
ಮನೆಗೆ ಹೊರಟಿದ್ದ ಮಂದಿಯ ವೇದನೆ ನೋಡಲಾರದೆಯೋ ಏನೋ ಅಂತು ವರುಣ ಶಾಂತನಾದ. ಕೇವಲ ಬೆಂಗಳೂರಿನಲ್ಲಿ ಅಷ್ಟೇ ಅಲ್ಲ ರಾಜ್ಯದ ಎಲ್ಲೆಡೆಯೂ ಮಳೆ ಸುರಿಯುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಜ್ಯದ ಹೆಮ್ಮೆಯ ಕೃಷ್ಣರಾಜ ಸಾಗರ (ಕೆ.ಆರ್.ಎಸ್.) ಬಹುತೇಕ ತುಂಬಿಹೋಗಿದೆ. ಇಂದೋ ನಾಳೆಯೋ ಪೂರ್ಣಮಟ್ಟ ತಲುಪುವ ಅಪಾಯ ಇದ್ದು, ಹೊರ ಹರಿವು ಹೆಚ್ಚುವ ಕಾರಣ, ಎರಡೂ ದಂಡೆಗಳಲ್ಲಿರುವ ಜನರಿಗೆ ಪ್ರವಾಹದ ಮುನ್ಸೂಚನೆ ನೀಡಲಾಗಿದೆ.
ಕೆಆರ್ಎಸ್ನಲ್ಲಿ ನೀರಿಲ್ಲದೆ ಮುಳುಗಿದ್ದ ಕೃಷ್ಣ ದೇಗುಲವೇ ಮೇಲೆದ್ದಾಗ, ಹುಯ್ಯೋ ಹುಯ್ಯೋ ಮಳೆರಾಯ ಕನ್ನಂಬಾಡಿಗೆ ನೀರಿಲ್ಲ ಎಂದು ಹಾಡುತ್ತಿದ್ದವರೆಲ್ಲಾ, ಈಗ ಪ್ರವಾಹಕ್ಕೆ ಹೆದರಿ ನಿಲ್ಲೋ ನಿಲ್ಲೋ ಮಳೆರಾಯ ಎಂದು ಮಳೆರಾಯನ ಪ್ರಾರ್ಥಿಸುತ್ತಿದ್ದಾರೆ. ಕೆ.ಆರ್.ಎಸ್. ಪ್ರದೇಶದಲ್ಲಿ ನ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಜ್ಜಾಗಿರುವಂತೆ ಸೂಚನೆ ನೀಡಲಾಗಿದೆ.
ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಏಕಾಏಕಿ ಮುಂಗಾರು ತೀವ್ರಗೊಂಡಿದೆ. ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಮಡಿಕೇರಿಯಲ್ಲಿ ಅತಿಹೆಚ್ಚು ಎಂದರೆ 14 ಸೆಂಟಿ ಮೀಟರ್ ಮಳೆ ಬಿದ್ದಿದೆ. ಶೃಂಗೇರಿಯಲ್ಲಿ 11, ಕಮ್ಮರಡಿಯಲ್ಲಿ 9 ಹೀಗೆ ಕರ್ನಾಟಕದ ಎಲ್ಲ ಊರುಗಳ ಹೆಸರನ್ನೂ ಇಲ್ಲಿ ಬರೆಯಬೇಕಾಗುತ್ತದೆ ಎನ್ನುವಷ್ಟು ಮಳೆಯಾಗಿದೆ.
ಮುನ್ಸೂಚನೆಯಂತೆ ಮುಂದಿನ 48 ಗಂಟೆಗಳ ಅವಧಿಯಲ್ಲಿ ಉತ್ತರ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲೆಡೆ ಮಳೆ ಬೀಳಲಿದೆ. ಸ್ಥಳೀಯ ಹವಾಮಾನ ಮುನ್ಸೂಚನೆಯಂತೆ ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮೋಡ ಕವಿದ ವಾತಾವರಣ ಇದ್ದು, ಆಗಾಗ ಮಳೆ ಸುರಿಯುತ್ತಲೇ ಇರುತ್ತದೆ. ರಾಜಧಾನಿಯ ನಿವಾಸಿಗಳೇ ಮೂಲೆ ಸೇರಿದ ಕೊಡೆಗಳ ಧೂಳು ಕೊಡವಿ ಸಿದ್ಧವಾಗಿಟ್ಟುಕೊಳ್ಳಿ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications