ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
ಹೀಗೆ ಹಲವು ಸಂಗತಿಗಳನ್ನು ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಆಶೀಸರ ಬಯಲಿಗೆಳೆದರು. ಗಣೇಶ್ ಭಟ್ ಉಪ್ಪೋಣಿ ಎರಡೂ ಯೋಜನಾ ವರದಿಗಳನ್ನು ಪ್ರದರ್ಶಿಸಿ ಸಮರ್ಥಿಸಿದರು.
ಅಂಗೈ ಹುಣ್ಣಿಗೆ ಕನ್ನಡಿ ಬೇಕೆ ಎಂಬಂತಿದ್ದ ವರದಿಯ ಲೋಪದೊಷಗಳನ್ನು ಪಟ್ಟಿ ಮಾಡಿದ ಪರಿಸರವಾದಿಗಳು ಜನತೆ ಮತ್ತು ಸರಕಾರವನ್ನು ತಪ್ಪು ಮಾಹಿತಿ ನೀಡಿ ದಾರಿತಪ್ಪಿಸುತ್ತಿರುವ ಆಪಾದನೆ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದರು.
ಉದ್ಯೋಗ ಬೇಕು : ಆಕ್ಷೇಪಗಳಿಗೆ ಉತ್ತರಿಸುವಂತೆ ಜಿಲ್ಲಾಧಿಕಾರಿ ನೀಡಿದ ರೂಲಿಂಗ್ಗೆ ಪ್ರವರ್ತಕರ ಬಳಿ ಉತ್ತರವೇ ಇರಲಿಲ್ಲ.
ದಾಂಡೇಲಿ ಮತ್ತು ಜೋಯಿಡಾ ತಾಲ್ಲೂಕುಗಳಿಂದ ಬಂದಿದ್ದ ಕೆಲವು ತಂಡಗಳ ಜನರು ತಮ್ಮ ನಿರುದ್ಯೋಗ ತೊಲಗಬೇಕಾದರೆ ಇಂಥ ಯೋಜನೆ ಬೇಕು ಎಂದು ಸ್ವಾಗತ ಕೋರಿದರು. ಇನ್ನೂ ಕೆಲವರು ಪರಿಸರವಾದಿಗಳ ಆಕ್ಷೇಪವನ್ನು ತೀವ್ರವಾಗಿ ತಳ್ಳಿಹಾಕಿ ನಮಗೆ ಕೆಲಸ ಬೇಕು ಹಾಗಾಗಿ ಯೋಜನೆ ಬೇಕು ಎಂದರು. ಒಂದು ಹಂತದಲ್ಲಿ ಪರಿಸರವಾದಿಗಳ ವಿರುದ್ಧ ಧಿಕ್ಕಾರವೂ ಕೇಳಿಬಂತು. ನಿರುದ್ಯೋಗ ನಿವಾರಣೆಗೆ ಯೋಜನೆಯೇ ಮದ್ದು ಎಂಬಂತೆ ಮಾತನಾಡಿದರು.
ದಾಂಡೇಲಿಯ ವೇಣುಗೋಪಾಲ ಎಂಬ ಪರಿಸರವಾದಿ ವಾಸ್ತವ ಪರಿಸ್ಥಿತಿಯನ್ನು ಮುಂದಿಟ್ಟರು. ಯೋಜನಾ ಕಾಮಗಾರಿಯ ಸಂದರ್ಭದಲ್ಲಿ 4 ವರ್ಷ 1500 ಜನರಿಗೆ ಉದ್ಯೋಗ ದೊರಕಬಹುದು. ನಂತರ ಉದ್ಯೋಗ ಹಿಡಿಯುವವರ ಸಂಖ್ಯೆ ಕೇವಲ 150 ಎಂದು ತಿಳಿಸಿದ್ದು, ನಿರುದ್ಯೋಗದ ಮಂತ್ರ ಜಪಿಸಿದವರಿಗೆ ತಣ್ಣೀರೆರಚಿತು.
ಒಂದು ಹಂತದಲ್ಲಿ ಅಭಿವೃದ್ಧಿ ಪರ ಮಾತನಾಡುವವರು ಸಂಪೂರ್ಣ ರಾಜಕೀಯ ಪಕ್ಷಗಳ ಮುಖವಾಣಿಯಂತೆ ಮಾತನಾಡಿದರು. ಯೋಜನೆಗ ಕಾರಣರಾದ ಸಚಿವ ಆರ್.ವಿ. ದೇಶಪಾಂಡೆ ಮತ್ತು ಪ್ರವರ್ತಕರಿಗೆ ಕೃತಜ್ಞತೆಯನ್ನೂ ಅರ್ಪಿಸಿದರು. ಕಾಳಿ ಕೊಳ್ಳದ ಎಲ್ಲ ಯೋಜನೆಗಳನ್ನೂ ಕರ್ನಾಟಕ ವಿದ್ಯುತ್ ನಿಗಮವೇ ನಡೆಸುತ್ತಿರುವುದರಿಂದ ಈ ಯೋಜನೆಯನ್ನು ಕೆಪಿಸಿಗೇ ನೀಡಬೇಕೆಂದು ನಿಗಮದ ಅಧಿಕಾರಿಗಳು ಸಭೆಗೆ ತಿಳಿಸಿದರು.
ವಿಚಾರಣೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಎಸ್. ಬಿ. ಗಂಜಿಗಟ್ಟಿ ಅವರು ಚರ್ಚೆಯ ವಿಷಯಗಳನ್ನು ತಜ್ಞರ ಉನ್ನತ ಮಟ್ಟದ ಸಭೆಯ ಮುಂದಿಡಲಾಗುವುದು ಎಂದರು. ಸಭೆಯಲ್ಲಿ ಮಾಜಿ ಸಂಸದ ಬಿ.ಪಿ. ಕದಂ, ಜಿಲ್ಲಾಪಂಚಾಯತ್ ಉಪಾಧ್ಯಕ್ಷ ವಿಲಾಸ್ ನಾಯ್ಕ, ಪರಿಸರ ವಿಚಾರಣಾ ಸಮಿತಿ ಸದಸ್ಯರಾದ ವನಿತಾ ನಾಯ್ಕ, ಎಲ್.ವಿ. ಶಾನಭಾಗ, ಮೊದಲಾದವರು ಹಾಜರಿದ್ದರು.
ಮುಖಪುಟ / ಇವತ್ತು... ಈ ಹೊತ್ತು...
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications