ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

15ರಂದು ಕರಾಳ ದಿನಾಚರಣೆ

By Super
|
Google Oneindia Kannada News

ಹುಬ್ಬಳ್ಳಿ : ತಮ್ಮ ಬೇಡಿಕೆಗಳನ್ನು ಪೂರೈಸಲು ರಾಜ್ಯ ಸರಕಾರ ವಿಫಲವಾದಲ್ಲಿ ಈ ಬಾರಿಯ ಸ್ವಾತಂತ್ರ ್ಯ ದಿನಾಚರಣೆಯನ್ನು ಕರಾಳದಿನವನ್ನಾಗಿ ಆಚರಿಸಲಾಗುವುದು ಎಂದು ರಾಜ್ಯ ಅನುದಾನ ರಹಿತ ವಿದ್ಯಾ ಸಂಸ್ಥೆಗಳ ಉಪನ್ಯಾಸಕರು ಮತ್ತು ಆಡಳಿತ ಮಂಡ-ಳಿಗಳ ಒಕ್ಕೂಟ ಹೇಳಿದೆ.

ಅನುದಾನ ರಹಿತ ಶಾಲಾ ಕಾಲೇಜುಗಳಿಗೆ ಅನುದಾನ ನೀಡು-ವ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದ್ದು , ಬೇಡಿ-ಕೆ ಈಡೇರಿಕೆಗಾಗಿ ತನ್ನ ಹೋರಾಟವನ್ನು ಒ-ಕ್ಕೂ-ಟ ಮುಂದುವರೆಸಲಿದೆ ಎಂದು ಒಕ್ಕೂಟದ ರಾಜ್ಯ ಅಧ್ಯಕ್ಷ ಸಿ. ಹೆಚ್‌. ಗೌಡರ್‌ ಭಾನು-ವಾ-ರ ಹೇಳಿದರು. ಆಗಸ್ಟ್‌ 15ರೊಳಗೆ ಬೇಡಿಕೆ ಈಡೇರದಿದ್ದಲ್ಲಿ , ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಹೋರಾಟವನ್ನು ಉಗ್ರಗೊಳಿಸಿ, ಸಚಿವರ ವಾಹನಗಳಿಗೆ ಹಾನಿ ಮಾಡಲಾಗುವುದು. ಒಕ್ಕೂಟದ ಸದಸ್ಯರು ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅದಕ್ಕೆ ಸರಕಾರವೇ ಹೊಣೆಯಾಗಬೇಕಾಗುತ್ತದೆ, ಪರಿಸ್ಥಿತಿಯ ತೀವ್ರತೆಯನ್ನು ಅರ್ಥ ಮಾಡಿಕೊಂಡು ಮುಖ್ಯ ಮಂತ್ರಿ ಎಸ್‌. ಎಂ. ಕೃಷ್ಣ ಒಕ್ಕೂಟದ ಅಧಿಕಾರಿಗಳನ್ನು ಮಾತುಕತೆಗೆ ಆಹ್ವಾನಿಸಬೇಕು ಎಂದು ಗೌಡರ್‌ ಹೇಳಿದರು.

English summary
Teachers to observe Independence Day as blackday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X