ತಲೈವಾ ರಜನಿಕಾಂತ್ ರನ್ನೇ ಮೋಡಿ ಮಾಡಿದ ಈ ಪೋರ ಯಾರು?!
ಚೆನ್ನೈ, ಜುಲೈ 18: ತಲೈವಾ ರಜನಿಕಾಂತ್ ಗೆ ಫ್ಯಾನ್ ಗಳೇನು ಕಡಿಮೆಯಾ? ತಮಿಳುನಾಡು, ಭಾರತವನ್ನು ಮೀರಿ ಅವರ ಅಭಿಮಾನಿ ಪ್ರಪಂಚ ಗಡಿಯಾಚೆಯ ದೇಶಗಳಿಗೂ ಪಸರಿಸಿದೆ. ಒಂದೇ ಒಂದು ಸಲ ರಜನಿ ಅವರನ್ನು ನೋಡಬೇಕು, ಅವರ ಆಟೋಗ್ರಾಫ್ ಪಡೆಯಬೇಕು ಎಂದೆಲ್ಲ ಕನಸು ಕಾಣುವವರು ಎಷ್ಟು ಜನರೋ!
ಆದರೆ ಇಷ್ಟೆಲ್ಲ ಅಭಿಮಾನಿಗಳನ್ನು ಹೊಂದಿರುವ ರಜನಿಕಾಂತ್ ಒಬ್ಬ ಪುಟ್ಟ ಬಾಲಕನ ಬಗ್ಗೆ ಅಪರಿಮಿತ ಅಭಿಮಾನ ಹೊಂದಿದ್ದಾರಂತೆ! ಇದ್ಯಾರಿದು ರಜನಿಕಾಂತ್ ಗೇ ಮೋಡಿ ಮಾಡಿದ ಹುಡುಗ ಎಂದು ಯೋಚಿಸುತ್ತಿದ್ದೀರಾ?
ತನಗೆ ರಸ್ತೆಯಲ್ಲಿ ಸಿಕ್ಕ ಪರ್ಸ್ ವೊಂದನ್ನು ಪ್ರಾಮಾಣಿಕವಾಗಿ ಪೊಲೀಸರಿಗೊಪ್ಪಿಸಿ, ಅದರಲ್ಲಿದ್ದ ಬಿಡಿಗಾಸನ್ನೂ ಮುಟ್ಟದ ಏಳು ವರ್ಷದ ಹುಡುಗನೊಬ್ಬನ ಕತೆ ಇದು. ಈ ಹುಡುಗನ ಪ್ರಾಮಾಣಿಕತೆಗೆ ಮಾರುಹೋಗಿ, ರಜನಿಕಾಂತ್ ಆತನನ್ನು ಭೇಟಿಯಾಗಿದ್ದಾರೆ. ಆತನ ಶಿಕ್ಷಣದ ಹೊಣೆ ಹೊತ್ತುಕೊಳ್ಳುವುದಾಗಿ ಹೇಳಿದ್ದಾರೆ.

ಯಾರು ಈ ಹುಡುಗ?
ಈ ಹುಡುಗನ ಹೆಸರು ಯಾಸಿನ್. ತಮಿಳುನಾಡಿನ ಎರೋಡ್ ಜಿಲ್ಲೆಯ ಚಿನ್ನಾ ಸೆಮು ಎಂಬಲ್ಲಿ ಎರಡನೇ ತರಗತಿ ಓದುತ್ತಿರುವ ಸುಮಾರು 7 ವರ್ಷ ವಯಸ್ಸಿನ ಈ ಹುಡುಗ, ಭ್ರಷ್ಟರೇ ತುಂಬಿದ ಈ ಯುಗದಲ್ಲೂ 'ಪ್ರಾಮಾಣಿಕತೆ'ಯ ಇರುವನ್ನು ತೋರಿಸಿಕೊಟ್ಟಿದ್ದಾನೆ. ಈತನಿಗೆ ತಾನು ಶಾಲೆಗೆ ಹೋಗುತ್ತಿದ್ದ ರಸ್ತೆಯಲ್ಲಿ ಒಂದು ಪರ್ಸ್ ಸಿಕ್ಕಿದೆ. ಯಾರೇ ಆದರೂ ಆ ಪರ್ಸನ್ನು ತೆಗೆದುಕೊಂಡು ತಂದೆಗೋ, ತಾಯಿಗೋ ನೀಡಿ ಆ ಹಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಈ ಹುಡುಗ ಆ ಪರ್ಸ್ ಅನ್ನು ನೇರವಾಗಿ ತಮ್ಮ ಶಾಲೆಯ ಪ್ರಿನ್ಸಿಪಲ್ ಗೆ ಕೊಟ್ಟಿದ್ದಾನೆ. ಆ ಪರ್ಸ್ ಅನ್ನು ಪ್ರಿನ್ಸಿಪಲ್ ಪೊಲೀಸರಿಗೆ ಒಪ್ಪಿಸಿದ್ದಾರೆ!

ಪರ್ಸಿನಲ್ಲಿತ್ತು 50,000 ರೂ.
ಆ ಪರ್ಸಿನಲ್ಲಿ ಬರೋಬ್ಬರಿ 50,000 ರೂ.ನಗದು ಹಣ ಮತ್ತು ಹಲವು ಮಹತ್ವದ ದಾಖಲೆಗಳು ಇದ್ದವು. ನಂತರ ಪೊಲೀಸರು ಈ ಪರ್ಸ್ ನಲ್ಲಿದ್ದ ಕೆಲವು ದಾಖಲೆಗಳ ಆಧಾರದ ಮೇಲೆ ಅದರ ವಾರಸುದಾರ ಯಾರು ಎಂಬುದನ್ನು ಪತ್ತೆ ಹಚ್ಚಿ ಅವರಿಗೆ ನೀಡಿದ್ದಾರೆ.

ಬಾಲಕನನ್ನು ಭೇಟಿಯಾದ ರಜನಿಕಾಂತ್
ಈ ವಿಷಯ ಕೇಳುತ್ತಿದ್ದಂತೆಯೇ ತಮಿಳು ನಟ ರಜನಿಕಾಂತ್ ಆ ಹುಡುಗ ಮತ್ತು ಆತನ ಕುಟುಂಬವನ್ನು ಚೆನ್ನೈಯಲ್ಲಿ ಭೇಟಿಯಾಗಿದ್ದಾರೆ. ಆ ಹುಡುಗನ ಬೆನ್ನು ತಟ್ಟಿ, ಆತನ ಪ್ರಾಮಾಣಿಕತೆಯನ್ನು ಹಾಡಿ ಹೊಗಳಿದ್ದಾರೆ. ಅಷ್ಟೇ ಅಲ್ಲ, ಆ ಹುಡುಗನ ಉನ್ನತ ಶಿಕ್ಷಣದ ಕರ್ಚು ವೆಚ್ಚಗಳನ್ನು ತಾವೇ ನೋಡಿಕೊಳ್ಳುವುದಾಗಿ ರಜನಿಕಾಂತ್ ಹೇಳಿದ್ದಾರೆ!

ಹುಡುಗನ ಪ್ರಾಮಾಣಿಕತೆಗೆ ತಲೈವಾ ಫಿದಾ!
"ಬಿಡಿಗಾಸಿಗಾಗಿ ಕೊಲೆಯೇ ನಡೆಯುವ ಕಾಲ ಇದು. ಅಂಥಾದ್ದರಲ್ಲಿ ಕಾಲಕೆಳಗೆ ಸುಲಭವಾಗಿ ಬಿದ್ದಿದ್ದ ಹಣವನ್ನೂ ಪ್ರಾಮಾಣಿಕವಾಗಿ ಪೊಲೀಸರಿಗೊಪ್ಪಿಸಿದ ಈ ಹುಡುಗನ ಪ್ರಾಮಾಣಿಕತೆ ನನಗೆ ನಿಜಕ್ಕೂ ಖುಷಿಕೊಟ್ಟಿತು. ಆತ ಎಲ್ಲರಿಗೂ ಸ್ಫೂರ್ತಿಯಾಗಲಿ. ಆತನ ಶಿಕ್ಷಣದ ಹೊಣೆ ನನ್ನದು" ಎಂದು ರಜನಿಕಾಂತ್ ಹೇಳಿದ್ದಾರೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications