ಈ ರಕ್ಷಾಬಂಧನಕ್ಕೆ ಕಳೆ ನೀಡಲಿದೆ ಅಂಧರು ಮಾಡಿದ ಸುಂದರ ರಾಖಿ
ಗಾಂಧಿನಗರ, ಜುಲೈ 28: ಅಣ್ಣ-ತಂಗಿಯರ ಬಂಧವನ್ನು ಗಟ್ಟಿಯಾಗಿಸುವ ರಾಖಿ ಹಬ್ಬ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ನಡೆಯುವ ಹಬ್ಬ ಈ ವರ್ಷ ಆಗಸ್ಟ್ 26 ರಂದು ಬಂದಿದೆ.
ಮಾರುಕಟ್ಟೆಗೆ ಈಗಾಗಲೇ ತರಹೇವಾರಿ ರಾಖಿಗಳು ಲಗ್ಗೆ ಇಟ್ಟಿವೆ. ಆದರೆ ಗುಜರಾತಿನ ಅಹ್ಮದಾಬಾದಿನಲ್ಲೊಂದು ಕಡೆ ತಯಾರಾಗುತ್ತಿರುವ ರಾಖಿ ವಿಶಿಷ್ಟವೆನ್ನಿಸಿದೆ. ಅದಕ್ಕೆ ಕಾರಣ ಈ ರಾಖಿಯನ್ನು ತಯಾರಿಸುತ್ತಿರುವವರು ಅಂಧರು!
ಅಹ್ಮದಾಬಾದಿನ ಅಂಧ್ ಕನ್ಯಾ ಪ್ರಕಾಶ ಗೃಹ ಎಂಬ ದೃಷ್ಟಿಹೀನ ಮಹಿಳೆಯರಿಗಾಗಿ ಇರುವ ಎನ್ ಜಿಒ ವೊಂದು ಪ್ರತಿವರ್ಷ ರಾಖಿ ತಯಾರಿಸಿ ದೇಶದೆಲ್ಲೆಡೆ ಹಂಚುತ್ತದೆ. ಕಣ್ಣೇ ಇಲ್ಲದಿದ್ದರೂ ಇವರು ತಯಾರಿಸುವ ಸುಂದರ ರಾಖಿಗೆ ದೇಶದೆಲ್ಲೆಡೆ ಬೇಡಿಕೆ ಇದೆ!

ಕಳೆದ 20 ವರ್ಷಗಳಿಂದ ಈ ಸಂಸ್ಥೆಯ ಯುವತಿಯರು ತಯಾರಿಸುವ ರಾಖಿಗೆ ವಿಶೇಷ ಸ್ಥಾನ ನೀಡಲಾಗಿದೆ. ಅಣ್ಣ-ತಂಗಿಯರ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ಈ ಪವಿತ್ರ ದಾರದಲ್ಲಿ ಈ ಅಂಧರು ತುಂಬುವ ಆಪ್ತ ಭಾವದಿಂದಾಗಿ ರಾಖಿ ಮಹತ್ವ ಪಡೆದಿದೆ.
Gujarat:Visually challenged women at Andh Kanya Prakash Gruh in Ahmedabad,who have been making rakhis on Raksha Bandhan every year for the last 20 years,say,"Although we can't see,we try to make sure thatour rakhis look beautiful&people like them.Our activity gives us happiness." pic.twitter.com/pXgfkLd4Yu
— ANI (@ANI) July 26, 2018
ಅಹ್ಮದಾಬಾದಿನ ಅಂಧ್ ಕನ್ಯಾ ಪ್ರಕಾಶ ಗೃಹವು 200 ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಶಿಕ್ಷಣ, ವಸತತಿ ಮತ್ತು ವೃತ್ತಿ ತರಬೇತಿ ನೀಡುತ್ತಿದೆ. ಪ್ರತಿ ವರ್ಷವೂ ರಾಖಿ ಹಬ್ಬಕ್ಕೂ ಎರಡು ಮೂರು ತಿಂಗಳು ಮೊದಲು ಪ್ರಕಾಶ ಗೃಹದಲ್ಲಿ ಸಂಭ್ರಮದ ವಾತಾವರಣ ಮೇಳೈಸುತ್ತದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications