ಝೆನ್ ಕಥೆ: ವಿಧೇಯತೆಯನ್ನು ತೋರಿಸಿದ ಗುರು
ಝೆನ್ ಗುರು ಬನ್ಕೆಯಿ ಪ್ರವಚನಕ್ಕೆ ಝೆನ್ ವಿದ್ಯಾರ್ಥಿಗಳಲ್ಲದೆ ಬೇರೆ ಬೇರೆ ವಿಚಾರ ಪಂಥಗಳ ಜನರೂ ಬರುತ್ತಿದ್ದರು. ಬನ್ಕೆಯಿ ಸೂತ್ರಗಳನ್ನು ಹೇಳುತ್ತಿರಲಿಲ್ಲ ಅಥವಾ ವಿದ್ವತ್ಪೂರ್ಣ ವ್ಯಾಖ್ಯಾನಗಳನ್ನು ಕೊಡುತ್ತಿರಲಿಲ್ಲ. ಕೇಳುಗರ ಹೃದಯಕ್ಕೆ ನೇರವಾಗಿ ನಾಟುವಂತಹ ಮಾತುಗಾರಿಕೆ ಆತನದು.
ಒಂದು ಸಭೆಯಲ್ಲಿ ನಿಕಿರನ್ ಪಂಥದ ಗುರು ಒಬ್ಬ ಅಹಂಕಾರದಿಂದ ಬನ್ಕೆಯಿಯನ್ನು ಸಂವಾದಕ್ಕೆ ಆಹ್ವಾನಿಸಿದ. 'ಝೆನ್ ಗುರು. ಇಲ್ಲಿ ಕೇಳು. ನಿನ್ನ ಮೇಲೆ ಗೌರವ ಹೊಂದಿರುವವರು ನೀನು ಹೇಳಿದಂತೆ ಕೇಳಿಕೊಂಡು ನಿನಗೆ ವಿಧೇಯರಾಗಿ ಇರುತ್ತಾರೆ. ಆದರೆ ನನ್ನಂಥವನು ನಿನ್ನನ್ನು ಎಂದಿಗೂ ಗೌರವಿಸುವುದಿಲ್ಲ. ನನ್ನನ್ನು ವಿಧೇಯನನ್ನಾಗಿ ಮಾಡಿಕೊಳ್ಳುವುದು ನಿನಗೆ ಸಾಧ್ಯವೇ?' ಎಂದು ಸವಾಲು ಹಾಕಿದ.
ಅದಕ್ಕೆ ಬನ್ಕೆಯಿ ತಾಳ್ಮೆಗೆಡಲಿಲ್ಲ. 'ಮೇಲೆ ಬಾ. ಬಂದು ನನ್ನ ಬಳಿ ನಿಂತುಕೋ. ನಿನಗೆ ತೋರಿಸಿಕೊಡುತ್ತೇನೆ' ಎಂದ.

ಸಭಿಕರ ನಡುವೆ ಕುಳಿತಿದ್ದ ಆ ವ್ಯಕ್ತಿ ಬೀಗುತ್ತಾ ಎದ್ದು ವೇದಿಕೆಯತ್ತ ನಡೆದ. ಬನ್ಕೆಯಿ ನಸುನಕ್ಕು, 'ಹೀಗೆ, ಇನ್ನೂ ಸ್ವಲ್ಪ ನನ್ನ ಎಡಬದಿಗೆ ಬಾ' ಎಂದ. ಆತ ಹೇಳಿದಂತೆ ಎಡಕ್ಕೆ ಬಂದು ನಿಂತ.
'ಇದು ಸಾಲದು. ನೀನು ಬಲ ಭಾಗಕ್ಕೆ ಬಂದರೆ ನಮ್ಮಿಬ್ಬರ ನಡುವೆ ಸಂಭಾಷಣೆ ನಡೆಸಲು ಸಹಾಯವಾಗುತ್ತದೆ. ಇನ್ನೊಂದು ಹೆಜ್ಜೆ ಮುಂದಕ್ಕೆ, ಬಲಕ್ಕೆ'. ವ್ಯಕ್ತಿ ಹಾಗೆಯೇ ಹೆಜ್ಜೆ ಇರಿಸಿದ.
'ಹಾಂ ಈಗ ಸರಿಯಾಯ್ತು ನೋಡು. ಈಗ ನೀನು ನಾನು ಹೇಳಿದಂತೆಯೇ ವಿಧೇಯತೆಯಿಂದ ನಡೆದುಕೊಂಡಿದ್ದೀಯ. ನೀನೊಬ್ಬ ಸಂಭಾವಿತ. ಇನ್ನು ಕುಳಿತು ಪ್ರವಚನ ಕೇಳಿಸಿಕೋ' ಎಂದ ಬನ್ಕೆಯಿ.(ಸಂಗ್ರಹ)
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ












Click it and Unblock the Notifications