Get Updates
Get notified of breaking news, exclusive insights, and must-see stories!

ನರಳುತಲಿರಲಿ ಈ ಜೀವ

Kannada poem by NG Prabhuprasad, Sringeri
ಬಾಗಿಲ ತೆಗೆದು ಹೊರದಬ್ಬಿದರೂ ಹೋಗಲೊಲ್ಲದು ಹಳೆಯ ನೆನಪು
ಮಲೆನಾಡ ಮಡಿಲಲ್ಲಿ ನಿನ್ನ ಮನದಂಗಳದಲ್ಲಿ ವಿಹರಿಸಬಯಸಿದ್ದ ನನ್ನ ಕನಸು
ನನಸಾಗಲಿಲ್ಲ ಕನಸಾಗಿಯೇ ಉಳಿಯಿತು ಮನದಾಳದಲಿ ಕೀವಾಗಿ ಬೆಳೆಯಿತು
ನನ್ನ ಮೈಮನಗಳನ್ನು ಅರ್ಬುದದಂತಾವರಿಸಿ ಸರ್ವಸ್ವವನ್ನೂ ಹೀರಿತು.

ಅದಕೆ ಬೇಸರಿಲ್ಲ ಕೊಲ್ಲುತಿರುವುದು ನಿನ್ನ ನೆನಪು ತಾನೆ, ನೋವಿನಲ್ಲೂ
ಮಧುರ ಯಾತನೆಯಿದೆ; ಹೀಗೆಯೇ ಕೊನೆಯುಸಿರಿನವರೆಗೂ ಇರಲಿ
ದೇಹದ ಕಣಕಣವನ್ನೂ ಆವರಿಸಿ ನೋವನ್ನು ಹಿಗ್ಗಿಸಿ ವಿಸ್ತರಿಸುತಿರಲಿ
ಜಗ ನಗಲಿ ಎನಗೆ ಮರುಳೆಂದು, ಬೇಸರವಿಲ್ಲ ಕೊನೆಗೆ ಪ್ರೀತಿ ಗೆಲ್ಲಲಿ ಸಾವಿನಲೂ.

ಪ್ರತಿಭೆಯ ಕನ್ನಡಿಗೆ ಧೂಳಾವರಿಸಿತು ಸ್ನೇಹಿತರ ಒಲುಮೆ ದೂರಾಯಿತು
ಬದುಕಬೇಕೆಂಬಾಸೆಯೇ ನೀನಿಲ್ಲದೇ ಹೊರಟುಹೋಯಿತು
ಆದರಿಸುತಿದ್ದ ಜನಗಳೇ ಭಾವನೆಗಳಿಲ್ಲದ ಕಲ್ಲೆಂದು ನನ್ನ ತಳ್ಳಿಹಾಕಿದರು
ಇದಾವುದಕ್ಕೂನೀ ಕಾರಣವೆಂದು ಹಳಿಯುವ ಕೀಳುಬಯಕೆ ನನಗಿಲ್ಲ.

ಈ ಜನ್ಮದಲ್ಲಿ ನೀ ನನಗೆ ಲಭಿಸಲಾರೆಯೆಂಬುದು ಖಾತ್ರಿಯಾಗಿದೆ
ಹೀಗೆಯೇ ಹಗಲುಗನಸು ಕಾಣುತ್ತಾ ಮಣ್ಣ ಸೇರಲಿ ಈ ದೇಹ
ಭಗವಂತನ ಸಂತೆಯ ಈ ಲೋಕದಲ್ಲಿ ನಾನೊಬ್ಬ ಮಾರಾಟವಾಗದ ಸರಕು
ಉಸಿರಿರುವವರೆಗೂ ಇರಲಿ ಈ ವೇದನೆ, ತಳ್ಳಲಾರೆ ನೆನಪುಗಳನೀಗ ನಾ ಮನಸಾರೆ!

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+