ನರಳುತಲಿರಲಿ ಈ ಜೀವ

ಮಲೆನಾಡ ಮಡಿಲಲ್ಲಿ ನಿನ್ನ ಮನದಂಗಳದಲ್ಲಿ ವಿಹರಿಸಬಯಸಿದ್ದ ನನ್ನ ಕನಸು
ನನಸಾಗಲಿಲ್ಲ ಕನಸಾಗಿಯೇ ಉಳಿಯಿತು ಮನದಾಳದಲಿ ಕೀವಾಗಿ ಬೆಳೆಯಿತು
ನನ್ನ ಮೈಮನಗಳನ್ನು ಅರ್ಬುದದಂತಾವರಿಸಿ ಸರ್ವಸ್ವವನ್ನೂ ಹೀರಿತು.
ಅದಕೆ ಬೇಸರಿಲ್ಲ ಕೊಲ್ಲುತಿರುವುದು ನಿನ್ನ ನೆನಪು ತಾನೆ, ನೋವಿನಲ್ಲೂ
ಮಧುರ ಯಾತನೆಯಿದೆ; ಹೀಗೆಯೇ ಕೊನೆಯುಸಿರಿನವರೆಗೂ ಇರಲಿ
ದೇಹದ ಕಣಕಣವನ್ನೂ ಆವರಿಸಿ ನೋವನ್ನು ಹಿಗ್ಗಿಸಿ ವಿಸ್ತರಿಸುತಿರಲಿ
ಜಗ ನಗಲಿ ಎನಗೆ ಮರುಳೆಂದು, ಬೇಸರವಿಲ್ಲ ಕೊನೆಗೆ ಪ್ರೀತಿ ಗೆಲ್ಲಲಿ ಸಾವಿನಲೂ.
ಪ್ರತಿಭೆಯ ಕನ್ನಡಿಗೆ ಧೂಳಾವರಿಸಿತು ಸ್ನೇಹಿತರ ಒಲುಮೆ ದೂರಾಯಿತು
ಬದುಕಬೇಕೆಂಬಾಸೆಯೇ ನೀನಿಲ್ಲದೇ ಹೊರಟುಹೋಯಿತು
ಆದರಿಸುತಿದ್ದ ಜನಗಳೇ ಭಾವನೆಗಳಿಲ್ಲದ ಕಲ್ಲೆಂದು ನನ್ನ ತಳ್ಳಿಹಾಕಿದರು
ಇದಾವುದಕ್ಕೂನೀ ಕಾರಣವೆಂದು ಹಳಿಯುವ ಕೀಳುಬಯಕೆ ನನಗಿಲ್ಲ.
ಈ ಜನ್ಮದಲ್ಲಿ ನೀ ನನಗೆ ಲಭಿಸಲಾರೆಯೆಂಬುದು ಖಾತ್ರಿಯಾಗಿದೆ
ಹೀಗೆಯೇ ಹಗಲುಗನಸು ಕಾಣುತ್ತಾ ಮಣ್ಣ ಸೇರಲಿ ಈ ದೇಹ
ಭಗವಂತನ ಸಂತೆಯ ಈ ಲೋಕದಲ್ಲಿ ನಾನೊಬ್ಬ ಮಾರಾಟವಾಗದ ಸರಕು
ಉಸಿರಿರುವವರೆಗೂ ಇರಲಿ ಈ ವೇದನೆ, ತಳ್ಳಲಾರೆ ನೆನಪುಗಳನೀಗ ನಾ ಮನಸಾರೆ!
More From
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications