ಕವಿಯಾಬ್ಬ ಬೆಸ್ತ
- ಚಿಂತಾಮಣಿ ಕೊಡ್ಲೆಕೆರೆ
ಅವನ ಕಣ್ಣೆದುರಲ್ಲೆ
ಸೂರ್ಯೋದಯ
ಸೂರ್ಯಾಸ್ತ
ಕಾಲದ ನದಿಯ ನೀರಿಗೆ
ಅವನ ಕೈ-ಕಮಂಡಲ
ಅಲ್ಲಿ ಪ್ರತಿಫಲಿಸುವವು ಚಂದ್ರ
ತಾರೆ
ಆಗಸಕೂ ಭೂಮಿಗೂ
ಇಲ್ಲಿಯೇ ಮೇರೆ
ಬಲೆ-
ಬೀಸುವುದೂ ಒಂದು ಕಲೆ
ಎನ್ನುವನು ಕವಿ
ಅವನಿಗೆ
ಪರ್ವತಗಳೆ ಕಿವಿ
ಹಕ್ಕಿಗಳು ಅವನ ಕೊರಳು
ಗಿಡಗಳು ಅವನ ಬೆರಳು
ಈ ನದಿ ಅವನ ಹೃದಯ
ಆಕಾಶ ಅವನ ಬಟ್ಟೆ
ಈ ಅನಾದಿ ಲೋಕದಲ್ಲಿ
ಕವಿಯಾಂದು ಚಿಟ್ಟೆ
ಹಕ್ಕಿ
ನದಿ
ಗಿಡ
ಪರ್ವತ
ಹಾಗೂ
ಕಾಲದ ನದಿಯ ತೀರದಲ್ಲಿ
ಮೂಡು ಗಾಳಿಗೆ ತನ್ನ ಬಲೆಯ ಹಿಡಿಯುವುದೊಂದೆ
ಅವನ ಪುರುಷಾರ್ಥ
ಹಾಗೂ
ಇದ್ದೀತು ಅದೇ
ಅವನ ಬದುಕಿನ ಅರ್ಥ.












Click it and Unblock the Notifications