ಕವಿ, ಸಾಹಿತಿ ಡಾ.ಸಿದ್ದಲಿಂಗಯ್ಯ ಅವರ ಬದುಕಿನ ಹಿನ್ನೋಟ
ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದ ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ಅವರು ಇಹಲೋಕ ಯಾತ್ರೆ ಮುಗಿಸಿದ್ದಾರೆ.
ಕೊರೊನಾವೈರಸ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಾ.ಸಿದ್ದಲಿಂಗಯ್ಯ(67) ಚಿಕಿತ್ಸೆ ಫಲಕಾರಿಯಾಗದೆ ಜೂನ್ 11, 2021ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯ ಲೋಕದ ಕೊಂಡಿಯೊಂದು ಕಳಚಿದಂತೆ ಆಗಿದೆ.
ದಲಿತ ಕವಿ ಡಾ. ಸಿದ್ದಲಿಂಗಯ್ಯ ನಿಧನ
ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ ಬರೀ ಚಲನಚಿತ್ರ ಗೀತೆಯಾಗಿ ಉಳಿಯಲಿಲ್ಲ, ಜಾನಪದದಂತೆ ಎಲ್ಲರನ್ನು ತಲುಪಿತು. ದಲಿತ ಸಮುದಾಯದಲ್ಲಿ ಸ್ವಾಭಿಮಾನದ ಕಿಡಿ ಹಚ್ಚಿದ ಅವರು, ರಾಜ್ಯದ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ದಲಿತ ಚಳವಳಿಗೆ ಹೊಸ, ಸಂಚಲನ ನೀಡಿದ್ದ ಅಪರೂಪದ ಸಾಹಿತಿ, ಸದಾಕಾಲ ಸಾಮಾಜಿಕ ಸಮಾನತೆಯ ಹೋರಾಟದಲ್ಲಿ ತೊಡಗಿಕೊಂಡವರು.
ಸಾಹಿತಿ ಡಾ.ಸಿದ್ದಲಿಂಗಯ್ಯ ಬದುಕಿನ ಹಿನ್ನೋಟ
'ದಲಿತ ಕವಿ' ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿದ್ದರು.
ಜನನ, ಜೀವನ
ಸಿದ್ಧಲಿಂಗಯ್ಯನವರು ಬೆಂಗಳೂರು ಗ್ರಾಮಾಂತರ ಜಿಲ್ಲೆ 'ಮಾಗಡಿ' ತಾಲ್ಲೋಕಿನ 'ಮಂಚನಬೆಲೆ' ಗ್ರಾಮದಲ್ಲಿ 1954ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ. ಮಲ್ಲೇಶ್ವರಂನ ಸರ್ಕಾರಿ ಪ್ರೌಢಶಾಲೆ ಇವರ ವಿದ್ಯಾಕೇಂದ್ರವಾಗಿತ್ತು. ಆ ವೇಳೆಗಾಗಲೇ ಕವಿತೆ ಬರೆವ ಅಭ್ಯಾಸ ಬೆಳೆಸಿಕೊಂಡಿದ್ದರು, ವಿದ್ಯಾರ್ಥಿ ದೆಸೆಯಲ್ಲಿಯೇ ಉತ್ತಮ ಭಾಷಣಕಾರರಾಗಿದ್ದರು. ಅಂಬೇಡ್ಕರ್, ಪೆರಿಯಾರ್, ವಸುದೇವಭೂಪಾಲ, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು.
ಕೃತಿಗಳು
ಪಿ.ಎಚ್
ಡಿ
ಸಂಶೋಧನಾ
ಪ್ರಬಂಧ
-
ಗ್ರಾಮ
ದೇವತೆಗಳು,
1997
ಕವನ ಸಂಕಲನಗಳು
*
ಹೊಲೆ
ಮಾದಿಗರ
ಹಾಡು,
1975
*
ಮೆರವಣಿಗೆ,
2000
*
ಸಾವಿರಾರು
ನದಿಗಳು,
1979
*
ಕಪ್ಪು
ಕಾಡಿನ
ಹಾಡು,
1983
*
ಆಯ್ದಕವಿತೆಗಳು,
1997
*
ಅಲ್ಲೆಕುಂತವರೆ
*
ನನ್ನ
ಜನಗಳು
ಮತ್ತು
ಇತರ
ಕವಿತೆಗಳು,
2005
*
ಸಮಕಾಲೀನ
ಕನ್ನಡ
ಕವಿತೆ
ಭಾಗ-3,
4
(ಸಂಪಾದನೆ
ಇತರರೊಂದಿಗೆ),
2003
ವಿಮರ್ಶನಾ ಕೃತಿಗಳು
*ಹಕ್ಕಿ
ನೋಟ,
1991
*
ರಸಗಳಿಗೆಗಳು
*
ಎಡಬಲ
*
ಉರಿಕಂಡಾಯ,
2009
ಲೇಖನಗಳ ಸಂಕಲನ
*
ಅವತಾರಗಳು,
1991
*
ಸದನದಲ್ಲಿ
ಸಿದ್ದಲಿಂಗಯ್ಯ
ಭಾಗ
-1,
1996
*
ಸದನದಲ್ಲಿ
ಸಿದ್ದಲಿಂಗಯ್ಯ
ಭಾಗ
-2,
2004
*
ಜನಸಂಸ್ಕೃತಿ,
2007
ನಾಟಕಗಳು
*
ಏಕಲವ್ಯ,
1986
*
ನೆಲಸಮ,
1980
*
ಪಂಚಮ,
1980
"
ಆತ್ಮಕಥೆ
ಊರುಕೇರಿ-
ಭಾಗ-1,
1997
ಊರುಕೇರಿ-
ಭಾಗ-2,
2006
ಗೌರವ, ಪ್ರಶಸ್ತಿಗಳು
*
ಉತ್ತಮ
ಚಲನಚಿತ್ರಗೀತ
ರಚನೆಗಾಗಿ
ಕರ್ನಾಟಕ
ಸರ್ಕಾರ
ಪ್ರಶಸ್ತಿ-1984
ರಾಜ್ಯೋತ್ಸವ
ಪ್ರಶಸ್ತಿ
-ಕರ್ನಾಟಕ
ಸರ್ಕಾರ-1986
ಡಾ.ಅಂಬೇಡ್ಕರ್
ಶತಮಾನೋತ್ಸವ
ವಿಶೇಷ
ಪ್ರಶಸ್ತಿ
-1992
ಕರ್ನಾಟಕ
ಸಾಹಿತ್ಯ
ಅಕಾಡೆಮಿ
ಗೌರವ
ಪ್ರಶಸ್ತಿ
-1996
ಜಾನಪದ
ತಜ್ಞ
ಪ್ರಶಸ್ತಿ
-2001
2
ಬಾರಿ
ಕರ್ನಾಟಕ
ರಾಜ್ಯ
ವಿಧಾನ
ಪರಿಷತ್
ಸದಸ್ಯ.
ಸಂದೇಶ್
ಪ್ರಶಸ್ತಿ
-2001
ಡಾ.ಅಂಬೇಡ್ಕರ್
ಪ್ರಶಸ್ತಿ
-2002
ಸತ್ಯಕಾಮ
ಪ್ರತಿಷ್ಠಾನ
ಪ್ರಶಸ್ತಿ
-2002
ಬಾಬುಜಗಜೀವನರಾಮ್
ಪ್ರಶಸ್ತಿ
-2005
ನಾಡೋಜ
ಪ್ರಶಸ್ತಿ
-2007
ಪ್ರೆಸಿಡೆನ್ಸಿ
ಇನ್ಷಿಟ್ಯೂಷನ್
ಪ್ರಶಸ್ತಿ
-2012
ಆಳ್ವಾಸ್
ನುಡಿಸಿರಿ
ಪ್ರಶಸ್ತಿ
-2012
ಶ್ರವಣಬೆಳಗೊಳದಲ್ಲಿ
ನಡೆದ
81ನೇ
ಕನ್ನಡ
ಸಾಹಿತ್ಯ
ಸಮ್ಮೇಳನದ
ಅಧ್ಯಕ್ಷರು.
ನೃಪತುಂಗ
ಪ್ರಶಸ್ತಿ
-2018
ಪಂಪ
ಪ್ರಶಸ್ತಿ
-
2019
(ಮಾಹಿತಿ
ಕೃಪೆ:
ವಿಕಿಪೀಡಿಯಾ)