ಅದೃಷ್ಟವೇ ಕೇರ್ ಮಾಡದ ಕೇರಂ ಚಾಂಪಿಯನ್

ಲೇಖಕ : ಪ್ರಸಾದ ನಾಯಿಕ
ಹೌದು. ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಂದೇ ಒಂದು ಬಾರಿಯೂ ಪ್ಯಾಡ್ ಕಟ್ಟಿಕೊಳ್ಳದ, ಗ್ಲೌಸ್ ಧರಿಸಿಕೊಳ್ಳದ, ಅಸಲಿಗೆ ಬ್ಯಾಟೇ ಹಿಡಿಯದ, ಬೌಲಿಂಗ್ ಕೈಯನ್ನು ತಿರುಗಿಸದ ಆಟಗಾರ ಕೋಟ್ಯಾಧಿಪತಿಯಾಗಬಲ್ಲ. ಇದಕ್ಕೆ ಪಾರ್ಥಿವ್ ಪಟೇಲ್ ಜ್ವಲಂತ ಸಾಕ್ಷಿ. ಪೆವಿಲಿಯನ್ನಿನ ಬೆಂಚು ಸವಿಸಿಸವಿಸಿಯೇ ವಿಶ್ವಕಪ್ನಲ್ಲಿ ಕೋಟಿಕೋಟಿ ಹಣ ಜೇಬಿಗಿಳಿಸಿ ವಾಪಸು ಬಂದ. ಬೆಂಚು ಸವೆಸುವುದಿರಲಿ ವಿಶ್ವದ ಕಲಿಗಳನ್ನು ಬೆರಳಿನ ಚಾಕಚಕ್ಯತೆಯಿಂದಲೇ ಪಾಪರು ಮಾಡಿ ಎರಡು ಬಾರಿ (2000ರಲ್ಲಿ ದೆಹಲಿಯಲ್ಲಿ ಮತ್ತು 2004ರಲ್ಲಿ ಶ್ರೀಲಂಕಾದಲ್ಲಿ) ವಿಶ್ವಕಪ್ ಮುಡಿಗೇರಿಸಿಕೊಂಡ ಕೇರಂ ಧೀರನ ಕಿಸೆ ತುಂಬಿದ್ದು ಕವಡೆ ಕಾಸು! ಕ್ರಿಕೆಟ್ ಬೆಟ್ಟಿಂಗ್ನಲ್ಲಿ ದೇಶದ ಮಾನ ಕಳೆದ ಆಟಗಾರನಿಗೆ ಕೇಳಿದಷ್ಟು ಜಾಗ ನೀಡುವ ನಮ್ಮ ಕರ್ನಾಟಕ ಸರ್ಕಾರ ಇಲ್ಲಿಯವರೆಗೆ ಈ ಕೇರಂಕಲಿಗೆ ಅಡಿಯಷ್ಟು ಜಾಗವನ್ನೂ ನೀಡಿಲ್ಲ. ಜಾಗಕ್ಕಾಗಿ ಇಟ್ಟ ಬೇಡಿಕೆಯೂ ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಜಾಗ ಹೋಗಲಿ, ಒಂದು ಪುಟ್ಟ ಸನ್ಮಾನ ಮಾಡಿ ಪ್ರೋತ್ಸಾಹದಾಯಕವಾಗಿ ಹಣವನ್ನೂ ನೀಡಿಲ್ಲ.
ಈ ಕೇರಂಪಟು ಮೂವತ್ತೆರಡರ ಹರೆಯದ ಆರ್.ಎಮ್. ಶಂಕರ್, ಬೆಂಗಳೂರಿನ ಕಣ್ಮಣಿಯಂತಿರುವ ಕಲಾಸಿಪಾಳ್ಯದ ಸಾಲೋಸಾಲು ಟೈರಂಗಡಿ, ತರಕಾರಿ ಮಾರುಕಟ್ಟೆಯ ನಡುವೆ ತಿರುವು ಮುರುವಿನಲ್ಲಿ ಒಂಟಿಕೋಣೆಯ ಪುಟ್ಟ ಮನೆದಲ್ಲಿ ಸಂಸಾರ ಹೂಡಿದ್ದಾರೆ. ಹೆಂಡತಿಯ ಜೊತೆ ಕೇರಂ ಆಟವನ್ನು ಪ್ರೋತ್ಸಾಹಿಸಿದ ಅಣ್ಣ, ಮತ್ತೊಬ್ಬಣ್ಣ, ಆತನ ಹೆಂಡತಿ ಮಕ್ಕಳು ಸೇರಿ ಭರ್ತಿ ಎಂಟು ಜನ ಆ ಮನೆಯಲ್ಲಿ ವಾಸವಾಗಿದ್ದಾರೆ. ಶಂಕರ್ ಅವರನ್ನು ಕೈಹಿಡಿದು ಪ್ರೋತ್ಸಾಹಿಸಿ, ಪೋಷಿಸುತ್ತಿರುವ ಭಾರತೀಯ ಕೇರಂ ಸಂಸ್ಥೆಯೂ ಶಂಕರ್ ಅವರ ಕೈಬಿಟ್ಟಿದ್ದರೆ ಶಂಕರ್ ಬದುಕು ಮೂರಾ'ಬುಟ್ಟಿ'ಯಾಗಿರುತ್ತಿತ್ತು. ಕುಟುಂಬದ ಸದಸ್ಯರು ತಲೆತಲಾಂತರದಿಂದ ನಡೆಸಿಕೊಂಡು ಬರುತ್ತಿರುವ ಬುಟ್ಟಿ ಹೆಣೆಯುವ, ಮಾರುವ ಕಾಯಕ ಮಾಡುತ್ತಿದ್ದಾರೆ. ಶಂಕರ್ ಮಾತ್ರ ಸರ್ಕಾರ ಸಹಾಯ ಮಾಡಲಿ ಬಿಡಲಿ ಕೇರಂ ಚಾಂಪಿಯನ್ನರನ್ನು ಬೆಳೆಸುವ ಕಾಯಕದಲ್ಲಿ ಸೈಲೆಂಟಾಗಿ ತಲ್ಲೀನರಾಗಿದ್ದಾರೆ, ಯಾವುದೇ ಪ್ರತಿಫಲಾಕ್ಷೆಯಿಲ್ಲದೆ!
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications