ಸೌಂದರ್ಯ ಸ್ಪರ್ಧೆಯಲ್ಲಿ ಭಾರತಕ್ಕೆ ಅಗ್ರ ತಾಂಬೂಲ?

ನವಂಬರ್ 30 ರಂದು ಲಂಡನ್ನಿನ ಮಿಲೆನಿಯಂ ಗುಮ್ಮಟದಲ್ಲಿ ನಡೆಯುವ ವಿಶ್ವ ಸುಂದರಿ ಸ್ಪರ್ಧೆಯ ಫೈನಲ್ಸ್ ಹತ್ತಿರವಾಗುತ್ತಿದ್ದಂತೆ, ಪ್ರಿಯಾಂಕ ಬುಕ್ಕಿಗಳ ಪಾಲಿನ ಹಾಟ್ ಫೇವರಿಟ್ ಆಗಿದ್ದಾರೆ. ಭಾರತ ಸುಂದರಿಗೆ ಪ್ರಮುಖ ಎದುರಾಳಿಗಳು ಎಂದು ಭಾವಿಸಿರುವ ದಕ್ಷಿಣ ಆಫ್ರಿಕಾ ಮತ್ತು ಬ್ರಿಟನ್ನಿನ ಸುಂದರಿಯರಿಗಿಂತ ಪ್ರಿಯಾಂಕ ಸಾಕಷ್ಟು ಮುಂದಿದ್ದಾರೆ ಎಂದು ವಿಶ್ವದ ಪ್ರಸಿದ್ಧ ಪಣ ಲೆಕ್ಕಿಗನಾದ ಲ್ಯಾಡ್ಬ್ರೋಕ್ಸ್ ಅನುಭವದ ಮಾತಾಡುತ್ತಾರೆ.
ಇತ್ತೀಚಿನ ವರ್ಷಗಳ ಸೌಂದರ್ಯ ಸ್ಪರ್ಧೆಗಳಲ್ಲಿ ಭಾರತದ ಸುಂದರಿಯರು ಗಣನೀಯ ಸಾಧನೆ ಮೆರೆದಿರುವುದನ್ನು ಬ್ರೋಕ್ಸ್ ಅವರ ವಕ್ತಾರ ಸಿಯೆನ್ ಬೊಯ್ಸ ಎತ್ತಿ ತೋರಿಸುತ್ತಾರೆ. ಈ ವರ್ಷದ ಸ್ಪರ್ಧಿಯೂ ಅತ್ಯಂತ ಬಲಿಷ್ಠಳು ಎನ್ನುವ ಬೊಯ್ಸ, ಸೌಂದರ್ಯ ಕಿರೀಟ ಈ ಬಾರಿಯೂ ಭಾರತಕ್ಕೇ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ.
ಫೆಮಿನಾ ಭಾರತ ಸುಂದರಿ ಸ್ಪರ್ಧೆಯಲ್ಲಿ ಮೊದಲ ರನ್ನರಪ್ ಪ್ರಶಸ್ತಿ ಗಳಿಸಿರುವ ಪ್ರಿಯಾಂಕ, ಈಗ ವಿಶ್ವ ಸುಂದರಿ ಮುಕುಟದ ಸಮೀಪ ನಿಂತಿದ್ದಾರೆ. ನಿರೀಕ್ಷಿಸಿದಂತೆ ಪ್ರಶಸ್ತಿ ಅವರ ಮಡಿಲಿಗೆ ಬಿದ್ದರೆ, ಪ್ರಸಕ್ತ ಸಾಲಿನಲ್ಲಿ ವಿಶ್ವ ಸುಂದರಿ ಹಾಗೂ ಭುವನ ಸುಂದರಿ ಎರಡೂ ಪ್ರಶಸ್ತಿಗಳನ್ನು ಗೆದ್ದ ಡಬ್ಬಲ್ ಸಾಧನೆ ಭಾರತದ್ದಾಗುತ್ತದೆ. ಆರು ವರ್ಷಗಳ ಹಿಂದೆ ಸುಶ್ಮಿತಾ ಸೇನ್ ಹಾಗೂ ಐಶ್ವರ್ಯಾ ರೈ ಅವರು ಭಾರತಕ್ಕೆ ಡಬ್ಬಲ್ ಗೌರವ ಗಳಿಸಿಕೊಟ್ಟಿದ್ದರು.
ಪ್ರಿಯಾಂಕ ಕೂಡ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ತೋರುವ ವಿಶ್ವಾಸ ಹೊಂದಿದ್ದಾರೆ. ಭುವನ ಸುಂದರಿ ಸ್ಪರ್ಧೆಯಲ್ಲಿ ಲಾರಾದತ್ತ ವಿಜೇತಳಾಗಿರುವ ನೆನಪು ಜನಮನದಲ್ಲಿ ಹಸಿರಾಗಿರುವುದರಿಂದ ಸ್ಪರ್ಧೆಯಲ್ಲಿ ನನ್ನ ಮೇಲೆ ಅತೀವ ಒತ್ತಡವಿದೆ, ಜನತೆ ನನ್ನಿಂದಲೂ ಅದೇ ಸಾಧನೆ ನಿರೀಕ್ಷಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಸಾಲಿನ ವಿಶ್ವಸುಂದರಿ ಸ್ಪರ್ಧೆಯಲ್ಲಿ 96 ರಾಷ್ಟ್ರಗಳ ಚೆಲುವೆಯರು ಭಾಗವಹಿಸುತ್ತಿದ್ದಾರೆ. ಮಾಲ್ಡೀವ್ಸ್ ದ್ವೀಪದ ಬೊಂಡೋಸ್ನಲ್ಲಿ ಶನಿವಾರ(ನ.11) ನಡೆದ ಈಜುಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿರುವ ಸ್ಪರ್ಧಿಗಳು, ಬುಧವಾರ ಲಂಡನ್ನ ಮಿಲೆನಿಯಂ ಗುಮ್ಮಟಕ್ಕೆ ಆಗಮಿಸಲಿದ್ದಾರೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications