ಮಹದಾಯಿ ಯೋಜನೆಗೆ ಚಾಲನೆ ಸಿಕ್ಕಿದ್ದು ಹೇಗೆ?
ಈ ನಡುವೆ 1975-78ರ ನಡುವೆ ಗುಳೇದಗುಡ್ದದಿಂದ ಶಾಸಕರಾಗಿದ್ದ ಬಿಎಂ ಹೊರಕೇರಿಯವರು ಬಾಳೆಕುಂದ್ರಿಯವರ ಜೊತೆಗೂಡಿ ಮಲಪ್ರಭಾ ಅಣೆಕಟ್ಟೆ ತುಂಬಲು ಈಗಿರುವ ನೀರು ಸಾಲದು, ಇದಕ್ಕೆ ಪಶ್ಚಿಮಘಟ್ಟದ ಮಹದಾಯಿ ನದಿಯ ನೀರಿನಿಂದ ಸಾಮಾನ್ಯ ಕೊರತೆಯನ್ನು ತುಂಬುವಷ್ಟು ನೀರನ್ನು ಮಲಪ್ರಭೆಗೆ ಹರಿಸಬೇಕು ಎನ್ನುವ ಯೋಜನೆಯನ್ನು ಮೊದಲ ಬಾರಿಗೆ ರೂಪಿಸಿ, ಫೆಬ್ರವರಿ 1976ರಲ್ಲಿ ವಿಧಾನ ಮಂಡಲದಲ್ಲಿ ಪ್ರಸ್ತಾಪ ಮಂಡಿಸಿದರು. ವಿರೋಧ ಪಕ್ಷದ ನಾಯಕರಾಗಿದ್ದ ಎಸ್.ಆರ್. ಬೊಮ್ಮಾಯಿ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಯ್ತು. ಈ ಸಮಿತಿಯು ಮಹದಾಯಿ ನದಿಯಿಂದ ನೀರನ್ನು ಮಲಪ್ರಭೆಗೆ ಸೇರಿಸುವ ಯೋಜನೆಯನ್ನು ಮಂಡಿಸಿತು.
1989ರಲ್ಲಿ ಎಸ್.ಆರ್ ಬೊಮ್ಮಯಿಯವರು ಮುಖ್ಯಮಂತ್ರಿಗಳಾದ ನಂತರ ಯೋಜನೆಗೆ ಚಾಲನೆ ಸಿಕ್ಕಿತು. ಬೆಳಗಾವಿ ಜಿಲ್ಲೆಯ ಖಾನಾಪುರದ ಸಮೀಪದ ದೇವಗಾಂವ್ ಎಂಬಲ್ಲಿ ಹುಟ್ಟುವ ಮಹದಾಯಿ ನದಿಯು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾಗಳಲ್ಲಿ ಹರಿದು ಅರಬ್ಬಿ ಸಮುದ್ರವನ್ನು ಸೇರುತ್ತದೆ. ಕೇಂದ್ರೀಯ ನೀರು ಆಯೋಗ ಈ ನದಿಯಲ್ಲಿ ಸುಮಾರು 180ರಿಂದ 220 ಟಿಎಂಸಿ ನೀರಿದ್ದು ನದಿಪಾತ್ರದ ಹರವು (ಜಲಾನಯನ ಪ್ರದೇಶ: ಕರ್ನಾಟಕ - 375 ಚ.ಕಿ.ಮೀ, ಮಹಾರಾಷ್ಟ್ರ - 77 ಚ.ಕಿ,ಮೀ. ಗೋವಾ - 1580 ಚ.ಕಿ.ಮೀ).

ಮಹದಾಯಿ ನದಿಗೆ ಹಲವಾರು ತೊರೆಗಳು, ಉಪನದಿಗಳಿವೆ. ಸರಳಾ ನದಿ, ಬಂಡೂರ, ಕೊಟ್ಟೆ, ಬಯಲುನಾಡು, ಬಂಡೂರಾ ನಾಲೆ, ಕಾರಂಜೋಳ ಇವುಗಳು ಪ್ರಮುಖವಾದವುಗಳು, ನದಿಗೆ ಸೇರುವ ನೀರಿನ ಲೆಕ್ಕದಂತೆ ಕರ್ನಾಟಕದ ಪಾಲು ಸುಮಾರು 47 ಟಿಎಂಸಿಯಷ್ಟಿದೆ.
ಕರ್ನಾಟಕದ ಮಲಪ್ರಭೆಗೆ ನದಿನೀರು ಹರಿಯುವಂತೆ ಮಾಡುವುದು ಮತ್ತು ಇದಕ್ಕಾಗಿ ಅಣೆಕಟ್ಟನ್ನು ಕಟ್ಟುವುದು ಎಂದು ಯೋಜಿಸಿತು. ಆ ಮೂಲಕ ವಿದ್ಯುತ್ ಉತ್ಪಾದಿಸಿ, ಸದರಿ ವಿದ್ಯುತ್ತನ್ನು ಗೋವೆಗೆ ಕೊಡುವುದೆಂದೂ ನೀರನ್ನು ಮಲಪ್ರಭೆಗೆ ಹರಿಸುವುದೆಂದೂ ಯೋಜನೆ ಮಾಡಿಕೊಂಡು, ಗೋವಾದ ಮುಖ್ಯಮಂತ್ರಿಯಾಗಿದ್ದ ಪ್ರತಾಪ್ ಸಿಂಗ್ ರಾಣೆಯವರ ಸರ್ಕಾರದ ಜೊತೆಯಲ್ಲಿ ಒಪ್ಪಂದಕ್ಕೂ ಸಹಿ ಹಾಕಲಾಯಿತು. ದುರದೃಷ್ಟವಶಾತ್ ರಾಷ್ಟ್ರಪತಿಗಳ ಆಳ್ವಿಕೆ ಹೇರಲ್ಪಟ್ಟು ಬೊಮ್ಮಾಯಿಯವರ ಸರ್ಕಾರ ಬಿದ್ದುಹೋದದ್ದು ಇಡೀ ಯೋಜನೆ ನೆನೆಗುದಿಗೆ ಬೀಳಲು ಕಾರಣವಾಯ್ತು.
-
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications