ಯಾವ ಮೋಹನ ಮುರಳಿ ಕರೆಯಿತು ದೂರ ತೀರಕೆ ನಿನ್ನನು..
*ವಿಶಾಖ ಎನ್.
1980ರ ದಶಕದ ಆದಿಯಲ್ಲಿ ಸುಗಮ ಸಂಗೀತ ಕ್ಷೇತ್ರ ಗರಿ ಗೆದರಿತು. ಪಿ.ಕಾಳಿಂಗ ರಾವ್ ಗೀತೆಗಳ ನಂತರ ಬಿಕೋ ಎನ್ನುತ್ತಿದ್ದ ಲೈಟ್ ಮ್ಯೂಸಿಕ್ ಸೀರಿಯಸ್ ಆದದ್ದು ನಿಸಾರ್ ಅಹಮದರ ನಿತ್ಯೋತ್ಸವ ಕೆಸೆಟ್ಟು ಹೊರ ಬಂದ ನಂತರ. ಮೈಸೂರು ಮಲ್ಲಿಗೆ, ಭಾವ ಸಂಗಮ, ನಾಕುತಂತಿ, ಇಂಚರ, ದೀಪಿಕಾ ಹೀಗೆ ಒಂದೊಂದಾಗಿ ಭಾವ ಗೀತೆಗಳ ಕೆಸೆಟ್ಟುಗಳು ಮಾರುಕಟ್ಟೆಗೆ ಬಂದವು. ಅವಕ್ಕೆ ಸಾಕಷ್ಟು ಬೇಡಿಕೆಯೂ ಇತ್ತು. ಮೈಸೂರು ಅನಂತ ಸ್ವಾಮಿ, ಸಿ.ಅಶ್ವಥ್ ಅಂಥವರು ಮನೆ ಮಾತಾಗಿದ್ದು , ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರು ಕೆಸೆಟ್ಟಿಗಾಗಿ ಕವಿತೆ ಬರೆಯಲು ಪ್ರಾರಂಭಿಸಿದ್ದೂ ಆಗಲೇ.
ಸಂಗೀತ ಕ್ಷೇತ್ರದಲ್ಲಿ ಒಳ್ಳೆ ಅವಕಾಶ ಹುಡುಕಿಕೊಂಡು ಅದೇ ಸಮಯಕ್ಕೆ ಮೈಸೂರಿನಿಂದ ಬೆಂಗಳೂರಿಗೆ ಇಬ್ಬರು ಸಹೋದರರು ಬಂದರು. ಒಬ್ಬ ಮ್ಯಾಂಡೋಲಿನ್ ವಾದಕ ಎನ್.ಎಸ್.ಪ್ರಸಾದ್. ಮತ್ತೊಬ್ಬ ಕೊಳಲು ವಾದಕ ಎನ್.ಎಸ್.ಮುರಳೀಧರ್.
ಮುರಳೀಧರ್ ಒಬ್ಬ ಒಳ್ಳೆ ಕೊಳಲು ವಾದಕ ಎಂದು ಗುರ್ತಿಸಿಕೊಂಡಿದ್ದವರು. ಅವಕಾಶ ಅರಸಿ ಬಂದ ಈತನ ಅದೃಷ್ಟವೋ ಏನೋ, ಅದೇ ವೇಳೆಗೆ ಬೆಂಗಳೂರಲ್ಲಿ ಹಲವು ರೆಕಾರ್ಡಿಂಗ್ ಸ್ಟುಡಿಯೋಗಳು ತಲೆಯೆತ್ತುತ್ತಿದ್ದವು. ಜೊತೆಗೆ ಕೆಸೆಟ್ ಲೋಕದಲ್ಲಿ 'ನಿತ್ಯೋತ್ಸವ" ಜೀವ ಸಂಚಲನೆ ತಂದಿತ್ತು. ಮೈಸೂರು ಅನಂತರ ಸ್ವಾಮಿ, ಸಿ.ಅಶ್ವಥ್ ಇನ್ನಷ್ಟು ಭಾವಗೀತೆಗಳನ್ನು ಕೆಸೆಟ್ಟಿಗೆ ತುಂಬುವ ಕೆಲಸದಲ್ಲಿ ತೊಡಗಿಕೊಂಡಿದ್ದರು. ಆದರೆ, ಪಕ್ಕ ವಾದ್ಯಕ್ಕೆ ಕೊಳಲು ವಾದಕರ ಕೊರೆಯಿತ್ತು. ಅದನ್ನು ಯಶಸ್ವಿಯಾಗಿ ತುಂಬಿದವರು ಎನ್.ಎಸ್.ಮುರಳೀಧರ್ ಉರುಫ್ ಮುರಳಿ.
ಎಲ್ಲೆಲ್ಲೂ ಮೋಹಕ ಮುರಳಿ : ಕಛೇರಿಗಳಿಗಲ್ಲದೆ ರೆಕಾರ್ಡಿಂಗ್ ಸೆಷನ್ಗಳಿಗೆ ಕೊಳಲು ನುಡಿಸುವ ಏಕೈಕ ಎಂಬ ಪಟ್ಟವನ್ನು ಆಗ ಗಿಟ್ಟಿಸಿದವರು ಮುರಳಿ. ಇವರ ಏಕಸ್ವಾಮ್ಯ ದೀರ್ಘ ಕಾಲ ಮುಂದುವರೆಯಿತು. ಅನಂತ ಸ್ವಾಮಿ, ಅಶ್ವಥ್, ರತ್ನಮಾಲ ಪ್ರಕಾಶ್, ಬಿ.ಕೆ.ಸುಮಿತ್ರ, ಕಸ್ತೂರಿ ಶಂಕರ್, ಪುತ್ತೂರು ನರಸಿಂಹ ನಾಯಕ್, ಜಿ.ವಿ.ಅತ್ರಿ ಮೊದಲಾದವರಿಂದ ಹಿಡಿದು ಐಎಎಸ್ ಅಧಿಕಾರಿ ವೈ.ಕೆ.ಮುದ್ದುಕೃಷ್ಣನವರಂಥ ಗಾಯಕರಿಗೂ ಕೊಳಲ ಸಾಥಿ ಮುರಳಿ. ಪರಿಣಾಮ ಹತ್ತು ಹದಿನೈದು ವರ್ಷಗಳಲ್ಲಿ 2000ಕ್ಕೂ ಹೆಚ್ಚು ಹಾಡುಗಳಿಗೆ ಕೊಳಲು ನುಡಿಸಿದ ಹೆಮ್ಮೆ ಮುರಳಿ ಅವರದ್ದು. 25 ಕೆಸೆಟ್ಟುಗಳಿಗೆ ಸಂಗೀತವನ್ನೂ ಸಂಯೋಜಿಸಿದರು.
ಹೊಸ ನೀರು : ಮುರಳಿ ಏಕಸ್ವಾಮ್ಯ ಮುರಿದದ್ದು ಒರಿಸ್ಸಾದಿಂದ ಬೆಂಗಳೂರಿಗೆ ಬಂದ ಪಟ್ನಾಯಕ್ ಎಂಬ ಕೊಳಲು ವಾದಕ. ಬುಟ್ಟೋ ಎಂದು ಹೆಸರು ಬದಲಿಸಿಕೊಂಡ ಪಟ್ನಾಯಕ್ ಕೂಡ ಪ್ರತಿಭಾವಂತ. ಈತ ಇಲ್ಲಿಗೆ ಕಾಲಿಟ್ಟಾಗ ಭಾವಗೀತೆಗಳ ಕೆಸೆಟ್ಟುಗಳ ಅಬ್ಬರ ಸಾಕಷ್ಟು ಕಡಿಮೆಯಾಗಿತ್ತು. ಕಛೇರಿಗಳ ಮೂಲಕ ಬುಟ್ಟೋ ಹೀರೋ ಆದರು. 90ರ ದಶಕದಲ್ಲಿ ಕೆ.ಎಸ್.ರಾಮನ್, ರಾಜೇಶ್ ಮತ್ತು ಪ್ರವೀಣ್ ಗೋಡ್ಖಿಂಡಿ ಸೆಷನ್ಗಳಿಗೆ ಕೊಳಲು ನುಡಿಸಲು ಪ್ರಾರಂಭಿಸಿದರು. ಹೀಗಾಗಿ ಮುರಳಿಗೆ ಸಾಕಷ್ಟು ಕಾಂಪಿಟಿಟರ್ಗಳು ಹುಟ್ಟಿಕೊಂಡಂತಾಯಿತು.
ಸುಗಮ ಸಂಗೀತದಲ್ಲೇ ಸಾಕಷ್ಟು ಹೆಸರು ಮಾಡಿ, ಕರ್ನಾಟಕ ನಾಟಕ ಸಂಗೀತ ಅಕಾಡೆಮಿಯ ಕಲಾಶ್ರೀ ಗೌರವವನ್ನೂ ಗಿಟ್ಟಿಸಿಕೊಂಡಿದ್ದ ಮುರಳಿ ಫ್ಯೂಷನ್ ಸಂಗೀತದ ಪ್ರಯೋಗಗಳನ್ನೇನೂ ಗಂಭೀರವಾಗಿ ಮಾಡಿರಲಿಲ್ಲ. ಪ್ರವೀಣ್ ಗೋಡ್ಖಿಂಡಿಯಂಥ ಯುವ ಪ್ರತಿಭೆಗಳು ಚಿಕ್ಕ ತಂಡಗಳನ್ನು ಕಟ್ಟಿಕೊಂಡು ಅಂಥಾ ಪ್ರಯತ್ನಕ್ಕೂ ಕೈ ಹಾಕಿದರು. ಬರಬರುತ್ತಾ ಮುರಳಿ ಮಸುಕಾದರು.
ಪಿ.ಕಾಳಿಂಗರಾಯರು ಕುಡಿದು ಹಾಳಾದರು ಅನ್ನುವ ಮಾತನ್ನು ಅವರ ಆಪ್ತರು ಇಂದಿಗೂ ಹೇಳುತ್ತಾರೆ. ಅದೇ ರೀತಿ ಮುರಳಿ ಹತ್ತಿರದವರು ಹೇಳುವುದು- ಆತ ಕಂಠಪೂರ್ತಿ ಕುಡಿಯುತ್ತಿದ್ದ. ಸಾಲದ್ದಕ್ಕೆ ಗುಟ್ಕಾ ದಾಸನಾಗಿದ್ದ. ಸಾವನ್ನು ತಾನೇ ತಂದುಕೊಂಡ. ಅದೂ 47 ರ ವಯಸ್ಸಿನಲ್ಲಿ .
ಇನ್ನು ಮುಂದೆ, ಮೋಹನ ಮುರಳಿ ನಾದ ಕೇಳಿ ಬರುವುದಿಲ್ಲ ; ಕೇಳಿಸುತ್ತಿರುವುದು ಅವರ ಹತ್ತು ವರ್ಷ ವಯಸ್ಸಿನ ಮಗನ ರೋದನ!
ಮುರಳೀಧರ್ ಕೊಳಲ ದನಿಯನ್ನು ನೀವು ಕೇಳಿದ್ದೀರಾ?
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications