Get Updates
Get notified of breaking news, exclusive insights, and must-see stories!

ದೇವನೂರ ಮಹಾದೇವ ಅವರ 'ಆರ್‌ಎಸ್‌ಎಸ್‌: ಆಳ ಮತ್ತು ಅಗಲ' 5 ಭಾಷೆಗೆ ಅನುವಾದ

ಬೆಂಗಳೂರು, ಜುಲೈ 14: ಪುಸ್ತಕಗಳನ್ನು ಕೊಂಡು ಓದುವ ಓದುಗರಿಲ್ಲ ಎಂಬ ಆರೋಪಕ್ಕೆ ನಾಡಿನ ಸಾಕ್ಷಿಪ್ರಜ್ಞೆ ದೇವನೂರು ಮಹಾದೇವ ಅವರ 'ಆರ್‌ಎಸ್‌ಎಸ್‌: ಆಳ ಮತ್ತು ಅಗಲ' ಪುಸ್ತಕ ಉತ್ತರ ನೀಡಿದೆ. ರಾಜ್ಯದಲ್ಲಿ ಪುಸ್ತಕ ಕ್ರಾಂತಿಗೆ ಕಾರಣವಾಗಿರುವ ಈ ಚಿಕ್ಕ ಪುಸ್ತಕದ 40,000 ಪ್ರತಿಗಳು ಈಗಾಗಲೇ ಓದುಗರ ಕೈ ಸೇರಿವೆ. ಈಗ ಈ ಪುಸ್ತಕ ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಿಗೆ ಅನುವಾದವಾಗಲು ಸಿದ್ಧವಾಗುತ್ತಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತವನ್ನು ವಿಮರ್ಶಾತ್ಮಕವಾಗಿ ಅವಲೋಕಿಸುವ ನಾಡಿನ ಸಾಕ್ಷಿಪ್ರಜ್ಞೆ ಎಂದೆ ಕರೆಯಲ್ಪಡುವ ಸಾಹಿತಿ ದೇವನೂರು ಮಹಾದೇವ ಅವರು ತಮ್ಮ "ಆರ್‌ಎಸ್‌ಎಸ್: ಆಳ ಮತ್ತು ಅಗಲ" ಎಂಬ ಕಿರು ಪುಸ್ತಕದ ಹಕ್ಕುಸ್ವಾಮ್ಯವನ್ನು ಕೂಡ ಬಿಟ್ಟುಕೊಟ್ಟಿದ್ದಾರೆ. ಯಾವ ಪ್ರಕಾಶಕರು ಬೇಕಾದರೂ ಇದನ್ನು ಪ್ರಕಟಿಸಬಹುದು. ಆದರೆ ಬೆಲೆಯನ್ನು ಜನರ ಕೈಗೆಟುಕುವಂತೆ ಇಡಬೇಕು ಅಷ್ಟೆ ಎಂದು ಹೇಳಿದ್ದರು.

ಈವರೆಗೆ ಈ 64 ಪುಟಗಳ ಪುಸ್ತಕವನ್ನು ಗೌರಿ ಮೀಡಿಯಾ ಟ್ರಸ್ಟ್, ಓದು ವಿನಿಮಯ ಬಳಗ, ನವಕರ್ನಾಟಕ, ಅಭಿರುಚಿ ಪ್ರಕಾಶನ, ಮಾನವ ಬಂಧುತ್ವ ವೇದಿಕೆ, ನಡೆನುಡಿ ಚಿಕ್ಕನಾಯಕನಹಳ್ಳಿ, ಜನಸ್ಪಂದನ ತಿಪಟೂರು, ಭಾರತೀಯ ಟ್ರಸ್ಟ್, ನೀಲಿಹೆಜ್ಜೆ, ಆದಿಮ, ನಯನ, ಶ್ಯಾಮ್ ಮತ್ತು ಸಂಕಥನ ಸೇರಿದಂತೆ ಹಲವಾರು ಪ್ರಕಾಶಕರು ಪ್ರಕಟಿಸಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಒಂದೇ ಸುಮಾರು 17 ಸಾವಿರ ಪ್ರತಿಗಳನ್ನು ಮುದ್ರಿಸಿದೆ.

Devanuru Mahadevas RSS: Aala Mattu Agala book will translate to five languages

ಕಳೆದ ಎರಡು ವರ್ಷಗಳಿಂದ ಸಾಂಕ್ರಾಮಿಕ ರೋಗದ ಸಮಯದಲ್ಲಿ ಪುಸ್ತಕ ಪ್ರಕಾಶಕರ ವಲಯಕ್ಕೆ ಬಿದ್ದ ಹೊಡೆತವನ್ನು ಈ ಪುಸ್ತಕವು ಹೊಸ ಉತ್ಸಾಹವನ್ನು ತುಂಬಿದೆ. 64 ಪುಟಗಳ ಕಿರು ಪುಸ್ತಕದ ಬೆಲೆ 40 ರೂಪಾಯಿಯಾಗಿದೆ.

ಪುಸ್ತಕಕ್ಕೆ ಭಾರಿ ಬೇಡಿಕೆ:

ಪುಸ್ತಕಕ್ಕೆ ಇರುವ ಬೇಡಿಕೆಯಿಂದಾಗಿ ಇನ್ನು ಮುದ್ರಣ ಹೆಚ್ಚಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಒಂದು ಲಕ್ಷ ಗಡಿ ದಾಟಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಈ ಪುಸ್ತಕದ ಅನುವಾದಕ್ಕಾಗಿ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಪ್ರಕಾಶಕರು ಮುಂದೆ ಬಂದಿದ್ದು, ಅನುವಾದಗಳು ನಡೆಯುತ್ತಿವೆ. ತಮಿಳು ಭಾಷೆಗೆ ಬರಹಗಾರರಾದ ಕನಕರಾಜು ಅವರು ಅನುವಾದ ಮಾಡುತ್ತಿದ್ದು, ತಮಿಳುನಾಡಿನ ಯಾವರೂಂ (yaavarum) ಪ್ರಕಾಶನ ಸಂಸ್ಥೆ ಪ್ರಕಟಿಸಲಿದೆ ಎನ್ನುವ ಮಾಹಿತಿಯಿದೆ.

Devanuru Mahadevas RSS: Aala Mattu Agala book will translate to five languages

ದೇವನೂರು ಮಹಾದೇವ ಅವರು ಪುಸ್ತಕದ ಮುನ್ನುಡಿಯಲ್ಲಿ ಈ ಪುಸ್ತಕವು "ಆರ್‌ಎಸ್‌ಎಸ್‌ನ ನೈಜ ಸ್ವರೂಪ ಮತ್ತು ಉದ್ದೇಶವನ್ನು ವಿಮರ್ಶಾತ್ಮಕವಾಗಿ ಗಮನಿಸಿ, ಅದನ್ನು ಜನರ ಮುಂದೆ ಇಡುವ ಪ್ರಯತ್ನವಾಗಿದೆ" ಎಂದಿದ್ದಾರೆ. ಈ ಪುಸ್ತಕದಲ್ಲಿ ಹಿಂದೂ ಬಲಪಂಥೀಯ ಸಂಘಟನೆಯ ಸಿದ್ಧಾಂತವನ್ನು ರೂಪಿಸಿದ ಆರ್‌ಎಸ್‌ಎಸ್‌ನ ಗೋಲ್ವಾಲ್ಕರ್, ಹೆಡ್ಗೇವಾರ್ ಅವರ ಚಿಂತನ ಗಂಗಾದ ಭಾಗಗಳು ಮತ್ತು ಸಾವರ್ಕರ್ ಭಾಷಣಗಳನ್ನು ಉಲ್ಲೇಖಿಸಿ ಹೇಗೆ ಇವರೆಲ್ಲಾ ಜಾತಿ ವ್ಯವಸ್ಥೆಯನ್ನು ಹೇಗೆ ಸಮರ್ಥಿಸುತ್ತಾರೆ ಮತ್ತು ಐಕ್ಯತೆಯನ್ನು ವಿರೋಧಿಸುತ್ತಾರೆ ಎಂಬುದನ್ನು ವಿವರಿಸಲಾಗಿದೆ.

ಜೊತೆಗೆ ಈ ಕೃತಿಯು ವರ್ಣಾಶ್ರಮ ಧರ್ಮ ಮತ್ತು ಮನುಸ್ಮೃತಿ, ಆರ್ಯರ ಪ್ರಾಬಲ್ಯ ಮತ್ತು ಭಾರತದ ಸಂವಿಧಾನ ಮತ್ತು ಒಕ್ಕೂಟದ ನಾಶದ ಬಗ್ಗೆ ಮಾತನಾಡುತ್ತದೆ. ರಾಜ್ಯ ಸರ್ಕಾರವು ಇತ್ತೀಚೆಗೆ ಪರಿಚಯಿಸಿದ ಪಠ್ಯಪುಸ್ತಕ ಪರಿಷ್ಕರಣೆ ಮತ್ತು ಮತಾಂತರ ವಿರೋಧಿ ಮಸೂದೆಯು ಈ ಬಲಪಂಥೀಯ ಮಾದರಿಗಳನ್ನು ನಾಗರಿಕ ಸಮಾಜದ ಮೇಲೆ ಹೇರುವ ಕ್ರಮವಾಗಿದೆ ಎಂದು ದೇವನೂರು ಪ್ರಸ್ತುತಪಡಿಸಿದ್ದಾರೆ.

ಈ ಪುಸ್ತಕವನ್ನು ಆರ್‌ಎಸ್‌ಎಸ್‌ನ ಪ್ರಾಣ ಎಂದು ಕರೆದಿರುವ ಅವರು, ಪ್ರಗತಿಪರ ಸಂಘಟನೆಗಳು ತಮ್ಮ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ "ವರ್ಣಾಶ್ರಮ ಧರ್ಮವನ್ನು ಹೇರಲು ಪ್ರಯತ್ನಿಸುತ್ತಿರುವ ಪ್ರತಿಗಾಮಿ ಶಕ್ತಿಗಳ ಮುಖವಾಡಗಳನ್ನು ಕಳಚಬೇಕು" ಎಂದು ಕರೆ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+