ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾ.ಗೋಪಿನಾಥ್ ಜೀವನಗಾಥೆ ಬಾನಯಾನ

By Mahesh
|
Google Oneindia Kannada News

Banayana book release on Sept.18
ಬೆಂಗಳೂರು, ಸೆ.15: 'ಅಪ್ರತಿಮ ಕನ್ನಡಿಗನೊಬ್ಬನ ರೋಚಕ ಜೀವನಗಾಥೆ' ಎಂಬ ಅಡಿಬರಹದೊಂದಿಗೆ ಕ್ಯಾಪ್ಟನ್ ಗೋಪಿನಾಥ್ ಅವರ ಚರಿತ್ರೆಯ ಪುಸ್ತಕ ಬಿಡುಗಡೆ ಸಮಾರಂಭದ ಆಹ್ವಾನದ ಪತ್ರಿಕೆ ಆಗಸದ ಬಣ್ಣದಲ್ಲಿ ಈಗಾಗಲೇ ಎಲ್ಲರ ಕೈ ಸೇರಿರಬಹುದು. ಆದರೂ, ಮತ್ತೊಮ್ಮೆ ಸಹೃದಯ ಓದುಗರನ್ನು ಆಹ್ವಾನಿಸುವ ಸಲುವಾಗಿ ಕಾರ್ಯಕ್ರಮದ ಸಂಕ್ಷಿಪ್ತ ವಿವರ ನೀಡಲಾಗುತ್ತಿದೆ.

ಅಂಕಿತ ಪುಸ್ತಕ ಹೊರತಂದಿರುವ ಕ್ಯಾಪ್ಟನ್ ಗೋಪಿನಾಥ್ ವಿರಚಿತ 'ಬಾನಯಾನ' ಕೃತಿಯನ್ನು ವಿಶ್ವೇಶ್ವರ್ ಭಟ್ ಅನುವಾದ ಮಾಡಿದ್ದಾರೆ.

ಪುಸ್ತಕ ಬಿಡುಗಡೆ: ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಕರ್ನಾಟಕ ಸರ್ಕಾರ

ಅಧ್ಯಕ್ಷತೆ: ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀಕ್ಷೇತ್ರ ಧರ್ಮಸ್ಥಳ

ಮುಖ್ಯ ಅತಿಥಿ : ಗಿರೀಶ್ ಕಾರ್ನಾಡ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ

ಉಪಸ್ಥಿತಿ: ಕ್ಯಾಪ್ಟನ್ ಗೋಪಿನಾಥ್, ಮುಖ್ಯಸ್ಥರು, ಡೆಕ್ಕನ್ 360 ಹಾಗೂ ವಿಶ್ವೇಶ್ವರ ಭಟ್, ಸಂಪಾದಕರು, ವಿಜಯ ಕರ್ನಾಟಕ

ಸಮಯ : ಬೆಳಗ್ಗೆ 10.30

ದಿನ/ ದಿನಾಂಕ: ಶನಿವಾರ/ 18/09/2010

ಸ್ಥಳ : ರವೀಂದ್ರ ಕಲಾಕ್ಷೇತ್ರ, ಬೆಂಗಳೂರು

ಸೂಚನೆ: ಬೆಳಗ್ಗೆ 9.30ಕ್ಕೆ ಉಪಸ್ಥಿತರೊಂದಿಗೆ ಉಪಹಾರ ವ್ಯವಸ್ಥೆಯಿದೆ. ತಪ್ಪದೇ ಬನ್ನಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X