ಶಂಕರ ಮೊಕಾಶಿ ಪುಣೇಕರ್ ಪುಸ್ತಕ ಅನಾವರಣ
ಬೆಂಗಳೂರು, ಜು. 16 : ಸಪ್ನ್ ಬುಕ್ ಹೌಸ್, ಮಂಥನ ಹಾಗೂ ಸ್ನೇಹಸೇತು ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ಡಾ ಬಿ ಜಿ ಹರೀಶ್ ಸಂಪಾದಕತ್ವದಲ್ಲಿ ರಚಿತವಾಗಿರುವ ಶಂಕರ ಮೊಕಾಶಿ ಪುಣೇಕರ ಅವರ ಲೇಖನಗಳ ಸಂಪುಟ 'ನೀರಬೆಳಗು' ಪುಸ್ತಕ ಬಿಡುಗಡೆ ಮತ್ತು ಸಂವಾದ ಕಾರ್ಯಕ್ರಮವನ್ನು ಜುಲೈ 18 ರಂದು ಸಂಜೆ 5 ಗಂಟೆಗೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಪ್ರೊ ಬಿ ಎ ವಿವೇಕ ರೈ ಪುಸ್ತಕ ಬಿಡುಗಡೆ ಮಾಡುವರು. ವಸಂತ ಮೊಕಾಶಿ, ನಿತಿನ್ ಷಾ ಮುಖ್ಯಅತಿಥಿಗಳಾಗಿ ಭಾಗವಹಿಸುವರು. ಪುಸ್ತಕ ಕುರಿತಂತೆ ಸಂಪಾದಕ ಡಾ ಬಿ ಜಿ ಹರೀಶ್ ಅವರಿಂದ ಭಾಷಣ. ಪುಸ್ತಕ ಬಗ್ಗೆ ನಡೆಯುವ ಸಂವಾದದಲ್ಲಿ ಪ್ರೊ ಮಲ್ಲೇಪುರಂ ಜಿ ವೆಂಕಟೇಶ್, ಸೂರ್ಯಪ್ರಕಾಶ ಪಂಡಿತ್ ಮತ್ತು ವಾದಿರಾಜ್ ಪಾಲ್ಗೊಳ್ಳಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications