ಪುಸ್ತಕ ರೂಪದಲ್ಲಿ ಜೋಗವ್ವ ಮತ್ತು ಮಾಂಗಲ್ಯ
ಅಮೆರಿಕಾದ ಬಾಲ್ಟಿಮೋರ್ ನಲ್ಲಿ ಜರುಗಿದ ಅಕ್ಕ ವಿಶ್ವಕನ್ನಡ ಸಮ್ಮೇಳನದ ಕಾದಂಬರೀ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದ ಎರಡು ಕಾದಂಬರಿಗಳು ಪುಸ್ತಕ ರೂಪದಲ್ಲಿ ಹೊರಬರಲಿವೆ. ಹುಬ್ಬಳ್ಳಿಯ ಕುಮಾರ ಬೇಂದ್ರೆ ಅವರ 'ಜೋಗವ್ವ" ಕಾದಂಬರಿ ಮತ್ತು ಬೆಂಗಳೂರಿನ ಕೆ. ಎನ್. ಮುಕುಂದರಾವ್, ಅವರ 'ಮಾಂಗಲ್ಯ" ಕಾದಂಬರಿಗಳ ಲೋಕಾರ್ಪಣೆ ಸಮಾರಂಭ ಮೈಸೂರಿನಲ್ಲಿ ನಡೆಯಲಿದೆ. ಪ್ರಕಾಶಕರು : ಸಂವಹನ ಪ್ರಕಾಶನ ಶಿವರಾಂ ಪೇಟೆ, ಮೈಸೂರು
ದಿನಾಂಕ: ಶನಿವಾರ, ಮಾರ್ಚ್ 8 ಸಂಜೆ 5:30 ಕ್ಕೆ. ಸ್ಥಳ: 'ಮನೆಯಂಗಳ", ಕಲಾಮಂದಿರ, ಹುಣಸೂರು ರಸ್ತೆ, ಮೈಸೂರು
ಪುಸ್ತಕಗಳ ಬಿಡುಗಡೆ : ನಳಿನಿ ಮೈಯ್ಯ , (ಮುಖ್ಯಸ್ಥರು, ಸಾಹಿತ್ಯ ವಿಭಾಗ, 2008ರ ಅಕ್ಕ ವಿಶ್ವಕನ್ನಡ ಸಮ್ಮೇಳನ, ಷಿಕಾಗೋ, ಅಮೇರಿಕಾ)
ಅಧ್ಯಕ್ಷತೆ: ಶ್ರೀ ಮ. ಗು. ಸದಾನಂದಯ್ಯ , (ನಿವೃತ್ತ ಉಪನಿರ್ದೇಶಕರು, ರಂಗಾಯಣ, ಮೈಸೂರು)
ಕೃತಿಗಳನ್ನು ಕುರಿತು: ಜೋಗವ್ವ ಕಾದಂಬರಿಯನ್ನು ಕುರಿತು: ಪ್ರೊ| ಚ. ಸರ್ವಮಂಗಳಾ, (ನಿವೃತ್ತ ಪ್ರಾಂಶುಪಾಲರು, ಮಹರಾಜಾ ಕಾಲೇಜು, ಮೈಸೂರು)ಮಾಂಗಲ್ಯ ಕಾದಂಬರಿಯನ್ನು ಕುರಿತು:ಪ್ರೊ| ಹನೂರು ಕೃಷ್ಣಮೂರ್ತಿ,(ಪ್ರಾಧ್ಯಾಪಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ)
ಎಲ್ಲರಿಗೂ ಆದರದ ಸ್ವಾಗತ : ಡಿ. ಎನ್. ಲೋಕಪ್ಪ, ಸಂವಹನ ಪ್ರಕಾಶನ; ನಾಗಲಕ್ಷ್ಮಿ ಮತ್ತು ಹರಿಹರೇಶ್ವರ, ಮೈಸೂರು
(ದಟ್ಸ್ ಕನ್ನಡಸಾಹಿತ್ಯ ವಾರ್ತೆ)












Click it and Unblock the Notifications