ಡಾ.ಗುರುಪ್ರಸಾದ್ ಕಾಗಿನೆಲೆ ಪುಸ್ತಕಕ್ಕೆ ಪ್ರತಿಷ್ಠಿತ ಪ್ರಶಸ್ತಿ
ಗುಲ್ಬರ್ಗ : ಕತೆಗಾರ ಮತ್ತು ವೈದ್ಯ ಡಾ.ಗುರುಪ್ರಸಾದ್ ಕಾಗಿನೆಲೆ ಅವರ ‘ವೈದ್ಯ ಮತ್ತೊಬ್ಬ’ ಕೃತಿಗೆ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ. ಪ್ರಸಕ್ತ ಸಾಲಿನ ‘ಡಾ.ಪಿ.ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ’ಗೆ ಕಾಗಿನೆಲೆ ಆಯ್ಕೆಗೊಂಡಿದ್ದಾರೆ.
ಈ ಪ್ರಶಸ್ತಿಗೆ ಕಾಗಿನೆಲೆ ಜೊತೆಗೆ ಡಾ.ಕೆ.ರಾಮಾನಂದ ಬನಾರಿ(ಕಾಸರಗೋಡು) ಸಹಾ ಪಾತ್ರರಾಗಿದ್ದಾರೆ. ಅವರ ‘ಆರೋಗ್ಯ ಗೀತೆ’(ಆರೋಗ್ಯ ಮತ್ತು ಔಷಧಿ ಸಂಬಂಧಿ ಪದ್ಯಗಳ ಸಂಕಲನ) ಪುಸ್ತಕಕ್ಕೆ ಪ್ರಶಸ್ತಿ ಲಭಿಸಿದೆ.
2007ರ ಜನವರಿ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಡಾ.ಪಿ.ಎಸ್.ಶಂಕರ್ ಪ್ರತಿಷ್ಠಾನದ ಕಾರ್ಯದರ್ಶಿ, ಸುದ್ದಿಗಾರರಿಗೆ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications