'ಬೆತ್ತಲೆ ಹರಕೆ' ಕನ್ನಡ ನಾಟಕ ವಿಮರ್ಶೆ
ನಾಟಕದ ಕಥಾವಸ್ತುವಿನ ಬಗ್ಗೆ ಹೇಳುವುದಾದರೆ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಆಚರಣೆಯಲ್ಲಿದ್ದ ಪದ್ಧತಿ/ನಂಬಿಕೆ/ಮೂಢನಂಬಿಕೆ. ತನ್ನ/ಮನೆಯವರ ಇಷ್ಟಾರ್ಥಸಿದ್ಧಿಗಾಗಿ ಆ ಮನೆಯ ಒಬ್ಬ ಹೆಣ್ಣು ಮಗಳು ಗ್ರಾಮದೇವತೆಯ ಜಾತ್ರೆಯಲ್ಲಿ ನಡೆಯುವ ಬೆತ್ತಲೆ ಹರಕೆ- ನಾಟಕದ ಕಥಾವಸ್ತು.
ಈ ಆಚರಣೆಯನ್ನು ಬೆಳಕಿಗೆ ತಂದದ್ದು 1985ರಲ್ಲಿ. ಅದರ ನಿಷೇಧಕ್ಕೆ ಕಾರಣರಾದ ದಿವಸ್ಪತಿ ಹೆಗಡೆಯವರು ಬರೆದಿರುವ ಕೃತಿಯನ್ನು ರಂಗಭೂಮಿಯ ಮೇಲೆ ಅವರ ಮೊಮ್ಮಗಳೇ ತನ್ನ ರಂಗಪ್ರವೇಶಕ್ಕೆ ಆರಿಸಿರುವುದು ಅವರ 'ದಾದಾ' 'ಹರ್ಷ' ಪಡುವ ಸಂಗತಿ. ಇಂತಹ ಸೂಕ್ಷ್ಮ ವಸ್ತುವನ್ನು ಸ್ವಾರಸ್ಯಕರವಾಗಿ ಪ್ರಸ್ತುತಪಡಿಸಿದ್ದು ಹರ್ಷರ ಹೆಗ್ಗಳಿಕೆಯೇ ಸರಿ.
ಈಗ ಈ ಆಚರಣೆ ಗ್ರಾಮಗಳಲ್ಲಿ ನಿಂತುಹೋಗಿದೆಯಾದರೂ ಕಾವತ್ತಾರ್ ರವರು ಹೇಳಿದಂತೆ ಜಾಹೀರಾತು ಸಿನೆಮಾಗಳಲ್ಲಿ ಮರುಹುಟ್ಟು ಪಡೆದಿರುವುದು ಸತ್ಯ. ಹಾಗೆಯೇ ಆ ಪ್ರದೇಶಗಳಲ್ಲಿನ ಕೆಲ ದುಷ್ಟರು ತಮ್ಮ ತೃಷೆಗಾಗಿ ಈ ಆಚರಣೆಯ ಪೋಷಕರಾಗಿದ್ದರು. ಈಗ ಅವರು ನಮ್ಮ ಸದನದಲ್ಲೂ ಇದ್ದಾರೆ ಎಂಬುದು ಖೇದಪಡುವ ವಿಷಯ. ಪ್ರಜೆಗಳ ನಾಯಕನಾಗುವವನು ಯಾವ ರೀತಿ ಇರಬೇಕು ಮತ್ತು ಹಾಗಿಲ್ಲದಾಗ ಆಗುವ ಅನಾಹುತಗಳನ್ನು ಮನಮುಟ್ಟುವಂತೆ ಪ್ರತಿಬಿಂಬಿಸಿದ್ದಾರೆ. ಇದಕ್ಕೆ ಕನ್ನಡಿಗರ ಪ್ರೋತ್ಸಾಹವಿರಲೆಂದು ಹಾರೈಸುತ್ತೇನೆ.
ನಾಟಕ
ಮಾರ್ಚ್
21,
22
ಮತ್ತು
24ರಂದು
ಪ್ರದರ್ಶನಗೊಳ್ಳುತ್ತಿದೆ.
ಸ್ಥಳ
:
ಕೆ.ಹೆಚ್.ಕಲಾಸೌಧ,
ರಾಮಾಂಜನೇಯ
ದೇವಸ್ಥಾನದ
ಹಿಂಭಾಗ,
ಹನುಮಂತನಗರ,
ಬೆಂಗಳೂರು.
ಸಮಯ
:
6.30