ಬೆಂಗಳೂರಿನಲ್ಲೂ ಮಹಿಳೆಯರ ಮೇಲೆ ದೌರ್ಜನ್ಯ

*ನಾಗರಾಜ್, ಬೆಂಗಳೂರು
ಕಳೆದ ಒಂದು ವಾರದಿಂದ ಕನಿಷ್ಟ 7 ದಾಳಿಗಳು ಮಹಿಳೆಯರ ಮೇಲೆ ದಾಳಿ ನಡೆದಿರುವುದು ಬೆಳಕಿಗೆ ಬಂದಿದೆ. ಅದೂ ಬೆಂಗಳೂರಿನ ಜನನಿಬಿಡ ಪ್ರದೇಶಗಳಲ್ಲಿ ಈ ಸ್ತ್ರೀಯರು ಪಾಶ್ಚಾತ್ಯ ವಸ್ತ್ರಗಳನ್ನು ಧರಿಸಿದ್ದರೆಂಬ ಕಾರಣದಿಂದ ಅವರನ್ನು 2-4 ಮಂದಿಯ ಗುಂಪೊಂದು ಬಂದು ಥಳಿಸಿದೆ. ಮಂಗಳೂರಿನ ಪಬ್ ಪ್ರಕರಣವೇ ಇದರ ಹಿನ್ನೆಲೆಯಾಗಿರಬಹುದೆಂಬ ಸಂಶಯವೂ ಸಹ ಇದರಿಂದ ಎದ್ದಿದೆ.
ಮೊದಲನೇ ಘಟನೆನಡೆದಿದ್ದು ಫೆಬ್ರವರಿ 17 ನೇ ತಾರೀಖಿನಂದು. ಇಂದಿರಾನಗರದಲ್ಲಿ ಒಬ್ಬ ಮಹಿಳೆ ತನ್ನ ಕಾರನ್ನು ಓಡಿಸುತ್ತಿದ್ದಾಗ, ಬೈಕಿನಲ್ಲಿ ಇಬ್ಬರು ವ್ಯಕ್ತಿಗಳು ಆಕೆಯನ್ನು ಹಿಂಬಾಲಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ ಅವಳನ್ನು ಥಳಿಸಲು ಮುಂದಾದರು. ಇದರಿಂದಾಗಿ ಹೆದರಿದ ಆಕೆ ತನ್ನ ರಕ್ಷಣೆಗಾಗಿ ತನಗೆ ಗೊತ್ತಿದ್ದ ಅಪಾರ್ಟ್ ಮೆಂಟ್ ಒಂದರಲ್ಲಿ ಸಹಾಯಕ್ಕಾಗಿ ಓಡಿದಳು. ಅಷ್ಟೊರೊಳಗೆ ಅವಳ ಕಾರಿನ ಬಳಿಯೇ ಮುತ್ತಿಗೆ ಹಾಕಿದ ಒಬ್ಬ ವ್ಯಕ್ತಿಯೊಡನೆ ಹೊಡೆದಾಟವು ನಡೆದು, ಕೊನೆಗೂ ತಪ್ಪಿಸಿಕೊಂಡ ಆಕೆ ಆ ಬಿಲ್ಡಿಂಗ್ ನಲ್ಲಿ ಬಚ್ಚಿಟ್ಟುಕೊಂಡಳು. ಆತಂಕಗೊಂಡಿದ್ದ ಆಕೆಗೆ ಗಾಡಿಯ ನಂಬರ್ ಅನ್ನು ಸಹ ಬರೆದಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ.
ಎರಡನೇ ಘಟನೆ ಮಂಗಳವಾರ ಬೆಳಿಗ್ಗೆ ಅಲಸೂರಿನಲ್ಲಿ, ಒಬ್ಬ ತರುಣಿಯನ್ನು ಹೋಂಡಾ ಕಾರಿನಲ್ಲಿ ಬಂದ 4 ಮಂದಿಗಳಿದ್ದ ಗುಂಪೊಂದು ದಾಳಿ ಮಾಡಿದರು. ಅವಳ ಬ್ಯಾಗ್ ನ್ನು ಪರಿಶೀಲಿಸಿ, ಆಕೆ ಧರಿಸಿದ್ದ ಪಾಶ್ಚಾತ್ಯ ಉಡುಗೆಗೆ ಕನ್ನಡದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದಲ್ಲದೆ ಆಕೆಯ ಕಿವಿ, ಕತ್ತಿಗೆ ಪರಚುವಂತಹ ಅಮಾನುಷ ಕೃತ್ಯವನ್ನೆಸಗಿದರು. ಸೇನೆಯಲ್ಲಿ ಕೆಲಸ ಮಾಡುವ ಕೆಲವು ವ್ಯಕ್ತಿಗಳು ಆಕೆಯನ್ನು ರಕ್ಷಿಸಿಲ್ಲದಿದ್ದರೆ, ಏನು ಮಾಡುತ್ತಿದ್ದರೋ ಈ ಗೂಂಡಾಗಳು?
ಅದೇ ದಿನ, ರಾತ್ರಿ 9 ಘಂಟೆ ಸಮಯದಲ್ಲಿ, ಮೌಂಟ್ ಕಾರ್ಮೆಲ್ ಕಾಲೇಜಿನಹತ್ತಿರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದಂತಹ ಚಿತ್ರ ನಿರ್ಮಾಪಕಿಯೊಬ್ಬಳನ್ನು 4 ವ್ಯಕ್ತಿಗಳ ಗುಂಪೊಂದು ಥಳಿಸಿದೆ. ಇಲ್ಲಿಯೂ ಕೂಡ ಆಕೆ ಧರಿಸಿದ್ದ ಪಾಶ್ಚಾತ್ಯ ಉಡುಗೇನೆ ಕಾರಣವಾಗಿತ್ತು ಎಂದಾಕೆ ಹೇಳಿರುವುದು ನಿಜಕ್ಕೂ ದಿಗ್ಬ್ರಮೆಯನ್ನುಂಟು ಮಾಡಿದೆ. ಈಗಾಗಲೇ ಮೊದಲೀರ್ವರೂ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ರೆಸ್ಟ್ ಹೌಸ್ ರಸ್ತೆಯ ಗಝಲರ್ಸ್ ಎಂಬ ಪಬ್ ಬಳಿ ನಿಂತಿದ್ದ ಮಹಿಳೆಯರು ಅತಿವೇಗವಾಗಿ, ನಿರ್ಲಕ್ಷ್ಯತನದಿಂದ ಬರುತ್ತಿದ್ದ ಹೋಂಡಾ ಕಾರಿನವರನ್ನು (KA-51 TR-2767) ಪ್ರಶ್ನಿಸಿದ್ದಕ್ಕೆ, ಕಾರಿನಲ್ಲಿದ್ದ 4-5 ಪುರುಷರು ಈ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಮಹಿಳೆಯರಲ್ಲಿ ಒಬ್ಬರಾದ ರಶ್ಮಿ ಸಮಾಕ(40) ಹೇಳಿದ್ದೇನೆಂದರೆ “ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ನಮ್ಮ ಕೂದಲನ್ನು ಹಿಡಿದೆಳೆದು, ನಮ್ಮನ್ನು ಹಿಡಿಯಲು ಪ್ರಯತ್ನ ಮಾಡಿದರು. ಜೊತೆಯಲ್ಲಿದ್ದ ನನ್ನ ಗಂಡ (ಅರವಿಂದ್) ಮತ್ತು ಇತರ ಪುರುಷರ ವಿರೋಧವನ್ನು ಲೆಕ್ಕಿಸದೆ ನಮ್ಮ ಮೇಲೆ ಹಲ್ಲೆ ಮಾಡಿದರು. ಮಹಿಳೆಯರ ಮೇಲೆ ದಾಳಿ ಮಾಡುವುದೇ ಅವರ ಉದ್ದೇಶದಂತಿತ್ತು".
ಪ್ರಿಯಾ ಜಾರ್ಜ್ (38), ತುಂಬಾ ಹಲ್ಲೆಗೊಳಗಾದ ಮಹಿಳೆ ಹೇಳಿದ್ದೇನೆಂದರೆ “ಹೇಳಲಿಕ್ಕೆ ಮುಜುಗರವಾಗುವಂತಹ ಭಾಗಗಳಿಗೆ ಪೆಟ್ಟು ಬಿದ್ದಿದೆ ಹಾಗೂ ಅವರ ಉದ್ದೇಶವೇ ಮಹಿಳೆಯರ ಮೇಲಿನ ಹಲ್ಲೆಯಾಗಿತ್ತು".ಗುಂಪಿನಲ್ಲಿ ಇತರ ಗಂಡಸರು ವಿರೋಧಿಸಿದರೂ ಈ ಗೂಂಡಗಳ ಶಕ್ತಿಯ ಮುಂದೆ ಅವರು ತಲೆ ಬಾಗಲೇ ಬೇಕಾಯಿತು. ಹಾಗೆಯೇ ವೀಕ್ಷಿಸುತ್ತಿದ್ದ ಮಂದಿಯೂ ಕೂಡ ಯಾರೂ ನೆರವಿಗೆ ಧಾವಿಸಲಿಲ್ಲ. ಮೊದಲಿಗೆ ನಾಲ್ಕೇ ಮಂದಿಯಿದ್ದ ಆ ತಂಡದಲ್ಲಿ ಸ್ವಲ್ಪ ಹೊತ್ತಿನಲ್ಲಿ ಬಹು ಜನರು ಸೇರಿದರು. ಹಾಗಾಗಿ ಎಲ್ಲರೂ ಅಸಹಾಯಕ ಸ್ಥಿತಿಯಲ್ಲಿದ್ದರು. ಹಲ್ಲೆ ನಡೆಸಲು ನಿಶ್ಚಯಿಸಿದ್ದ ಈ ಗೂಂಡಾಗಳು ಯಾವುದು ಸಿಗುತ್ತದೆಯೋ ಅಂದರೆ ಕಲ್ಲುಗಳನ್ನೆಲ್ಲಾ ಮಂದಿಯನ್ನು ಥಳಿಸಲು ಉಪಯೋಗಿಸಿದ್ದಾರೆ. ಅವರ ಗುರಿ ಮಾತ್ರ ಮಹಿಳೆಯರೇ ಆಗಿದ್ದರು ಎಂದು ಹೇಳಿದರು ಪ್ರತ್ಯಕ್ಶದರ್ಶಿಯಾಗಿದ್ದ ಅಲನ್ ಡೇವಿಡ್ ರಿಚಿ
ಆ ಕರಾಳ ರಾತ್ರಿಯನ್ನು ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ ಹಲ್ಲೆಗೊಳಗಾದ ಹನ್ನೆರಡು ವ್ಯಕ್ತಿಗಳಿದ್ದ ಈ ಗುಂಪಿಗೆ. ರವಿ ಎನ್ನುವ ಕಾರ್ ಮಾಲೀಕನನ್ನು ಗುರುತಿಸಲಾಗಿದ್ದು, ಈ ವ್ಯಕ್ತಿ ಯ ಮೇಲೆ ದೂರನ್ನು ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಪೋಲಿಸರು ತನಿಖೆಯನ್ನು ನಡೆಸುತ್ತಿದ್ದಾರೆ.
ಕಳೆದ ಶನಿವಾರ ರಾತ್ರಿ 10.30 ಗಂಟೆಗೆ ಸಂಜನಾ (28) ಎಂಬ ಮಹಿಳಾ ಪತ್ರಕರ್ತೆಯೊಬ್ಬಳು ವಸಂತ ನಗರದಲ್ಲಿ ಆಟೋರಿಕ್ಷಾವನ್ನು ಹತ್ತುತ್ತಿದ್ದಾಗ ಹಿಂದಿನಿಂದ ಬೈಕಿನಲ್ಲಿ ಬಂದ ಇಬ್ಬರು ಪುರುಷರು ಆಕೆಯ ಗಲ್ಲಕ್ಕೆ ಗುದ್ದಿ ದವಡೆಯನ್ನು ಘಾಸಿಗೊಳಿಸಿದ್ದಾರೆ. ಆಕೆ ಈ ದುರ್ಘಟನೆಯಿಂದ ಎಚ್ಚೆತ್ತುಕೊಂಡು ಆ ಬೈಕಿನ ಸಂಖ್ಯೆಯನ್ನು ಬರೆದುಕೊಳ್ಳುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದಾರೆ.
ಹಲ್ಲೆಗೊಳಗಾದ ಮಹಿಳೆಯು ಕೆಲಸದಿಂದ ಹಿಂತಿರುಗುತ್ತಿದ್ದಾಗ ನಡೆದ ಘಟನೆ ಇದಾಗಿದೆ. ಆಕೆಯಿಂದ ಏನನ್ನೂ ಕದ್ದೊಯ್ಯಲು ಈ ಆರೋಪಿಗಳು ಪ್ರಯತ್ನಿಸಿಲ್ಲ ಹಾಗೂ ಹಲ್ಲೆ ನಡೆಸಿದ ಕಾರಣವೂ ಗೊತ್ತಿಲ್ಲ. ಈಗ ಈ ಮಹಿಳೆಯು ಸಹ ಹೈ ಗ್ರೌಂಡ್ಸ್ ಪೋಲಿಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ.
ಹಲವಾರು ಸಂಘ ಸಂಸ್ಥೆಗಳು ಮತ್ತು ಆಸಕ್ತ ವ್ಯಕ್ತಿಗಳು ನಮ್ಮ ಕರ್ನಾಟಕವನ್ನು ನಿರ್ಭಯ ಕರ್ನಾಟಕವನ್ನಾಗಿ ಮಾಡಲು ಮತ್ತು ಮಹಿಳೆಯರಿಗೆಸುರಕ್ಷತೆಯ ಜಾಗೃತಿಯನ್ನು ಹಾಗೂ ಸಾರ್ವಜನಿಕರಿಗೆ ಅದರ ಅರಿವನ್ನು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದೆ ಬಂದಿದ್ದಾರೆ.
ಮಂಗಳೂರಿನಲ್ಲಿ ನಡೆದ ದಾಳಿಗಳನ್ನು ಅವಲೋಕಿಸಿದಾಗ (ಕೊನೆಯದಾಗಿ ಗಮನಕ್ಕೆ ಬಂದ ಪ್ರಕರಣವೆಂದರೆ ಫೆಬ್ರವರಿ 24, 2009), ಮಹಿಳೆಯರನ್ನು ಸಂಸ್ಕೃತಿ, ನೈತಿಕತೆ ಮತ್ತು ಸಮಾಜದ ಅವನತಿಗೆ ಕಾರಣಕರ್ತರೆಂಬಂತೆ ಬಿಂಬಿಸುತ್ತಿರುವುದು ನಿಜಕ್ಕೂ ಶೋಚನೀಯ. ಬೆಂಗಳೂರಿನಲ್ಲಿಯೂ ಹುಡುಗಿಯರು ಜೀನ್ಸ್ ಪ್ಯಾಂಟ್, ತೋಳಿಲ್ಲದ ಶರ್ಟ್ ಗಳನ್ನು ತೊಟ್ಟಿದ್ದಾರೆಂದು ಹಾಗೂ ಇಂಗ್ಲೀಷಿನಲ್ಲಿ ಮಾತಾಡುತ್ತಿದ್ದರೆಂಬ ಕಾರಣಗಳನ್ನು ಕೊಟ್ಟು ಅವರ ಮೇಲೆ ಹಲ್ಲೆಗಳನ್ನು ನಡೆಸಲಾಗಿದೆ. ಈ ಅನಾಚಾರಗಳನ್ನು ನೋಡಿದಾಗ ಈ ಘಟನೆಗಳು ಮಂಗಳೂರು ಮತ್ತು ಕರಾವಳಿ ತೀರ ಪ್ರದೇಶಗಳಲ್ಲಿ ನಡೆದ ದಾಳಿಗಳ ಮುಂದುವರಿದ ಭಾಗದಂತಾಗಿದೆ. ಹಲ್ಲೆ ನಡೆಸಿದ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಬೇರೆ ಬೇರೆಯೇ ಹೊರತು ಉದ್ಧೇಶ ಮಾತ್ರ ಒಂದೇ ಆಗಿದೆ.
ಮಹಿಳೆಯರ ಮೇಲಿನ ಈ ದೌರ್ಜನ್ಯವನ್ನು ಖಂಡಿಸುತ್ತಾ ಹಾಗೂ ಮಹಿಳೆಯರಿಗೆ ನಿರ್ಭಯದ ವಾತಾವರಣವನ್ನು ಕಲ್ಪಿಸುವ ಉದ್ದೇಶದಿಂದ ಈ ಕೆಳಗಿನಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
1. ಮಾರ್ಚ್ 7, 2009 ರಂದು ಎಲ್ಲಾ ಪ್ರತಿನಿಧಿಗಳೊಂದಿಗೆ ಮಾನ್ಯ ಶ್ರೀಅಜಯ್ ಕುಮಾರ್ ಸಿಂಗ್, DGP, IGPಯವರ ಕಚೇರಿಗೆ ದೂರು ದಾಖಲಿಸಲು ಪ್ರತಿಭಟನಾ ಜಾಥವನ್ನು ಹಮ್ಮಿಕೊಳ್ಳಲಾಗಿದೆ.
2. ಮಾರ್ಚ್ 8, 2009 ರಂದು ( 9:00pm To 11:00pm) BMTC ನಿಲ್ದಾಣದ(ಮೆಜೆಸ್ಟಿಕ್) ಬಳಿ ರಾತ್ರಿ ಎಲ್ಲಾ ಪ್ರತಿನಿಧಿಗಳೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
3. ಸಾರ್ವಜನಿಕರಿಗೆ ಭಿತ್ತಿ ಪತ್ರಗಳ ಮೂಲಕ ಮಹಿಳಾ ದೌರ್ಜನ್ಯದ ಅರಿವನ್ನು ಮೂಡಿಸುವುದು, ಇದಲ್ಲದೆ, ಹಸ್ತಾಕ್ಷರ ಅಭಿಯಾನ, ಕಲಾ ಚಿತ್ರಣ ಇನ್ನಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನೀವುಗಳೆಲ್ಲರೂ ಪಾಲ್ಗೊಂಡು, ಇದನ್ನು ಯಶಸ್ವಿಗೊಳಿಸಬೇಕೆಂದು ಕಳಕಳಿಯ ಮನವಿ.
ನಿಮಗೆ ಈ ವಿಷಯಗಳ ಬಗೆಗಿನ ಹೆಚ್ಚಿನ ಮಾಹಿತಿಗಳಿಗಾಗಲೀ ಅಥವಾ ಕಾನೂನು ಮಾಹಿತಿಗಳಿಗೆ http://baware.in/ ನ್ನು ಸಂಪರ್ಕಿಸಿ. ಹಾಗೂ ನಿಮ್ಮ ಪರಿಚಯಸ್ಥರಿಗೆ ಇದರ ಬಗ್ಗೆ ಅರಿವನ್ನು ಮೂಡಿಸಿ.











Click it and Unblock the Notifications