ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಳ್ವಾ ಸ್ ನುಡಿಸಿರಿಗೆ ವಿದ್ಯುಕ್ತ ಚಾಲನೆ
*ಶ್ರೀನಿಧಿ ಡಿ.ಎಸ್ , ಮೂಡಬಿದಿರೆ
ಬೆಳಗ್ಗೆ ಉದ್ಘಾಟನಾ ಸಮಾರಂಭದ ಅಂಗವಾಗಿ ಮೆರವಣಿಗೆ ಜರುಗಿತು. ಕರ್ನಾಟಕದ ವಿವಿಧ ಜಾನಪದ ಕಲೆಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಲಾಯಿತು. ನುಡಿಸಿರಿಯ ಅಧ್ಯಕ್ಷ ನಾಡೋಜ ಚೆನ್ನವೀರ ಕಣವಿಯ ಅವರನ್ನು ಮೆರವಣಿಗೆಯಲ್ಲಿ ವೇದಿಕೆ ಕರೆತರಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಸಂಪ್ರದಾಯಿಕ ಶೈಲಿಯಲ್ಲಿ- ಭತ್ತದ ತೆನೆಗಳಿಗೆ ಹಾಲು ಸುರಿಯುವ ಮೂಲಕ ನುಡಿಸಿರಿ ಆರಂಭಗೊಂಡಿತು. ನಿತ್ಯೋತ್ಸವ ಕವಿ ನಿಸಾರ ಅಹಮದ್ ಉದ್ಘಾಟನಾ ಭಾಷಣ ಮಾಡಿದರು. ಕನ್ನಡ ಭಾಷೆಯನ್ನು ಇಂಗ್ಲೀಷ್ ಹಾಳುಗೆಡವುತ್ತಿರುವುದರ ಬಗ್ಗೆ ಖೇದ ವ್ಯಕ್ತಪಡಿಸಿದ ಅವರು. ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ಕನ್ನಡದ ಹಿರಿಮೆ ಉಳಿಸಬೇಕಾಗಿದೆ ಎಂದು ಹೇಳಿದರು.
ಇಂದಿನ ಕವಿ ಸಮಯ - ಕವಿ ನಮನದಲ್ಲಿ ಮಮತಾ ಜಿ.ಸಾಗರ್ ಮತ್ತು ರಾಧಾಕೃಷ್ಣ ಉಳಿಯತ್ತಡ್ಕ ಮತ್ತು ಅಬ್ದುಲ್ ರಶೀದ್ ಭಾಗವಹಿಸಿದ್ದರು. ನಂತರ ನಡೆದ ಕನ್ನಡ ಭಾಷೆ- ಶಕ್ತಿ ಮತ್ತು ವ್ಯಾಪ್ತಿ ವಿಚಾರ ಗೋಷ್ಠಿಯಲ್ಲಿ ಡಾ.ಚಂದ್ರಶೇಖರ ನಂಗಲಿ ಮತ್ತು ಪುರುಸೋತ್ತಮ ಬಿಳಿಮಲೆ ನಡೆಸಿಕೊಟ್ಟರು.
Comments
Story first published: Friday, November 28, 2008, 19:00 [IST]