ಕಥೆಗಾರ ಎಸ್.ದಿವಾಕರ್ಗೆ ಅಯೋವಾ ವಿವಿ ಕಮ್ಮಟಕ್ಕೆಆಹ್ವಾನ
ಬೆಂಗಳೂರು : ಜಾಗತಿಕ ಕಥಾಕೋಶಕ್ಕೆ ಕನ್ನಡ ಓದುಗರನ್ನು ಕೈ ಹಿಡಿದು ನಡೆಸಿದ ಪ್ರಸಿದ್ಧ ಕಥೆಗಾರ ಎಸ್.ದಿವಾಕರ್, ಅಮೆರಿಕಾದ ಅಯೋವಾ ವಿಶ್ವವಿದ್ಯಾಲಯದಲ್ಲಿ ನಡೆಯುವ ‘ಅಂತರರಾಷ್ಟ್ರೀಯ ಲೇಖಕರ ಕಾರ್ಯಾಗಾರ’ ಕ್ಕೆ ಆಹ್ವಾನಿತರಾಗಿದ್ದಾರೆ.
ಆಗಸ್ಟ್ 25 ರಿಂದ ಕಮ್ಮಟ ಆರಂಭವಾಗಲಿದ್ದು , ಕಮ್ಮಟದ ಅಂಗವಾಗಿ ಕನ್ನಡದ ಉತ್ತಮ ಕಥೆಗಳನ್ನು ದಿವಾಕರ್ ಇಂಗ್ಲಿಷ್ಗೆ ಅನುವಾದಿಸುವರು. ಇದೇ ಸಂದರ್ಭದಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರ ಸಂಕಿರಣ ಹಾಗೂ ಚರ್ಚೆಯಲ್ಲಿ ದಿವಾಕರ್ ಭಾಗವಹಿಸುವರು.
ವಿಶ್ವದ ಪ್ರತಿಭಾನ್ವಿತ ಬರಹಗಾರರಿಗೆ ಅಮೆರಿಕಾದ ಬದುಕನ್ನು ಪರಿಚಯಿಸುವ ಹಾಗೂ ಸೃಜನಶೀಲ ಕೃತಿಗಳ ರಚನೆಗೆ ತಕ್ಕ ವಾತಾವರಣವನ್ನು ಕಲ್ಪಿಸುವ ಉದ್ದೇಶದ- ಅಯೋವಾ ವಿಶ್ವ ವಿದ್ಯಾಲಯದ 35 ನೇ ವರ್ಷದ ‘ಅಂತರರಾಷ್ಟ್ರೀಯ ಲೇಖಕರ ಕಾರ್ಯಾಗಾರ’ ವನ್ನು ಈ ಬಾರಿ ಬರಹಗಾರರಿಗೆ ಹಾಗೂ ಅನುವಾದಕರಿಗೆಂದೇ ರೂಪಿಸಲಾಗಿದೆ. ನೊಬೆಲ್ ಪ್ರಶಸ್ತಿ ವಿಜೇತ ಕವಿ ಡೆರೆಕ್ ವಾಲ್ಕಾಟ್ ಕೂಡ ಕಮ್ಮಟದಲ್ಲಿ ಭಾಗವಹಿಸುವರು.
ಕಥೆಗಾರ ದಿವಾಕರ್
ಪ್ರಸ್ತುತ ಚೆನ್ನೈನಲ್ಲಿನ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಕನ್ನಡ ವಿಭಾಗದ ಸಂಪಾದಕರಾಗಿ ಕೆಲಸ ಮಾಡುತ್ತಿರುವ ದಿವಾಕರ್ ಸಣ್ಣ ಕಥೆಗಾರರಾಗಿ ಕನ್ನಡ ಸಾರಸ್ವತ ಲೋಕದಲ್ಲಿ ಪ್ರಸಿದ್ಧರು. ಜಗತ್ತಿನ ಶ್ರೇಷ್ಠ ಸಣ್ಣಕಥೆಗಳನ್ನು ಕನ್ನಡಕ್ಕೆ ತಂದಿರುವ ದಿವಾಕರ್, ಕನ್ನಡದ ಕೆಲವು ಶ್ರೇಷ್ಠ ಕಥೆಗಳನ್ನು ಇಂಗ್ಲಿಷಿಗೂ ಅನುವಾದಿಸಿದ್ದಾರೆ. ದಿವಾಕರ್ ಕನ್ನಡಕ್ಕೆ ಅನುವಾದಿಸಿದ ಜಗತ್ತಿನ ಅತ್ಯಂತ ಚಿಕ್ಕ ಕಥೆಗಳು ‘ಕನ್ನಡಪ್ರಭ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು , ಪುಸ್ತಕರೂಪದಲ್ಲಿಯೂ ಹೊರಬಂದಿವೆ.
18 ಕ್ಕೂ ಹೆಚ್ಚು ಕನ್ನಡ ಕೃತಿಗಳನ್ನು ಪ್ರಕಟಿಸಿರುವ ದಿವಾಕರ್ ಅವರಿಗೆ ‘ರಾಜ್ಯೋತ್ಸವ ಪುರಸ್ಕಾರ’ ನೀಡುವ ಮೂಲಕ ರಾಜ್ಯ ಸರ್ಕಾರ ಗೌರವಿಸಿದೆ. ಕನ್ನಡಪ್ರಭ ಸಂಕ್ರಾಂತಿ ಕಥಾಸ್ಪರ್ಧೆ, ವಿಜಯಕರ್ನಾಟಕ ಯುಗಾದಿ ಕಥಾಸ್ಪರ್ಧೆ, ಕಥಾರಂಗಂನ ಪ್ರಶಸ್ತಿಗಳು ದಿವಾಕರ್ ಕಥನ ಪ್ರತಿಭೆಗೆ ಸಂದ ಕೆಲವು ಗರಿಗಳು. ಪ್ರಸ್ತುತ ‘ಉದಯ ವಾಣಿ’ ಪತ್ರಿಕೆಯಲ್ಲಿ ದಿವಾಕರ್ ಅವರ ‘ಅಚ್ಚುಮೆಚ್ಚು’ ಅಂಕಣ ಪ್ರಕಟವಾಗುತ್ತಿದೆ.
ಮುಖಪುಟ / ಸಾಹಿತ್ಯ ಸೊಗಡು-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications