Sweet Potato Dosa Recipe: ಮಾರುಕಟ್ಟೆಗೆ ಸಿಹಿಗೆಣಸು ಬಂದಿದೆ ನೋಡಿದ್ರಾ? ಇದರಿಂದ ರುಚಿಯಾದ ದೋಸೆ ಮಾಡಬಹುದು, ರೆಸಿಪಿ ಇಲ್ಲಿದೆ
ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಸಿಹಿಗೆಣಸು ಕಾಣಸಿಗುತ್ತದೆ. ಇದನ್ನು ನೋಡಿ ಸುಮ್ಮನೆ ಹಾಗೇ ಹೋಗ್ಬೇಡಿ. ಯಾಕೆಂದರೆ ಇದನ್ನ ಕೊಂಡು ತಿನ್ನುವುದರಿಂದ ಸಾಕಷ್ಟು ಆಯೋಗ್ಯಕರ ಪ್ರಯೋಜನಗಳಿವೆ. ಜೊತೆಗೆ ಇದರಿಂದ ನೀವು ನಾನಾ ಬಗೆಯ ಖಾದ್ಯಗಳನ್ನು ಕೂಡ ತಯಾರಿಸಬಹುದು. ಸಿಹಿಗೆಣಸಿನಿಂದ ಪಡ್ಡು, ಇಡ್ಲಿ, ಪಲ್ಯ, ಚಟ್ನಿ ಸೇರಿದಂತೆ ನಾನಾ ಬಗೆಯ ಕರಿದ ತಿಂಡಿಗಳನ್ನು ಸಹ ತಯಾರಿಸಬಹುದು.
ಮಾತ್ರವಲ್ಲ ಮನೆಯಲ್ಲಿ ಸಿಹಿಗೆಣಸಿನಿಂದ ರುಚಿ ರುಚಿಯಾಗಿ ದೋಸೆ ಕೂಡ ಮಾಡಬಹುದು. ನೀವೇನಾದ್ರೂ ದೋಸೆ ಪ್ರಿಯರಾಗಿದ್ದರೆ ಇದು ಖಂಡಿತ ನಿಮಗೆ ಇಷ್ಟವಾಗುತ್ತದೆ. ಹಾಗಾದರೆ ತಡ ಮಾಡುವುದು ಬೇಡ ಸಿಹಿಗೆಣಸಿನ ದೋಸೆ ಮಾಡಲು ಬೇಕಾದ ಪದಾರ್ಥಗಳು ಹಾಗೂ ಅದನ್ನು ತಯಾರಿಸುವ ವಿಧಾನವನ್ನು ನೋಡೋಣ.

ಬೇಕಾದ ಪದಾರ್ಥಗಳು:
* ಸಿಹಿಗೆಣಸು ಅರ್ಧ ಕೆಜಿ
* ತೆಂಗಿನ ತುರಿ ಒಂದು ಕಪ್
* ಉಪ್ಪು
* ಚಿರೋಟಿ ರವೆ ಮುಕ್ಕಾಲು ಕಪ್
* ಗೋದಿ ಹಿಟ್ಟು ಅರ್ಧ ಕಪ್
* ಕಾಳು ಮೆಣಸಿನ ಪುಡಿ ಕಾಲ್ ಚಮಚ
* ಜೀರಿಗೆ ಪುಡಿ ಅರ್ಧ ಚಮಚ

ತಯಾರಿಸುವ ವಿಧಾನ:
* ಮೊದಲಿಗೆ ಸಿಹಿಗೆಣಸನ್ನು ಚೆನ್ನಾಗಿ ತೊಳೆದು ಕುದಿಸಿ ಸಿಪ್ಪೆ ತೆಗೆದಿಟ್ಟುಕೊಳ್ಳಿ
* ಒಂದು ಮಿಕ್ಸಿ ಜಾರ್ಗೆ ತೆಂಗಿನ ತುರಿಯನ್ನು ಹಾಕಿ ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
* ಒಂದು ಪಾತ್ರೆಯಲ್ಲಿ ರುಬ್ಬಿಕೊಂಡ ತೆಂಗಿನಕಾಯಿ ಹಾಗೂ ಸಿಹಿಗೆಣಸು ಹಾಕಿ ಚೆನ್ನಾಹಿ ಮಿಕ್ಸ್ ಮಾಡಿಕೊಳ್ಳಿ
* ಇದಕ್ಕೆ ಚಿರೋಟಿ ರವೆ, ಗೋದಿ ಹಿಟ್ಟು ಹಾಕಿ ಗಂಡು ಇರದಂತೆ ಚೆನ್ನಾಗಿ ಕಲಸಿ.
* ಈ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಕಾಳು ಮೆಣಸಿನ ಪುಡಿ, ಜೀರಿಗೆ ಪುಡಿ ಹಾಕಿ ಕಲಸಿ
* ಎಲ್ಲಾ ಮಿಶ್ರಣವನ್ನು ದೋಸೆ ಹಿಟ್ಟಿನ ಹದಕ್ಕೆ ಕಲಸಿ ಅರ್ಧ ಗಂಟೆ ಪಾತ್ರೆ ಮುಚ್ಚಿಡಿ
* ಒಲೆಯ ಮೇಲೆ ಹೆಂಚು ಇಟ್ಟು ದೋಸೆ ಹಾಕಿ ಬೇಯಿಸಿದರೆ ಬಿಸಿ ಬಿಸಿ ಸಿಹಿಗೆಣಸಿನ ದೋಸೆ ಸವಿಯಲು ಸಿದ್ಧ.
ಇದನ್ನು ಶೇಂಗಾ ಚಟ್ನಿ, ಆಲುಗಡ್ಡೆ ಬಾಜಿ, ಸಾಂಬಾರ್ ಅಥವಾ ಇನ್ನಿತರ ಚಟ್ನಿಯೊಂದಿಗೆ ತಿನ್ನಬಹುದು. ಜೊತೆಗೆ ಇದನ್ನು ಚಟ್ನಿ ಸಾಂಬರ್ ಇಲ್ಲದೆ ಬರಿದಾಗಿಯೂ ತಿನ್ನಬಹುದು ರುಚಿಯಾಗಿರುತ್ತದೆ. ನೀವು ಕೂಡ ಮನೆಯಲ್ಲಿ ಒಂದು ಬಾರಿ ಇದನ್ನು ಟ್ರೈ ಮಾಡಿ. ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
-
Vastu Tips for Kitchen: ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಇವು ಇರಬಾರದು.. ಒಮ್ಮೆ ನೋಡಿ! -
Harish Rana: ಭಾರತದ ಮೊದಲ ದಯಾಮರಣದ ಹಕ್ಕುದಾರ ಹರೀಶ್ ರಾಣಾ ನಿಧನ, ಕುಟುಂಬಸ್ಥರಿಂದ ಅಂಗಾಂಗ ದಾನ -
Summer Super Drink: ಪ್ರತಿದಿನ ಎರಡು ಗ್ಲಾಸ್ ಕಬ್ಬಿನ ರಸ: ಬೇಸಿಗೆಯ ಸೂಪರ್ ಡ್ರಿಂಕ್ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ












Click it and Unblock the Notifications