Vinayaka Chaturthi Modaka Recipe: ವಿನಾಯಕ ಚತುರ್ಥಿ ಸ್ಪೆಷಲ್: ರೈಸ್ ದಾಲ್ ಮೋದಕ ತಯಾರಿಸಿ ಗಣೇಶನ ಕೃಪೆಗೆ ಪಾತ್ರರಾಗಿ
ಗಣೇಶ ಚತುರ್ಥಿ ಬರುತ್ತಿದ್ದಂತೆ ಕಡುಬು, ಮೋದಕ ಇತ್ಯಾದಿ ಮಾಡುವುದು ಹೇಗೆ ಎಂದು ಹಲವರು ಅಂತರ್ಜಾಲದಲ್ಲಿ ಹುಡುಕುತ್ತಿರುತ್ತಾರೆ. ನೀವು ಅದನ್ನೇ ಹುಡುಕುತ್ತಿದ್ದೀರಾ? ಹಾಗಾದರೆ ಕಡುಬು ಮತ್ತು ಮೋದಕ ಬದಲಿಗೆ ಬೇರೆ ವಿಧಾನದಲ್ಲಿ ಸಿಹಿ ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ.
ಕಡುಬು ಮತ್ತು ಮೋದಕವನ್ನು ಹಲವು ರೀತಿಯಲ್ಲಿ ಮಾಡಬಹುದು. ಅದರಲ್ಲಿ ರೈಸ್ ದಾಲ್ ಮೋದಕ ಕುಡ ಒಂದು. ಕಡಿಮೆ ಪದಾರ್ಥಗಳಲ್ಲಿ ತ್ವರಿತವಾಗಿ ಮತ್ತು ಸುಲಭವಾಗಿ ರೈಸ್ ದಾಲ್ ಮೋದಕ ತಯಾರಿಸಬಹುದು. ಹಾಗಾದರೆ ತಡ ಮಾಡುವುದು ಬೇಡ ರೈಸ್ ದಾಲ್ ಮೋದಕ ಮಾಡುವುದು ಹೇಗೆ ಎಂದು ತಿಳಿಯೋಣ.

ನೀವು ಕೂಡ ಮನೆಯಲ್ಲಿ ಒಮ್ಮೆ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ. ರೈಸ್ ದಾಲ್ ಮೋದಕ ಮಾಡಲು ಬೇಕಾಗಿರು ಪದಾರ್ಥಗಳು, ವಿಧಾನ ಈ ಕೆಳಗಿನಂತಿದೆ.
ಅಗತ್ಯವಿರುವ ಸಾಮಗ್ರಿಗಳು:
* ಅಕ್ಕಿ - 1 ಕಪ್
* ಕಡಲೆ ಬೇಳೆ - ಅರ್ಧ ಕಪ್
* ನೀರು - 3 ಕಪ್
* ಉಪ್ಪು - ರುಚಿಗೆ ತಕ್ಕಷ್ಟು
* ಬೆಲ್ಲ - 1 1/2 ಕಪ್
* ತೆಂಗಿನ ತುರಿ - 1 ಕಪ್
* ತುಪ್ಪ - 1 tbsp
* ಏಲಕ್ಕಿ ಪುಡಿ - 1/2 ಟೀಸ್ಪೂನ್

ಪಾಕವಿಧಾನ:
* ಮೊದಲು ಅಕ್ಕಿ ಮತ್ತು ಬೇಳೆಯನ್ನು ಒಟ್ಟಿಗೆ ತೆಗೆದುಕೊಂಡು 2-3 ಬಾರಿ ನೀರಿನಿಂದ ತೊಳೆಯಿರಿ.
* ಅಕ್ಕಿ ಮತ್ತು ಬೇಳೆಯನ್ನು ತೊಳೆದ ನಂತರ ಅದು ಮುಳುಗುವಷ್ಟು ನೀರನ್ನು ಹಾಕಿ ಮತ್ತು ಅದನ್ನು ಮುಚ್ಚಿ 1 ಗಂಟೆ ನೆನೆಸಿಡಿ.
* 1 ಗಂಟೆಯ ನಂತರ ಅದರಲ್ಲಿ ನೀರನ್ನು ಫಿಲ್ಟರ್ ಮಾಡಿ ನೆಲದ ಮೇಲೆ ಬಟ್ಟೆಯನ್ನು ಹರಡಿ ಅದರ ಮೇಲೆ ತೊಳೆದ ಅಕ್ಕಿ ಬೇಳೆಯನ್ನು ಹರಡಿ 20 ನಿಮಿಷಗಳ ಕಾಲ ಒಣಗಲು ಬಿಡಿ.
* ಕೈಯಲ್ಲಿ ಮುಟ್ಟಿದರೆ ಅನ್ನ, ಬೇಳೆ ಕೈಗೆ ಅಂಟಿಕೊಳ್ಳಬೇಕು.
* ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಅಕ್ಕಿ ಮತ್ತು ಬೇಳೆಯನ್ನು ಹಾಕಿ ತೇವಾಂಶ ಹೋಗಿ ವಾಸನೆ ಬರುವವರೆಗೆ ಹುರಿದು ತಣ್ಣಗಾಗಲು ಬಿಡಿ.
* ನಂತರ ಹುರಿದ ಅಕ್ಕಿ ಬೇಳೆಯನ್ನು ಮಿಕ್ಸರ್ ಜಾರ್ಗೆ ಹಾಕಿ ಸ್ವಲ್ಪ ಒರಟಾಗಿ ರವೆಯಂತೆ ರುಬ್ಬಿಕೊಳ್ಳಿ.
* ಈ ಪುಡಿಯನ್ನು ಗಾಳಿಯಾಡದ ಡಬ್ಬದಲ್ಲಿ ಇಟ್ಟು ಸೀಲ್ ಮಾಡಿಟ್ಟರೆ ಬೇಕಾದಷ್ಟು ಬಳಸಬಹುದು.
* ಮುಂದೆ ಬಾಣಲೆಯಲ್ಲಿ 3 ಕಪ್ ನೀರು ಹಾಕಿ ಉಪ್ಪು ಹಾಕಿ ಒಲೆಯ ಮೇಲೆ ನೀರು ಸ್ವಲ್ಪ ಬಿಸಿಯಾಗಿರುವಾಗ ರುಬ್ಬಿದ ಅಕ್ಕಿ ಬೇಳೆಯನ್ನು ಸ್ವಲ್ಪ ಸ್ವಲ್ಪವೇ ಹಾಕಿ 5-7 ನಿಮಿಷ ಕಲಕುತ್ತಿರಿ, ಹಿಟ್ಟು ನಯವಾಗುವವರೆಗೂ ಕೈ ಆಡಿಸಿ.
* ನಂತರ ಅದಕ್ಕೆ ಬೆಲ್ಲವನ್ನು ಹಾಕಿ ಬೆಲ್ಲ ಕರಗುವ ತನಕ ಚೆನ್ನಾಗಿ ಕದಡಿ.
* ನಂತರ ಇದಕ್ಕೆ ತೆಂಗಿನ ತುರಿ, ತುಪ್ಪ, ಏಲಕ್ಕಿ ಪುಡಿಯನ್ನು ಹಾಕಿ ಅಂಟದಂತೆ ಚೆನ್ನಾಗಿ ಅಲ್ವಾ ಆಗುವವರೆಗೆ ಕಲಕಿ.
* ಬಳಿಕ ಮೋದಕ ಅಚ್ಚನ್ನು ತೆಗೆದುಕೊಂಡು ಅದಕ್ಕೆ ತುಪ್ಪ ಸವರಿ ಹಿಟ್ಟನ್ನು ಅದರಲ್ಲಿ ಹಾಕಿ ಮೋದಕ ಮಾಡಿ ತಟ್ಟೆಯಲ್ಲಿ ಇಡಿ. ಹಾಗೆಯೇ ಎಲ್ಲಾ ಹಿಟ್ಟನ್ನು ಮೋದಕ ಮಾಡಿ.
* ಕೊನೆಗೆ ಒಲೆಯಲ್ಲಿ ಇಡ್ಲಿ ಪಾತ್ರೆ ಇಟ್ಟು ಅದರಲ್ಲಿ ನೀರು ಹಾಕಿ ನೀರು ಕುದಿಯಲು ಶುರುವಾದಾಗ ಇಡ್ಲಿ ತಟ್ಟೆಗೆ ತುಪ್ಪ ಸವರಿ ಸಿದ್ಧಪಡಿಸಿದ ಮೋದಕಗಳನ್ನು ಇಟ್ಟು ಮುಚ್ಚಿ 15 ನಿಮಿಷ ಕುದಿಸಿದರೆ ರೈಸ್ ದಾಲ್ ಮೊದಕ ರೆಡಿ.
-
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Hotel Gas Bill: ಊಟದ ನಂತರ ಹೋಟೆಲ್ ಬಿಲ್ ನೋಡಿ ದಂಗಾದ ಗ್ರಾಹಕ: ₹1,110 ಬಿಲ್ ಜೊತೆ ₹100 'ಗ್ಯಾಸ್ ಚಾರ್ಜ್'!: ಭಾರೀ ವೈರಲ್ -
Ugadi Wishes 2026: ಯುಗಾದಿ ಹಬ್ಬದ ಶುಭಾಶಯಗಳು, 35+ ಮೆಸೇಜ್, ಶುಭಾಶಯ ಮತ್ತು ಸ್ಟೇಟಸ್ ಸಾಲುಗಳು ಇಲ್ಲಿವೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
Byadgi Red Chilli: ಬ್ಯಾಡಗಿ ಮಾರುಕಟ್ಟೆಗೆ 2.43 ಲಕ್ಷ ಮೆಣಸಿನಕಾಯಿ ಚೀಲ ಆವಕ, ಕ್ವಿಂಟಾಲ್ ದರವೆಷ್ಟಿದೆ? -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
CBSE 10ನೇ ತರಗತಿ ಬೋರ್ಡ್ ಪರೀಕ್ಷೆ 2026: ಫಲಿತಾಂಶ ಯಾವಾಗ ಪ್ರಕಟ?, ಕಳೆದ ವರ್ಷಗಳ ಟ್ರೆಂಡ್ ಹೀಗಿದೆ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Rain Alert: ಕರ್ನಾಟಕದ ಈ 9 ಜಿಲ್ಲೆಗಳಿಗೆ ಮುಂದಿನ 2 ದಿನ ವ್ಯಾಪಕ ಆಲಿಕಲ್ಲು ಮಳೆ ಎಚ್ಚರಿಕೆ












Click it and Unblock the Notifications