Ribbon Pakoda Recipe: ಹೆಸರು ಬೇಳೆ ರಿಬ್ಬನ್ ಪಕೋಡ ತಯಾರಿಸುವ ವಿಧಾನ- ಸಂಜೆ ತಿಂಡಿಗೆ ಮಾಡಿ ನೋಡಿ..
ನಿಮ್ಮ ಮಕ್ಕಳು ಸಂಜೆ ಏನಾದರೂ ಕುರುಕಲು ಬೇಕು ಅಂತ ಹಠ ಮಾಡ್ತಾರಾ? ಪ್ರತಿದಿನ ಸಂಜೆ ಮಕ್ಕಳಿಗೆ ತಿಂಡಿ ಮಾಡಲು ಕಷ್ಟವಾಗುತ್ತಿದಿಯಾ? ಹಾಗಾದರೆ ರಿಬ್ಬನ್ ಪಕೋಡ ಮಾಡಿ.
ಈ ರಿಬ್ಬನ್ ಪಕೋಡ ತುಂಬಾ ರುಚಿಕರವಾಗಿದೆ ಮತ್ತು ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ನೀವು ಅಂಗಡಿಯಲ್ಲಿ ತಿಂಡಿಗಳನ್ನು ಖರೀದಿಸುವುದನ್ನು ತಪ್ಪಿಸಲು ಬಯಸಿದರೆ, ಈ ರಿಬ್ಬನ್ ಪಕೋಡವನ್ನು ತಯಾರಿಸಿ ಕೆಲ ದಿನಗಳವರೆಗೆ ತಾಜಾವಾಗಿ ಇಡಬಹುದು.

ಹಾಗಾದರೆ ತಡ ಮಾಡುವುದು ಬೇಡ. ರಿಬ್ಬನ್ ಪಕೋಡ ತಯಾರಿಸುವುದು ಹೇಗೆ ಅನ್ನೋದನ್ನು ತಿಳಿಯೋಣ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ. ನಿಮ್ಮ ಅನುಭವವನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ರಿಬ್ಬನ್ ಪಕೋಡ ತಯಾರಿಸಲು ಬೇಕಾಗುವ ಸಾಮಾಗ್ರಿಗಳು:
* ಹೆಸರು ಬೇಳೆ - 1 ಕಪ್
* ನೀರು - 3 ಕಪ್
* ಕಡಲೇಬೇಳೆ ಹಿಟ್ಟು - 4 ಕಪ್
* ಎಳ್ಳು - 1 ಚಮಚ
* ಉಪ್ಪು - ರುಚಿಗೆ ತಕ್ಕಂತೆ
* ಇಂಗು ಪುಡಿ - 1/2 ಟೀಸ್ಪೂನ್
* ಮೆಣಸಿನ ಪುಡಿ - 1 1/2 ಟೀಸ್ಪೂನ್
* ಎಣ್ಣೆ - ಕರಿಯಲು

ತಯಾರಿಸುವ ವಿಧಾನ:
* ಮೊದಲು ಬೇಳೆಯನ್ನು ನೀರಿನಿಂದ 2 ಬಾರಿ ತೊಳೆಯಿರಿ.
* ನಂತರ ತೊಳೆದ ಹೆಸರು ಬೇಳೆಯನ್ನು ಕುಕ್ಕರ್ ನಲ್ಲಿ ಹಾಕಿ ಅದರಲ್ಲಿ 3 ಕಪ್ ನೀರು ಹಾಕಿ ಕುಕ್ಕರ್ ಮುಚ್ಚಿ ಒಲೆಯ ಮೇಲೆ ಇಟ್ಟು 5 ವಿಶಲ್ ಆದ ನಂತರ ಇಳಿಸಿ.
* ಬಳಿಕ ಕುದ್ದ ಬೇಳೆಯನ್ನು ನಿಧಾನವಾಗಿ ಮ್ಯಾಶ್ ಮಾಡಿ.
* ನಂತರ ಅಗಲವಾದ ಪಾತ್ರೆಯಲ್ಲಿ ಕಡಲೆಬೇಳೆ ಹಿಟ್ಟನ್ನು ತೆಗೆದುಕೊಳ್ಳಿ.
* ನಂತರ ಇದಕ್ಕೆ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಇಂಗು ಪುಡಿ, ಮೆಣಸಿನ ಪುಡಿ ಹಾಕಿ ಕೈಯಿಂದ ಒಮ್ಮೆ ಕದಡಿ.
* ನಂತರ ಅದಕ್ಕೆ ಕುದುಸಿದ ಬೇಳೆಯನ್ನು ಹಾಕಿ ನೀರು ಹಾಕದೆ ಚೆನ್ನಾಗಿ ನಾದಿಕೊಳ್ಳಿ.
* ತುಂಬಾ ದಪ್ಪವಾಗಿದ್ದರೆ ಸ್ವಲ್ಪ ನೀರು ಚಿಮುಕಿಸಿ ಚೆನ್ನಾಗಿ ನಾದಿಕೊಳ್ಳಿ.

* ನಂತರ ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಕರಿಯಲು ಬೇಕಾದಷ್ಟು ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
* ಎಣ್ಣೆ ಚೆನ್ನಾಗಿ ಬಿಸಿಯಾದಾಗ, ಅದನ್ನು ಮಧ್ಯಮ ಉರಿಯಲ್ಲಿ ಇರಿಸಿ.
* ಚಕುಲಿ ಒತ್ತುವ ಬಟ್ಟಲು ತೆಗೆದುಕೊಂಡು ಅದರಲ್ಲಿ ರಿಬ್ಬನ್ ಪ್ಲೇಟ್ ಇಟ್ಟು ಹಿಟ್ಟನ್ನು ಹಾಕಿ ಎಣ್ಣೆಯಲ್ಲಿ ಬಿಡಿ.
* ಪಕೋಡವನ್ನು ಹಿಂಡಿದ ತಕ್ಷಣ, 1 ನಿಮಿಷ ಅವುಗಳನ್ನು ತಿರುಗಿಸದೆ ಬಿಟ್ಟುಬಿಡಿ. ನಂತರ ಅವುಗಳನ್ನು ತಿರುಗಿಸಿ ಮತ್ತು ಗೋಲ್ಡನ್ ಬ್ರೌನ್ ರವರೆಗೆ ಫ್ರೈ ಮಾಡಿ. ಅದೇ ರೀತಿಯಲ್ಲಿ ರುಚಿಕರವಾದ ರಿಬ್ಬನ್ ಪಕೋಡ ಎಣ್ಣೆಯಲ್ಲಿ ಒತ್ತಿ ಫ್ರೈ ಮಾಡಿದರೆ ರುಚಿಕರವಾದ ರಿಬ್ಬನ್ ಪಕೋಡ ಸವಿಯಲು ಸಿದ್ದ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ












Click it and Unblock the Notifications