Potato Dry Chips Recipe: ಬೇಸಿಗೆಯಲ್ಲಿ ಆಲುಗಡ್ಡೆ ಸ್ಲೈಸ್ ಒಣಗಿಸಿ- ಮಳೆಗಾಲದಲ್ಲಿ ತಿನ್ನಿ ಮಜಾನೇ ಬೇರೆ..
ಸಾಮಾನ್ಯವಾಗಿ ಆಲುಗಡ್ಡೆ ಚಿಪ್ಸ್ ಬಹುತೇಕರ ನೆಚ್ಚಿನ ಕುರುಕುಲು ತಿಂಡಿ. ಕೆಲವೇ ನಿಮಿಷಗಳಲ್ಲಿ ರೆಡಿಯಾಗುವ ಈ ತಿಂಡಿಯನ್ನು ವಿಧವಿಧವಾಗಿ ತಯಾರಿಸಲಾಗುತ್ತದೆ. ಈ ತಿಂಡಿ ಎಲ್ಲಾ ಕಾಲಕ್ಕೂ ಸರಿ ಹೊಂದುವುದರಿಂದ ಬಹುತೇಕರ ಫೇವರಿಟ್ ಕೂಡ ಹೌದು. ನೀವು ಕೂಡ ಆಲುಗಡ್ಡೆ ಚಿಪ್ಸ್ ಪ್ರಿಯರಾಗಿದ್ದರೆ ಹೊಸ ರೀತಿಯಲ್ಲಿ ಚಿಪ್ಸ್ ರೆಡಿ ಮಾಡಿ ಸವಿಯಬಹುದು.
ಹೌದು... ಫ್ರೆಂಚ್ ಪ್ರೈಸ್, ಚಿಪ್ಸ್ ತಿಂದು ಬೇಜಾರಾಗಿದ್ದರೆ ಆಲುಗಡ್ಡೆ ಸ್ಲೈಸ್ನಿಂದ ವಿಭಿನ್ನ ಬಗೆಯ ಚಿಪ್ಸ್ ರೆಡಿ ಮಾಡಿ. ಇದನ್ನು ಹಲವಾರು ತಿಂಗಳುಗಳ ಕಾಲ ಶೇಖರಿಸಿ ಇಡಬಹುದು. ಹಾಗಾದರೆ ತಡ ಮಾಡುವುದು ಬೇಡ ಆಲುಗಡ್ಡೆಯಿಂದ ಬೇಸಿಗೆಯಲ್ಲಿ ಯಾವ ರೀತಿ ಚಿಪ್ಸ್ ಮಾಡಿ ಇಟ್ಟುಕೊಳ್ಳಬಹುದು ಎಂದು ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಆಲುಗಡ್ಡೆ 10
* ಉಪ್ಪು ರುಚಿಗೆ ತಕ್ಕಷ್ಟು
* ಖಾರದ ಪುಡಿ ಅಗತ್ಯ ಇರುವಷ್ಟು
* ಅರಿಶಿಣ ಅರ್ಧ ಚಮಚ
* ಅಡುಗೆ ಎಣ್ಣೆ
* ಜೀರಿಗೆ ಪುಡಿ
ತಯಾರಿಸುವ ವಿಧಾನ:-
* ಆಲುಗಡ್ಡೆ ಡ್ರೈ ಚಿಪ್ಸ್ ತಯಾರಿಸುವುದು ತುಂಬಾ ಸುಲಭ. ಮೊದಲಿಗೆ ತಾಜಾ ಆಲುಗಡ್ಡೆಯನ್ನು ತೆಗೆದುಕೊಂಡು ತೊಳೆದು ನೀರಿಲ್ಲದಂತೆ ಒಣಗಿಸಿ.
* ನಂತರ ಆಲುಗಡ್ಡೆ ಸ್ಲೈಸ್ ಮಾಡಿ, ಅದನ್ನು ಬಿಸಿಲಿಗೆ ಹಾಕಿ ಚೆನ್ನಾಗಿ ಒಣಗಲು ಬಿಡಿ.
* ಆಲುಗಡ್ಡೆ ಸಂಪೂರ್ಣವಾಗಿ ನೀರಿನಾಂಶ ಇಲ್ಲದಂತೆ ಒಣಗಬೇಕು.
* ನಂತರ ಒಂದು ಪಾತ್ರೆಯಲ್ಲಿ ಕರಿಯಲು ಬೇಕಾಗುವಷ್ಟು ಎಣ್ಣೆಯನ್ನು ಹಾಕಿ, ಒಣಗಿದ ಆಲುಗಡ್ಡೆ ಸ್ಲೈಸ್ ಅನ್ನು ಎಣ್ಣೆಯಲ್ಲಿ ಹಾಕಿ
* ಆಲುಗಡ್ಡೆ ಸ್ಲೈಸ್ ಸ್ವಲ್ಪ ಕಂದು ಬಣ್ಣ ಬಂದ ಬಳಿಕ ಎಣ್ಣೆಯಿಂದ ತೆಗೆದು ಬಿಡಿ
* ಬಳಿಕ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯವಿರುವಷ್ಟು ಖಾರದ ಪುಡಿ, ಸ್ವಲ್ಪ ಜೀರಿಗೆ ಪುಡಿ, ಅರಿಶಿಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದರೆ ಆಲುಗಡ್ಡೆ ಡ್ರೈ ಚಿಪ್ಸ್ ಸವಿಯಲು ಸಿದ್ಧ.
ಇದು ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುತ್ತದೆ. ಆದರೆ ಮನೆಯಲ್ಲಿ ತಯಾರಿಸುವ ಆಲುಗಡ್ಡೆ ಡ್ರೈ ಚಿಪ್ಸ್ ಆರೋಗ್ಯಕ್ಕೆ ಒಳ್ಳೆಯದು. ಜೊತೆಗೆ ರುಚಿ ಕೂಡ ತುಂಬಾ ಚೆನ್ನಾಗಿ ಇರುತ್ತದೆ.
-
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger











Click it and Unblock the Notifications