Get Updates
Get notified of breaking news, exclusive insights, and must-see stories!

ಪ್ರಕೃತಿಯೇ ಪರೋಪಕಾರಿಯಾಗಿರುವಾಗ ನಾವೇಕೆ ಸ್ವಾರ್ಥಿಗಳಾಗುತ್ತಿದ್ದೇವೆ?

ಪ್ರಕೃತಿ ನಮಗೆ ವರದಾನವಾಗಿದೆ. ಇಲ್ಲಿರುವ ಪ್ರಾಣಿ, ಪಕ್ಷಿ ಮರಗಿಡಗಳೆಲ್ಲವೂ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಉಪಕಾರಿಗಳೇ.. ಹೀಗಿರುವಾಗ ಚಿಂತನಾಶೀಲ ಶಕ್ತಿಯಿರುವ ಮನುಷ್ಯರಾದ ನಾವೇಕೆ ಬರೀ ಸ್ವಾರ್ಥವನ್ನೇ ತುಂಬಿಕೊಂಡು ನಾನು, ನನ್ನದು ಎಂಬುದರಲ್ಲೇ ಬದುಕನ್ನು ಕಳೆಯುತ್ತಾ ಸ್ವಾರ್ಥಿಗಳಾಗುತ್ತಿದ್ದೇವೆ. ನಮಗೆ ಗೊತ್ತಿಲ್ಲದಂತೆ ನಮ್ಮಲ್ಲಿ ಪರೋಪಕಾರಣದ ಗುಣ ಸತ್ತು ಹೋಗುತ್ತಿದೆ. ಇದು ನಮ್ಮೊಳಗಿನ ಸಂಬಂಧವನ್ನೇ ಕಡಿದುಕೊಳ್ಳುವಷ್ಟರ ಮಟ್ಟಿಗೆ ಹೋಗಿ ನಿಲ್ಲುತ್ತಿದೆ.

ಮನುಷ್ಯ ಸಂಘಜೀವಿಯಾಗಿದ್ದು, ಎಲ್ಲರ ನಡುವೆ ಬದುಕಬೇಕಾಗಿದೆ. ಹೀಗಿರುವಾಗ ಸ್ವಲ್ಪ ಮಟ್ಟಿಗೆಯಾದರೂ ನಾವು ಪರೋಪಕಾರದ ಗುಣಗಳನ್ನು ಹೊಂದದಿದ್ದರೆ ಕಷ್ಟವಾಗುತ್ತದೆ. ನಾವೆಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಸ್ವಾರ್ಥಿಗಳಾಗಿದ್ದೇವೆ. ಅದಕ್ಕಿಂತ ಹೆಚ್ಚಾಗಿ ಇದ್ದುದರಲ್ಲಿ ನೆಮ್ಮದಿ ಕಾಣುವ ಜಾಯಮಾನವೂ ನಮ್ಮದಲ್ಲ. ಏನು ಸಿಕ್ಕರೂ ಅದರಲ್ಲಿ ತೃಪ್ತಿ ಹೊಂದುತ್ತಿಲ್ಲ. ಇನ್ನು ಬೇಕೆಂಬ ದುರಾಸೆ ಮತ್ತು ನಾನು, ನನ್ನದು ಎಂಬ ಅಹಂ, ಮೊದಲಾವುಗಳು ಸೇರಿ ನಮ್ಮಲ್ಲಿರುವ ಪರೋಪಕಾರದ ಗುಣಗಳನ್ನು ನಾಶ ಮಾಡುತ್ತಿವೆ.

Life Tips Why Are We Being Selfish When Nature Itself Is Benevolent

ನಿಸರ್ಗ ಸೃಷ್ಠಿಯಲ್ಲಿರುವ ಪ್ರಾಣಿ, ಪಕ್ಷಿ, ಮರಗಿಡಗಳು ಮಾನವನಿಗೆ ಹಲವು ರೀತಿಯಲ್ಲಿ ಉಪಯೋಗಿಗಳಾಗಿವೆ. ಮರ, ನೆರಳು, ಹಣ್ಣು ನೀಡುತ್ತದೆ. ಇನ್ನು ನದಿಗಳ ಉಪಯೋಗ ಒಂದೆರಡಲ್ಲ. ಬೆಟ್ಟಗಳು ಬೀಸುವ ಮಾರುತಗಳನ್ನು ತಡೆದು ಮಳೆ ಸುರಿಸುತ್ತವೆ. ಹೀಗೆ ಈ ಭೂಮಿ ಮೇಲೆ ಸೃಷ್ಠಿಯಾಗಿರುವ ಸಕಲ ಜೀವ ರಾಶಿಯೂ ಒಂದೊಂದು ರೀತಿಯಲ್ಲಿ ಉಪಯೋಗಿಯಾಗಿರುವಾಗ ನಾವು ಮಾತ್ರ ಕೇವಲ ನಮಗಾಗಿ ಬದುಕುತ್ತೇವೆ. ಮಾಡಿದ ಸಂಪಾದನೆಯಲ್ಲಿ ನಾಳೆಗೆ, ಮಕ್ಕಳಿಗೆ ಎಂದು ಕೂಡಿಡುತ್ತೇವೆ. ಮನೆ, ಆಸ್ತಿ, ಕಾರು ಹೀಗೆ ಒಂದು ಆದ ಮೇಲೊಂದು ಪಡೆಯುತ್ತಲೇ ಹೋಗುತ್ತೇವೆ.

ನಮ್ಮ ಜೀವನ ಸಾರ್ಥಕ್ಯಗೊಳಿಸಬೇಕು

ನಮ್ಮ ಸಂಪಾದನೆಯಲ್ಲಿ ಒಂದಷ್ಟು ಬಡ ಜನತೆಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಹೆಚ್ಚಿನವರಿಗಿಲ್ಲ. ಕೆಲವರಿದ್ದಾರೆ ದಾನ, ಧರ್ಮ ಮಾಡುತ್ತಾರಾದರೂ ಅದನ್ನು ಎಲ್ಲರ ಎದುರು ಗುರುತಿಸಿಕೊಂಡು ಪ್ರಚಾರ ಪಡೆದುಕೊಳ್ಳುತ್ತಾರೆ. ಮನುಷ್ಯ ಜೀವನ ಶ್ರೇಷ್ಠವಾದದ್ದು, ಪ್ರಾಣಿ, ಪಕ್ಷಿಗಳಿಗೆ ಹೋಲಿಸಿದರೆ ಚಿಂತನಾಶೀಲ ಮನಸ್ಸಿದೆ. ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಲ್ಲ. ಕೈಕಾಲು, ಕಿವಿ, ಕಣ್ಣು, ಮೂಗು, ನಾಲಿಗೆಯಂತಹ ಪಂಚೇಂದ್ರಿಯಗಳನ್ನು ಹೊಂದಿದ್ದಾನೆ. ಹೀಗಿರುವಾಗ ಇದೆಲ್ಲವನ್ನು ಬಳಸಿಕೊಂಡು ಜೀವನವನ್ನು ಸಾರ್ಥೈಕ್ಯಗೊಳಿಸಬೇಕು.

Life Tips Why Are We Being Selfish When Nature Itself Is Benevolent

ಇವತ್ತಿನ ಪರಿಸ್ಥಿತಿಯಲ್ಲಿ ಹಣ ಮಾಡಬೇಕು ಅದರಿಂದ ಸುಖಸಂಪತ್ತನ್ನು ಗುಡ್ಡೆ ಹಾಕಿಕೊಳ್ಳಬೇಕೆಂದು ಬಯಸುತ್ತೇವೆ. ಆ ಮೂಲಕ ಪ್ರಾಣಿಗಳಿಗಿಂತ ಕಡೆಯಾಗಿ ಜೀವನ ಸಾಗಿಸುತ್ತಿದ್ದೇವೆ. ನಿಜ ಹೇಳಬೇಕೆಂದರೆ ಪ್ರಾಣಿಗಳಿಗೆ ವಿವೇಚನಾಶಕ್ತಿಯಿಲ್ಲ. ಅವು ಹುಟ್ಟಿದಕ್ಕಾಗಿ ಬದುಕುತ್ತವೆ. ಹಸಿವಾದಾಗ ಆಹಾರ ತಿನ್ನುತ್ತವೆ. ಇವತ್ತು ಸಿಕ್ಕಿದನ್ನು ನಾಳೆಗೆ ಉಳಿಸಿಕೊಳ್ಳುವ ಜಾಣ್ಮೆ ಅವುಗಳಿಗಿಲ್ಲ. ಅವುಗಳು ಅವತ್ತಿಗೆ ಆ ಹೊತ್ತಿಗೆ ಏನು ಸಿಗುತ್ತೋ ಅದನ್ನು ತಿನ್ನುತ್ತವೆ. ಹಸಿವಾದಾಗ ಆಹಾರಕ್ಕಾಗಿ ಏನು ಬೇಕಾದರೂ ಮಾಡುತ್ತವೆ. ಆದರೆ ಇವತ್ತು ಆ ಕಾಡು ಪ್ರಾಣಿಗಳು ಕೂಡ ಉಪದ್ರವಿಗಳಾಗುತ್ತಿವೆ. ಇದಕ್ಕೆ ಮನುಷ್ಯನಾದ ನಾವೇ ಕಾರಣ ಎಂದರೂ ತಪ್ಪಾಗಲಾರದು.

ಸಮಾಜಕ್ಕೆ ಕೊಡುಗೆಯಾಗಿ ಉಳಿಯಬೇಕು

ಪ್ರಕೃತಿಯಲ್ಲಿ ಕಾಲ ಕಾಲಕ್ಕೆ ಏನೆಲ್ಲ ಆಗಬೇಕೋ ಅದೆಲ್ಲವೂ ಆಗುತ್ತಿದ್ದರೆ ಮಾತ್ರ ಎಲ್ಲರೂ ನೆಮ್ಮದಿಯಾಗಿ ಬದುಕಲು ಸಾಧ್ಯ. ಮಳೆಗಾಲದಲ್ಲಿ ಮಳೆ, ಬೇಸಿಗೆಯಲ್ಲಿ ಬಿಸಿಲು, ಚಳಿಗಾಲದಲ್ಲಿ ಚಳಿ ಇದೆಲ್ಲವೂ ಆಯಾಯ ಕಾಲಕ್ಕೆ ತಕ್ಕಂತೆ ಇಲ್ಲದಿದ್ದರೆ ನಾವೆಲ್ಲರೂ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಿರುವಾಗ ನಾವು ಮನುಷ್ಯರು ಮತ್ತೊಬ್ಬರನ್ನು ತುಳಿಯುವ, ಆತನ ಬದುಕನ್ನು ಹಾಳು ಮಾಡುವ ಕೃತ್ಯಕ್ಕಿಳಿಯದೆ ಒಳ್ಳೆಯದನ್ನು ಮಾಡೋಣ. ಒಬ್ಬನಿಗೆ ಒಳ್ಳೆ ಬದುಕನ್ನು ನೀಡಲು ಸಾಧ್ಯವಿಲ್ಲದ ಮೇಲೆ ಅವನ ಬದುಕನ್ನು ಹಾಳು ಮಾಡುವುದೆಷ್ಟರ ಮಟ್ಟಿಗೆ ಸರಿ?.

ನಾವು ಹುಟ್ಟಿದ್ದೇ ನಮಗಾಗಿ ಬದುಕಲು ಎಂಬುದನ್ನು ಮರೆತು ಯಾವುದಾದರೊಂದು ರೀತಿಯಲ್ಲಿ ಸಮಾಜಕ್ಕೆ ಕೊಡುಗೆ ನೀಡಬಹುದು ಆ ಮೂಲಕ ಪರೋಪಕಾರಿಗಳಾಗಬಹುದು. ಈ ಜಗತ್ತಿನಲ್ಲಿ ಹೂವು, ಹಣ್ಣು ಎಲ್ಲವೂ ಬೇರೆಯವರಿಗಾಗಿ ಬದುಕುವಾಗ ಮನುಷ್ಯರಾದ ನಾವು ಕೇವಲ ನಮಗಾಗಿ ಬದುಕುವುದರಲ್ಲಿ ವಿಶೇಷವೇನಿದೆ? ನಾವು ಮನಸ್ಸು ಮಾಡಿದರೆ ನಮ್ಮ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಸೇವೆಗಳ ಮೂಲಕವೇ ಸಮಾಜಕ್ಕೆ ಕೊಡುಗೆಯಾಗಬಹುದು. ಆದರೆ ನಾವು ಮನಸ್ಸು ಮಾಡಬೇಕಷ್ಟೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+