ಆಶಾಭಾವನೆಯೇ ನಮ್ಮ ಬದುಕಿಗೆ ಟಾನಿಕ್: ಯಾಕೆ ಗೊತ್ತಾ?
ಬದುಕು ಅನುಭವಗಳ ಸಂತೆ. ಇಲ್ಲಿ ಸುಖ, ದುಃಖ, ನೋವು, ನಲಿವು, ಸೋಲು, ಗೆಲುವು ಹೀಗೆ ಯಾವುದು ಇಲ್ಲ ಹೇಳಿ? ಎಲ್ಲವೂ ಇದೆ. ಎಂದ ಮೇಲೆ ಅದೆಲ್ಲವನ್ನು ಮೀರಿ ಬದುಕುವುದು ಕೂಡ ಅನಿವಾರ್ಯವೇ... ಹೀಗಾಗಿ ಎಲ್ಲ ನೋವುಗಳನ್ನು ನುಂಗಿ ಸಂತಸದಿಂದ ಬದುಕಬೇಕಾದರೆ ಅದಕ್ಕೆ ಟಾನಿಕ್ ಆಶಾಭಾವನೆ ಎಂದರೆ ತಪ್ಪಾಗಲಾರದು.
ನಾವೆಲ್ಲರೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸಿದವರೇ ಕೆಲವು ಸಮಸ್ಯೆಗಳು ಆಕಸ್ಮಿಕವಾಗಿ ಬಂದು ನಮ್ಮನ್ನು ತಟ್ಟಿರಬಹುದು. ಮತ್ತೆ ಕೆಲವು ಸಮಸ್ಯೆಗಳನ್ನು ನಾವೇ ಮೈಮೇಲೆ ಎಳೆದುಕೊಂಡಿರುತ್ತೇವೆ. ಎಲ್ಲ ಸಮಸ್ಯೆಗಳಿಗೆ ಪರಿಹಾರ ಇದ್ದೇ ಇರುತ್ತದೆ. ಹೀಗಿರುವಾಗ ಸಣ್ಣಪುಟ್ಟ ಸಮಸ್ಯೆಗೆ ಹೆದರಿ ಅದಕ್ಕೆ ಬದುಕನ್ನೇ ಬಲಿಕೊಡುವ ಬದಲು ಎದುರಿಸಿ ನಿಲ್ಲಬೇಕು. ಅದು ಸಾಧ್ಯವಾಗಬೇಕಾದರೆ ನಮ್ಮ ಬದುಕಿನಲ್ಲಿ ಆಶಾಭಾವನೆ ಬೆಳೆಸಿಕೊಳ್ಳಬೇಕು.

ಜೀವನದಲ್ಲಿ ಮೇಲಿಂದ ಮೇಲೆ ಬರುವ ಸೋಲು, ಕಷ್ಟ ಕಾರ್ಪಣ್ಯಗಳು, ನನ್ನಿಂದ ಇನ್ನು ಮುಂದೆ ಏನೂ ಸಾಧ್ಯವಾಗಲಾರದೆಂಬ ಭಾವನೆ, ಅಸಹಾಯಕತೆ, ಇಲ್ಲಿಗೆ ಬದುಕು ಮುಗಿದೇ ಬಿಟ್ಟಿತೆಂಬ ನಿರಾಸೆ.. ಇದೆಲ್ಲವೂ ನಮ್ಮ ಬದುಕನ್ನೇ ಮೂರಾಬಟ್ಟೆ ಮಾಡಿಬಿಡುತ್ತದೆ. ಇಂತಹ ಸಂದರ್ಭಗಳಲ್ಲಿ ನಮ್ಮನ್ನು ಕಾಪಾಡುವುದು ಆಶಾಭಾವನೆ ಮಾತ್ರ ಎಂದರೆ ತಪ್ಪಾಗಲಾರದು.
ನಿರಾಸೆ ಕಾಡುವುದೇಕೆ? ಚಿಂತಕರು ಹೇಳುವುದೇನು?
ಜೀವನದ ಬಗ್ಗೆ ನಿರಾಸೆ ಕಾಡಿತೆಂದರೆ ಮತ್ತೆ ನಾವು ಮೇಲೇಳುವುದು ಕಷ್ಟ ಸಾಧ್ಯ. ಬಹಳಷ್ಟು ಮಂದಿಯ ಬದುಕಿನ ಇತಿಶ್ರೀಗೂ ನಿರಾಸೆಯೇ ಕಾರಣವಾಗಿ ಬಿಡುತ್ತದೆ. ಬದುಕಿನಲ್ಲಿ ನಿರಾಸೆ ಇಣುಕಿತೆಂದರೆ ಏನೇನು ಮಾಡಲು ಮಾಡಲು ಸಾಧ್ಯವಾಗುವುದಿಲ್ಲ. ಒಂದೊಂದು ಕ್ಷಣವೂ ನರಕವಾಗಿ ಪರಿಣಮಿಸುತ್ತದೆ. ಮುಂದೆ ನಡೆಯಲು ಮಾರ್ಗ ಇಲ್ಲವೇನೋ ಎಂಬ ಭಾವ ಕಾಡುತ್ತದೆ. ಇಂತಹ ನಿರಾಸೆಯನ್ನು ಹೊಡೆದೊಡಿಸಿ ಆಶಾಭಾವನೆ ಬೆಳೆಸಿಕೊಳ್ಳುವುದು ಬಹುಮುಖ್ಯವಾಗಿದೆ.

ಹಾಗಾದರೆ ನಿರಾಸೆ ಕಾಡುವುದೇಕೆ ಎಂಬ ಪ್ರಶ್ನೆಗೆ ಆಧ್ಯಾತ್ಮಿಕ ಚಿಂತಕರು ಅಜ್ಞಾನವೇ ಕಾರಣ ಎಂಬ ಉತ್ತರವನ್ನು ನೀಡುತ್ತಾರೆ. ಅಷ್ಟೇ ಅಲ್ಲ. ನಮ್ಮಲ್ಲಿರುವ ಅಪಾರವಾದ ಪ್ರತಿಭೆ, ಸೃಜನಶೀಲತೆ ಇವುಗಳನ್ನು ಗುರುತಿಸಿಕೊಳ್ಳದಿರವುದೂ ನಿರಾಸೆಗೆ ಕಾರಣವಾಗಿ ಬಿಡುತ್ತದೆ. ನಮ್ಮನ್ನು ಅನಾರೋಗ್ಯ ಕಾಡಬಹುದು. ಅದು ಭಯಂಕರ ರೋಗವೂ ಆಗಿರಬಹುದು. ರೋಗ ಬಂದಿದೆ ಎಂದ ತಕ್ಷಣ ಜೀವನದಲ್ಲೇನಿದೆ? ನಾನು ಸಾಯುವುದು ಖಂಡಿತಾ ಎಂಬ ನಿರಾಸೆ ನಮ್ಮನ್ನು ಕಾಡಿದರೆ ಬಹಳಷ್ಟು ಬೇಗನೇ ಆರೋಗ್ಯ ಹದಗೆಟ್ಟು ಸಾವಿಗೆ ಶರಣಾಗಿ ಬಿಡುತ್ತೇವೆ. ಅದರ ಬದಲಿಗೆ ಆ ಬಗ್ಗೆ ಯೋಚಿಸದೆ ನಗು ನಗುತ್ತಾ ಇರಬೇಕು. ಏಕೆಂದರೆ ಆರೋಗ್ಯ ಹದಗೆಟ್ಟಿದ್ದರೂ ಜೀವನದಲ್ಲಿ ನಗು ನಗುತ್ತಾ ಬದುಕುತ್ತಿರುವವರು ಇದ್ದಾರೆ ಎಂಬುದನ್ನು ನಾವು ಮರೆಯಬಾರದು.
ಆಶಾಭಾವ ಜೀವನ, ನಿರಾಸೆ ಭಾವ ಮರಣ
ಜೀವನದಲ್ಲಿ ಕಷ್ಟಗಳು ಬರುತ್ತವೆ. ನೋವುಗಳಿರುತ್ತವೆ. ಆತಂಕ, ತಂಟೆ, ತಕರಾರು, ಸಮಸ್ಯೆ ಎಲ್ಲವೂ ಇದ್ದೇ ಇರುತ್ತದೆ. ಆದರೆ ಅದನ್ನೇ ಯೋಚಿಸುತ್ತಾ ನರಳಾಡಿದರೆ ಯಾವುದೇ ಪರಿಹಾರ ಸಿಗದು. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಬೆಳಕಿನ ದಾರಿ ಇದ್ದೇ ಇದೆ. ಬುದ್ದಿವಂತರು ತಮ್ಮ ಬುದ್ದಿವಂತಿಕೆಯನ್ನು ಬಳಸಿಕೊಂಡು ಬೆಳಕಿನ ದಾರಿ ಹಿಡಿಯುತ್ತಾರೆ, ಮುನ್ನಡೆಯುತ್ತಾರೆ, ಸಮಸ್ಯೆ ಪರಿಹರಿಸಿಕೊಳ್ಳುತ್ತಾರೆ.
ಬುದ್ದಿವಂತನಾದವನು, ವಿವೇಕಿಯಾದವನು, ಚತುರನಾದವನು, ಕ್ರಿಯಾಶೀಲನಾದವನು, ಜ್ಞಾನಿಯಾದವನು ಒಂದು ಸಮಸ್ಯೆಗೆ ನೂರಾರು ಪರಿಹಾರದ ದಾರಿಗಳನ್ನು ಕಂಡು ಹಿಡಿಯುತ್ತಾನೆ. ಆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುತ್ತಾನೆ. ಜೀವನದಲ್ಲಿ ಆಶಾಭಾವನೆ ಬೇಕು. ಏಕೆಂದರೆ ಬದುಕಿನಲ್ಲಿ ಆಶಾಕಿರಣಗಳ ಹೊಂಬಿಸಿಲು ತುಂಬಿರಬೇಕು. ನಿರಾಶವಾದಿಯಾಗಬಾರದು. ಆಶಾಭಾವನೆಯೇ ಜೀವನ, ನಿರಾಸಭಾವನೆಯೇ ಮರಣ ಎನ್ನುವುದನ್ನು ಮರೆಯಬಾರದು.
ಆಶಾಭಾವನೆಯು ರೂಪುಗೊಳ್ಳುವುದು ಹೇಗೆ?
ಆಧ್ಯಾತ್ಮಿಕ ಚಿಂತಕರ ಪ್ರಕಾರ ಸಮಯ ಪರಿಪಾಲನೆ ಮಾಡುವವರಲ್ಲಿ ನಿರಾಸೆಗೆ ಅವಕಾಶವಿರುವುದಿಲ್ಲ.. ಸಮಸ್ಯೆಗಳು ವಕ್ಕರಿಸಿದರೂ ಸಮಯ ಪರಿಪಾಲನಾಶೀಲವುಳ್ಳವರು ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾರೆ. ಸಮಯ ನಿಯೋಜನೆಯ ಗುಣಶೀಲನು ಉನ್ನತ ಮನೋಬಲವುಳ್ಳವನಾಗಿರುತ್ತಾನೆ. ಸಮಯಶೀಲನಿಗೆ ಜೀವನದಲ್ಲಿ ಆತ್ಮವಿಶ್ವಾಸದ ಭರವಸೆಯಿರುತ್ತದೆ. ಆಶಾಭಾವನೆಯು ರೂಪುಗೊಳ್ಳಲು ಸಮಯಪ್ರಜ್ಞೆ ಮುಖ್ಯವಾಗಿದ್ದು, ಸಮಯ ಪರಿಪಾಲನೆ, ಸದುಪಯೋಗ ಕಾಪಾಡುತ್ತದೆ.
ಸಮಯ ಪ್ರಜ್ಞೆಯು ಆಶಾಜ್ಯೋತಿಯನ್ನು ಬೆಳಗಿಸುತ್ತದೆ. ಸೋಮಾರಿಯಾಗಿರದೆ ನಿರಂತರ ಕ್ರಿಯಾಶೀಲ ಚಟುವಟಿಕೆಯಿಂದ ಆಸಕ್ತಿಯಿಂದ ಎಲ್ಲರೊಂದಿಗೆ ಬೆರೆಯುವುದನ್ನು ರೂಢಿ ಮಾಡಿ ಮಾಡಿಕೊಳ್ಳಬೇಕು. ಜತೆಗೆ ಬದುಕು ಇಲ್ಲಿಗೆ ಮುಗಿದಿಲ್ಲ ಮುಂದೆಯೂ ಇದೆ ಎಂಬ ಆಶಾ ಭಾವನೆಯನ್ನು ಬೆಳೆಸಿಕೊಂಡು ಮುನ್ನಡೆದರೆ ನಮ್ಮನ್ನು ಕವಿದಿರುವ ನಿರಾಸೆಯ ಮಂಕು ದೂರವಾಗಿ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ನಾವು ಏನು ಮಾಡುತ್ತಿದ್ದೇವೆಯೋ ಅದನ್ನು ಖುಷಿಖುಷಿಯಾಗಿ ಮಾಡುವುದನ್ನು ಕಲಿತರೆ ನಾವು ಕೂಡು ಖುಷಿಯಾಗಿರಲು ಸಾಧ್ಯವಾಗುತ್ತದೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications