ಬೆಣ್ಣೆ ಕದಿಯುವ ಕೃಷ್ಣನಿಗೆ ಪ್ರಿಯವಾದ ಪ್ರಸಾದ ಯಾವುದು? ಅದನ್ನು ಮಾಡುವ ವಿಧಾನ ಇಲ್ಲಿದೆ...
ಹಂಚಿ ತಿನ್ನುವುದು ಪ್ರಸಾದ. ಪ್ರಸಾದ ಹಂಚಿಕೊಂಡು ತಿಂದರೆ ಅದ್ರಲ್ಲಿರುವ ತೃಪ್ತಿಯೇ ಬೇರೆ. ಈ ಬಾರಿ ಕೃಷ್ಣಜನ್ಮಾಷ್ಟಮಿಗೆ ಬಹುತೇಕ ದೇವಸ್ಥಾನಗಳಲ್ಲಿ ವಿಶೇಷ ಪ್ರಸಾದವನ್ನು ತಯಾರು ಮಾಡಲಾಗುತ್ತದೆ. ಅದುವೇ ಹಯಗ್ರೀವ ಪ್ರಸಾದ. ಹಯಗ್ರೀವ ಪ್ರಸಾದವನ್ನು ಶ್ರೀಕೃಷ್ಣನಿಗೆ ಪ್ರಿಯವಾದದ್ದು ಎನ್ನಲಾಗುತ್ತದೆ.
ಹಾಗಾದರೆ ಈ ಬಾರಿಯ ಶ್ರೀಕೃಷ್ಣಜನ್ಮಾಷ್ಟಮಿಗೆ ಹಯಗ್ರೀವ ಪ್ರಸಾದವನ್ನು ಮಾಡುವುದು ಹೇಗೆ ಎಂದು ತಿಳಿಯೋಣ. ನೀವು ಕೂಡ ನಿಮ್ಮ ಮನೆಯಲ್ಲಿ ಕೃಷ್ಣಜನ್ಮಾಷ್ಟಮಿ ಹಬ್ಬವನ್ನು ಆಚರಣೆ ಮಾಡುತ್ತಿದ್ದರೆ, ಹಯಗ್ರೀವ ಪ್ರಸಾದವನ್ನು ತಯಾರಿಸಬಹುದು. ಹಾಗಾದರೆ ಈ ಪ್ರಸಾದವನ್ನು ತಯಾರಿಸುವುದು ಹೇಗೆ ಎಂದು ತಿಳಿಯೋಣ.

ಹಯಗ್ರೀವ ಪ್ರಸಾದ ತಯಾರಿಸಲು ಬೇಕಾಗುವ ಪದಾರ್ಥಗಳು
*ಕಡ್ಲೆಬೇಳೆ ಒಂದು ಕಪ್
*ಬೆಲ್ಲ ಎರಡು ಕಪ್
* ಗಸಗಸೆ ಒಂದು ಟೀ ಸ್ಪೂನ್
* ತುಪ್ಪ ನಾಲ್ಕರಿಂದ ಐದು ಸ್ಪೂನ್
* ಗೋಡಂಬಿ 10-15
* ಒಣದ್ರಾಕ್ಷಿ 5-10
* ಒಣಗೊಬ್ಬರಿ ಐದು ಸ್ಪೂನ್
ಹಯಗ್ರೀವ ಪ್ರಸಾದ ತಯಾರಿಸುವ ವಿಧಾನ:-
*ನೆನೆಸಿದ ಕಡ್ಲೆಬೇಳೆ ಕುಕ್ಕರ್ನಲ್ಲಿ ಹಾಕಿ ಕುದಿಸಬೇಕು. ಒಂದು ಕಪ್ಪ ನೆನೆಸಿದ ಕಡ್ಲೆಬೇಳೆ ಕುದಿಸಲು ಎರಡರಷ್ಟು ಕಪ್ ನೀರು ಹಾಕಬೇಕು. ಇದನ್ನು ಒಂದು ಕೂಗು ಬರುವವರೆಗೂ ಕುದಿಸಿ.
*ಮತ್ತೊಂದೆಡೆ ಕಡ್ಲೆಬೆಳೆ ಒಂದು ಕಪ್ ತೆಗೆದುಕೊಂಡರೆ ಎರಡು ಕಪ್ ಬೆಲ್ಲ ತೆಗೆದುಕೊಳ್ಳಬೇಕು. ಇದನ್ನು ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ನೀರು ಬೆರೆಸಿ ಮಂದ ಉರಿಯಲ್ಲಿ ಕುದಿಸಬೇಕು. ಪಾಕದ ಹದಕ್ಕೆ ಅದನ್ನು ಕುದಿಸಿ.
*ಬಳಿಕ ಒಂದು ಚಮಚ ಗಸಗಸೆ ಹಾಕಿ ಪ್ರತ್ಯೇಕ ಬಾಣಲೆಯಲ್ಲಿ ಹುರಿಯಬೇಕು. ತಟ್ಟೆಯಲ್ಲಿ ಅದನ್ನು ತೆಗೆದು ಇಟ್ಟುಕೊಳ್ಳಿ.
*ಬಳಿಕ ಅದೇ ಬಾಣಲೆಗೆ ಐದು ಸ್ಪೂನ್ ಒಣ ಕೊಬ್ಬರಿ ಹಾಕಿ ಹುರಿದುಕೊಳ್ಳಿ. ಸ್ವಲ್ಪ ಹುರಿದು ಒಂದು ಪಾತ್ರೆಯಲ್ಲಿ ತೆಗೆಯಿರಿ.
*ಬಳಿಕ ಆ ಬಾಣಲೆಯಲ್ಲಿ ಮೂರು ಸ್ಪೂನ್ ತುಪ್ಪ ಹಾಕಿ, ಹತ್ತು ಗೋಡಂಬಿ, ಒಣ ದ್ರಾಕ್ಷಿ ಹುರಿದು ತೆಗೆದುಕೊಳ್ಳಿ.
*ಬಳಿಕ ಬೆಲ್ಲದ ಪಾಕದಲ್ಲಿ ಕುದಿಸಿದ ಬೇಳೆಯನ್ನು ಹಾಕಿ ಕುದಿಸಿ. ಬಳಿಕ ಇದಕ್ಕೆ ಹುರಿದ ಒಣಗೊಬ್ಬರಿ, ಗಸಗಸೆ, ತುಪ್ಪದಲ್ಲಿ ಹುರಿದ ಗೋಡಂಬಿ ದ್ರಾಕ್ಷಿ ಹಾಕಿ.
*ಬಳಿಕ ಕೈಯಾಡಿಸಿ ಅದಕ್ಕೆ ಒಂದು ಚಿಟಿಕೆ ಏಲಕ್ಕಿ ಪುಡಿ ಸೇರಿಸಿದರೆ ಹಯಗ್ರೀವ ಸವಿಯಲು ಸಿದ್ದ.
ಈ ಪ್ರಸಾದವನ್ನು ನೈವೇದ್ಯಕ್ಕಾಗಿ ಹಲವಾರು ದೇವಸ್ಥಾನಗಳಲ್ಲಿ ತಯಾರಿಸಲಾಗುತ್ತದೆ. ಮಾತ್ರವಲ್ಲದೆ ಬಹುತೇಕ ಹಬ್ಬಗಳಲ್ಲಿ ಈ ಪ್ರಸಾದವನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಭಕ್ತರಿಗೆ ನೀಡಲಾಗುತ್ತದೆ. ನೀವೂ ಕೂಡ ಈ ಸಿಹಿಯಾದ ಪ್ರಸಾದವನ್ನು ಮನೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ತಯಾರಿಸಬಹುದು.
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications