ದೇಹವನ್ನು ಮನಸ್ಸಿನ ಗುಲಾಮನಾಗಲು ಬಿಡಬೇಡಿ: ಯಾಕೆ ಗೊತ್ತಾ?
ನಾವು ಒಂದಲ್ಲ ಒಂದು ರೀತಿಯಲ್ಲಿ ನಮ್ಮೊಳಗಿನ ಮನಸ್ಸಿಗೆ ಸೋತು ಬಿಡುತ್ತೇವೆ. ಅಷ್ಟೇ ಅಲ್ಲದೆ ಅದು ಹೇಳಿದಂತೆಯೇ ನಡೆದುಕೊಂಡು ಬಿಡುತ್ತೇವೆ. ಹೀಗಾಗಿಯೇ ಮೇಲ್ನೋಟಕ್ಕೆ ಕಾಣುವ ಮನುಷ್ಯನ ದೇಹ ಮನಸ್ಸಿನ ಗುಲಾಮನಾಗಿದ್ದು, ಮನಸ್ಸು ಹೇಳಿದಂತೆ ಕೇಳುತ್ತಾ ಒಳ್ಳೆಯದೋ ಮತ್ತು ಕೆಟ್ಟದೋ ಎರಡನ್ನು ಮಾಡಿ ಒಳಿತು ಕೆಡಕು ಎರಡಕ್ಕೂ ಹಲವು ಬಾರಿ ಸಾಕ್ಷಿಯಾಗಿ ಬಿಡುತ್ತೇವೆ. ಒಳಗಿನ ಮನಸ್ಸು ಏನೇ ಮಾಡಿದರೂ ಅನುಭವಿಸಬೇಕಾಗಿ ಬರುವುದು ಹೊರಗಿನ ದೇಹ ಮಾತ್ರ.
ಒಬ್ಬ ವ್ಯಕ್ತಿಯನ್ನು ನಾವು ದೇಹದಿಂದ ಗುರುತಿಸುತ್ತೇವೆ. ಅವನಲ್ಲಿರುವ ಎಲ್ಲ ಗುಣಗಳಿಗೆ ದೇಹ ಸಾಕ್ಷಿಯಾಗುತ್ತದೆ. ನಮಗೆ ಒಬ್ಬ ವ್ಯಕ್ತಿಯ ಮನಸ್ಸಾಗಲೀ, ಆತನ ಗುಣವಾಗಲೀ ತಕ್ಷಣಕ್ಕೆ ಕಾಣುವುದಿಲ್ಲ. ಮೇಲ್ನೋಟಕ್ಕೆ ಕಾಣುವುದು ದೇಹ ಮಾತ್ರ. ಆ ದೇಹದ ಮುಖಚರ್ಯೆ, ರೂಪ, ಆಕಾರ, ಬಣ್ಣದಿಂದ ವ್ಯಕಿಯನ್ನು ಗುರುತಿಸುತ್ತೇವೆ, ನೆನಪಿಟ್ಟುಕೊಳ್ಳುತ್ತೇವೆ. ಮೇಲ್ನೋಟಕ್ಕೆ ಆತನ ದೇಹವಷ್ಟೆ ಕಾಣಿಸುತ್ತದೆ. ಒಳಗಿನ ಮನಸ್ಸು ಕಾಣಿಸುವುದಿಲ್ಲ. ಅದು ನಮ್ಮ ಬಗ್ಗೆ ಏನು ಯೋಚಿಸುತ್ತಿದೆ ಎಂಬುದು ಕೂಡ ಗೊತ್ತಾಗುವುದಿಲ್ಲ.

ದೇಹದ ಒಡನಾಟಕ್ಕೆ ಬಂದಾಗ ಮಾತ್ರ ಆ ದೇಹದ ಮನಸ್ಸಿನ ಬಗ್ಗೆ ಮತ್ತು ಅದರೊಳಗಿನ ಗುಣದ ಬಗ್ಗೆ ತಿಳಿಯುತ್ತದೆ. ಇಷ್ಟಕ್ಕೂ ನಾವು ದೇಹವನ್ನು ನೋಡಿ ಯಾವತ್ತೂ ಒಬ್ಬ ವ್ಯಕ್ತಿಯೊಂದಿಗೆ ಗೆಳೆತನ ಮಾಡುವುದಿಲ್ಲ. ಪರಿಚಯವಾದ ಬಳಿಕ ಆತನಲ್ಲಿರುವ ಗುಣ ನೋಡುತ್ತೇವೆ. ನಮಗೆ ಇಷ್ಟವಾದರೆ ಮಾತ್ರ ಸಂಬಂಧ ಮುಂದುವರೆಸುತ್ತೇವೆ. ಇಷ್ಟಕ್ಕೂ ಈ ಜಗತ್ತಿನಲ್ಲಿ ಎಲ್ಲರೂ ಎಲ್ಲರಿಗೆ ಇಷ್ಟವಾಗುವುದಿಲ್ಲ ಎಂಬುದು ನಮಗೆ ಗೊತ್ತಿರುವ ವಿಚಾರವೇ.. ಹೀಗಾಗಿಯೇ ಹಲವರ ಸಂಪರ್ಕದಲ್ಲಿದ್ದರೂ ಸಂಬಂಧವನ್ನು ಮಾತ್ರ ಆಯ್ದ ಕೆಲವರೊಂದಿಗೆ ಮಾತ್ರ ಮುಂದುವರೆಸುತ್ತೇವೆ.
ಮಾತು ಮಾತಿಗೂ ತಲೆಬಿಸಿ ಎನ್ನುವುದೇಕೆ?
ನಮ್ಮ ದೇಹ ಹೇಗೆಯೇ ಇರಲಿ. ಅದನ್ನು ಮನಸ್ಸು ನಿಯಂತ್ರಿಸುತ್ತದೆ. ಅದು ಹೇಗೆ ಬೇಕೋ ಹಾಗೆ ಆಡಿಸುತ್ತದೆ. ಶಿರ, ಮುಂಡ, ಕೈಕಾಲು, ಕಣ್ಣು, ಕಿವಿ, ಮೂಗು, ಚರ್ಮ, ನಾಲಿಗೆ, ರಕ್ತ ಮಾಂಸವನ್ನು ಹೊಂದಿರುವ ದೇಹವನ್ನು ಕಾಪಾಡಲು ನಾವು ಕಾಳಜಿ ವಹಿಸುತ್ತೇವೆ. ದೇಹದ ಯಾವುದೇ ಭಾಗಕ್ಕೆ ತೊಂದರೆಯಾದರೂ ಇಡೀ ದೇಹ ಕಂಪಿಸುತ್ತದೆ. ಬಹಳಷ್ಟು ಸಾರಿ ದೇಹಕ್ಕಾಗಿರುವ ನೋವನ್ನು ಚಿಕಿತ್ಸೆ ಮೂಲಕ ಗುಣಪಡಿಸಿಕೊಳ್ಳಬಹುದು.

ಮನಸ್ಸಿನ ಮೇಲಾಗುವ ನೋವಿಗೆ ಚಿಕಿತ್ಸೆ ನೀಡಿದರೆ ಅದು ಶಮನವಾಗುವುದಿಲ್ಲ. ಅದಕ್ಕೆ ನಾವೇ ಚಿಕಿತ್ಸೆ ನೀಡಿಕೊಳ್ಳಬೇಕು. ಕೆಲವರು ಮಾತು ಮಾತಿಗೂ ತಲೆಬಿಸಿಯಾಗುತ್ತೆ ಎನ್ನುತ್ತಾರೆ. ತಲೆಬಿಸಿ ಎನ್ನುವುದು ಜ್ವರ ಬಂದಾಗ ಆಗುವ ಬೆಚ್ಚಗೆ ಅಲ್ಲ. ಅದು ಒಂದು ರೀತಿಯಲ್ಲಿ ಏನು ಮಾಡಬೇಕೆಂದು ತೋಚದ ಸ್ಥಿತಿ. ಕೆಲವು ಅನಗತ್ಯ ವಿಚಾರಗಳನ್ನು ಮೈಗೆ ಎಳೆದುಕೊಂಡಾಗ, ಯಾವುದೋ ವಿಚಾರದ ಬಗ್ಗೆ ಹೆಚ್ಚು ಹೆಚ್ಚಾಗಿ ಯೋಚಿಸಿದಾಗಲೂ ತಲೆಬಿಸಿಯಾದ ಅನುಭವವಾಗುತ್ತದೆ.
ಇಷ್ಟಕ್ಕೂ ಮನಸ್ಸು ಎಂದರೇನು ಗೊತ್ತಾ?
ಇಂತಹ ತಲೆಬಿಸಿಗಳಿಂದ ತೊಂದರೆಯೇ ಜಾಸ್ತಿ. ಆದ್ದರಿಂದ ಮನಸ್ಸಿಗೆ ಹೆಚ್ಚಿನ ಒತ್ತಡ ನೀಡಬಾರದು. ಆದಷ್ಟು ಪ್ರಶಾಂತವಾಗಿರುವಂತೆ ನೋಡಿಕೊಳ್ಳಬೇಕು. ನಮಗೆ ಖುಷಿ ಕೊಡುವ ವಿಚಾರಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಮನಸ್ಸು ಮತ್ತು ದೇಹ ಎರಡೂ ಆರೋಗ್ಯಕರವಾಗಿರಬೇಕು. ಮನಸ್ಸಿನ ಮೇಲೆ ಆಗುವ ಒತ್ತಡ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೋ ಹಾಗೆಯೇ ದೇಹದ ಮೇಲಿನ ಆಗುವ ನೋವುಗಳು ಕೂಡ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಇಷ್ಟಕ್ಕೂ ಮನಸ್ಸು ಕಣ್ಣಿಗೆ ಕಾಣುವಂತಹದಲ್ಲ. ದೇಹದ ಮೇಲೆ ಇಂತಹದ್ದೇ ಜಾಗದಲ್ಲಿದೆ ಎಂದು ಗುರುತಿಸಲೂ ಸಾಧ್ಯವಿಲ್ಲ. ಅದು ಅದ್ಭುತ ಶಕ್ತಿಯಾಗಿದ್ದು, ಇಡೀ ಶರೀರವನ್ನು ಆವರಿಸುವ ಸಂವೇದನೆಯಾಗಿದೆ. ಮನ್ ಧಾತುವಿನಿಂದ ಮನಸ್ಸು. ಮನ್ ಎಂದರೆ ಚಿಂತಿಸು, ಯೋಚಿಸು, ತರ್ಕಿಸು ಎಂಬಂತಹ ಅರ್ಥವನ್ನು ನೀಡುತ್ತದೆ. ಇಷ್ಟಕ್ಕೂ ಮನಸ್ಸು ಒಂದೆಡೆ ನಿಲ್ಲುವಂತದಲ್ಲ. ಅದು ಸದಾ ಸಂಚಲನದಲ್ಲಿರುತ್ತದೆ. ಅದು ಕೆಟ್ಟದರತ್ತವೂ ಹರಿಯಬಹುದು. ಇಂಥ ಸಂದರ್ಭ ಅದಕ್ಕೆ ದೇಹ ಗುಲಾಮನಾಗಿ ಮುನ್ನಡೆದಾಗ ಹಲವು ಸಮಸ್ಯೆ ಎದುರಿಸಬೇಕಾಗುತ್ತದೆ. ಆದ್ದರಿಂದಲೇ ಆಧ್ಯಾತ್ಮಿಕ ಚಿಂತಕರು ಮನಸ್ಸಿಗೆ ಲಗಾಮು ಹಾಕಿ ಹಿಡಿದಿಟ್ಟುಕೊಳ್ಳಿ ಎಂದು ಹೇಳಿದ್ದಾರೆ.
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications