ನಿಮ್ಮ ಮನೆಯಲ್ಲಿ ಈ ಜಾಗದಲ್ಲಿ ಕಾಗೆ ಕಿರುಚಿದರೆ ನಿಮ್ಮ ಮನೆಯಲ್ಲಿ ಅನಾಹುತ ಸಂಭವಿಸಲಿದೆ ಎಂದರ್ಥ...!
ಕಾಗೆ.... ಕಾಗೆ ಅಂದಾಕ್ಷಣ ಮುಖ ತಿರುಗಿಸಿಕೊಂಡು ಹೋಗುವವರೇ ಹೆಚ್ಚು. ಯಾಕೆಂದರೆ ಹಿಂದೂ ಸಂಪ್ರದಾಯದಲ್ಲಿ ಕಾಗೆಯನ್ನು ನೋಡುವುದು ಅಪಶಕುನವೆಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಶುಭ ಕಾರ್ಯಗಳಿಗೆ ಹೋಗುವಾಗ ಕಾಗೆ ಕಂಡರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಜನರು ಅದನ್ನು ನೋಡಲು ಹಿಂದೇಟಾಗುತ್ತಾರೆ.
ಹೊಳೆಯುವ ಗರಿಗಳು, ಚೂಪಾದ ಮೂಗು ಮತ್ತು ಕಟುವಾದ ಧ್ವನಿಯೊಂದಿಗೆ ಈ ಕಪ್ಪು ಹಕ್ಕಿ ನಮ್ಮ ಜೀವನದ ಅನಿವಾರ್ಯ ಭಾಗವಾಗಿದೆ. ಇದು ಭಾರತದ ಅತ್ಯಂತ ಸಾಮಾನ್ಯ ಪಕ್ಷಿಗಳಲ್ಲಿ ಒಂದಾದರೂ ಎಲ್ಲಾ ಪಕ್ಷಯಂತೆ ಇದನ್ನು ಕಾಣಲಾಗುವುದಿಲ್ಲ.

ಭಾರತದಲ್ಲಿ ಸಸ್ಯಗಳು, ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಆದರೆ ಎಲ್ಲಾ ಪಕ್ಷಿಗಳಂತೆ ಗೂಬೆ, ಹದ್ದು ಹಾಗೂ ಕಾಗೆಗಳನ್ನು ನೋಡಲಾಗುವುದಿಲ್ಲ. ಈ ಕಾಗೆಗೆ ಯವಿಲಿನ್ ಬಗ್ಗೆ ಮಾಹಿತಿ ಇದೆ ಎನ್ನಲಾಗಿದೆ. ಹೀಗೆ ಕಾಗೆ ಬಗ್ಗೆ ಅನೇಕ ನಂಬಿಕೆ ಇರುವುದರಿಂದಾಗಿ ಅದರಿಂದ ಕೆಟ್ಟದಾಗುತ್ತದೆ ಎಂದು ಪರಿಗಣಿಸಲಾಗುತ್ತದೆ. ಹಾಗಾದರೆ ಕಾಗೆಗೆ ಸಂಬಂಧಿಸಿದ ದುಷ್ಟ ಶಕುನಗಳೇನು ಎಂಬುದನ್ನು ತಿಳಿಯೋಣ.
ಕಾಗೆಗೆ ಸಂಬಂಧಿಸಿದ ಶಕುನಗಳು
- ಕಾಗೆಯು ನಿಮ್ಮ ಬಾಲ್ಕನಿಯಲ್ಲಿ ಕುಳಿತು ಜೋರಾಗಿ ಶಬ್ದ ಮಾಡಿದರೆ, ಅತಿಥಿಗಳು ನಿಮ್ಮ ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದರ್ಥ.
- ಸಗುಣ ಶಾಸ್ತ್ರದ ಪ್ರಕಾರ, ಮಧ್ಯಾಹ್ನದ ಸಮಯದಲ್ಲಿ ಕಾಗೆಯು ಉತ್ತರ ದಿಕ್ಕಿನಲ್ಲಿ ಕೂಗಿದರೆ ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ಪೂರ್ವ ದಿಕ್ಕಿಗೆ ಕಾಗೆ ಕೂಗಿದರೆ ಅದನ್ನೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
- ನೀವು ಪ್ರವಾಸ/ಪ್ರಯಾಣಕ್ಕೆ ಹೊರಡುತ್ತಿರುವಾಗ ಇದ್ದಕ್ಕಿದ್ದಂತೆ ನಿಮ್ಮ ಕಿಟಕಿ ಅಥವಾ ಬಾಲ್ಕನಿಯಲ್ಲಿ ಕಾಗೆ ಬಂದು ಕೂಗಿದರೆ, ನಿಮಗೆ ಉತ್ತಮ ಪ್ರವಾಸವಿದೆ ಎಂದರ್ಥ.
-ಶಬ್ದ ಮಾಡುವಾಗ ನಿಮ್ಮ ಬಾಲ್ಕನಿಯಲ್ಲಿ ಕಾಗೆಗಳ ಗುಂಪನ್ನು ನೀವು ನೋಡಿದರೆ, ಅದು ಒಳ್ಳೆಯ ಸಂಕೇತವೆಂದು ಪರಿಗಣಿಸಲಾಗುವುದಿಲ್ಲ. ಏನಾದರೂ ಅಹಿತಕರ ಘಟನೆ ಸಂಭವಿಸಲಿದೆ ಎಂದು ಪಕ್ಷಿಗಳು ಎಚ್ಚರಿಸುತ್ತವೆ. ಇದರರ್ಥ ನಿಮ್ಮ ಕುಟುಂಬವು ತೊಂದರೆಗೆ ಸಿಲುಕಬಹುದು ಅಥವಾ ನೀವು ಅನಾರೋಗ್ಯಕ್ಕೆ ಒಳಗಾಗಬಹುದು.
- ಕಾಗೆಯು ದಕ್ಷಿಣ ದಿಕ್ಕಿನಲ್ಲಿ ಕುಳಿತು ಶಬ್ದ ಮಾಡಿದರೆ, ಅದು ಕೆಟ್ಟ ಸೂಚನೆ ಎಂದು ಪರಿಗಣಿಸಲಾಗುತ್ತದೆ. ಇದರರ್ಥ ನಿಮ್ಮ ಪೂರ್ವಜರು ನಿಮ್ಮೊಂದಿಗೆ ಸಂತೋಷವಾಗಿಲ್ಲ ಮತ್ತು ನೀವು ಪಿತೃ ದೋಷವನ್ನು ಹೊಂದಿರಬಹುದು ಎಂದರ್ಥ.
- ಕಾಗೆ ನೀರು ಕುಡಿಯುವುದನ್ನು ನೀವು ನೋಡುವುದು ಒಳ್ಳೆಯದು. ಯಾವುದಾದರೂ ಕೆಲಸಕ್ಕೆ ಹೋಗುವಾಗ ಕಾಗೆ ನೀರು ಕುಡಿಯುವುದನ್ನು ಕಂಡರೆ ಆ ಕೆಲಸದಲ್ಲಿ ಖಂಡಿತ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ.
- ಕಾಗೆಯು ರೊಟ್ಟಿಯ ತುಂಡನ್ನು ಹೊತ್ತುಕೊಂಡು ಹಾರಿಹೋಗುವುದನ್ನು ನೀವು ನೋಡಿದರೆ, ನಿಮ್ಮ ಬಹುನಿರೀಕ್ಷಿತ ಆಸೆ ಈಡೇರುತ್ತದೆ ಎಂಬುದಕ್ಕೆ ಇದು ಉತ್ತಮ ಸಂಕೇತವಾಗಿದೆ.
ಶನಿಯೊಂದಿಗಿನ ಸಂಪರ್ಕ
-ಒಬ್ಬರ ಜಾತಕದಲ್ಲಿ ಶನಿಯು ಬಲವಾಗಿದ್ದಾಗ ಅಂಥವರು ದೀರ್ಘಾವಧಿ ಕೆಲಸವನ್ನು ಪೂರ್ಣಗೊಳಿಸಬಹುದು. ಅತ್ಯಂತ ಕಷ್ಟಕರವಾದ ಕೆಲಸವನ್ನೂ ಮಾಡಲು ಅವರು ಸಿದ್ಧರಿರುತ್ತಾರೆ. ಶನಿಗ್ರಹದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಕಾಗೆಗೆ ಆಹಾರವನ್ನು ನೀಡುವುದು ನಿಮಗೆ ಸಹಾಯ ಮಾಡುತ್ತದೆ ಎಂದು ವೈದಿಕ ಜ್ಯೋತಿಷಿಗಳು ನಂಬುತ್ತಾರೆ, ಆದ್ದರಿಂದ ಶನಿ ದೋಷದಿಂದ ಬಳಲುತ್ತಿರುವವರು ಇದನ್ನು ಮಾಡುವುದು ಸೂಕ್ತ.
ಜ್ಯೋತಿಷ್ಯದಲ್ಲಿ ವಾರದ ವಿವಿಧ ದಿನಗಳಲ್ಲಿ ವಿವಿಧ ಆಹಾರಗಳೊಂದಿಗೆ ಪಕ್ಷಿಗಳಿಗೆ ಆಹಾರವನ್ನು ನೀಡುವುದು ವಿಭಿನ್ನ ಗ್ರಹಗಳಿಗೆ ಅನುಕೂಲಕರವಾಗಿದೆ ಎಂದು ಹೇಳಲಾಗುತ್ತದೆ. 7-ದಿನದ ವಾರದ ಪ್ರತಿ ದಿನವು ಒಂದು ಗ್ರಹದೊಂದಿಗೆ ಸಂಬಂಧಿಸಿದೆ. ಆದ್ದರಿಂದ ಶನಿಯು ಶನಿವಾರವನ್ನು ಆಳುತ್ತಾನೆ ಎಂದು ನಂಬಲಾಗಿದೆ. ಹೀಗಾಗಿ ಪಕ್ಷಗಳಿಗೆ ಆಹಾರ ನೀಡಿದರೆ ತುಂಬಾ ಒಳ್ಳೆಯದು.
-
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
Karnataka Budget 2026: ಕರ್ನಾಟಕ ಬಜೆಟ್ 2026: ಬಜೆಟ್ ಗ್ರಾತ ಕಳೆದ ಬಾರಿಗಿಂತ 40 ಸಾವಿರ ಕೋಟಿ ರೂ. ಹೆಚ್ಚಳ -
ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಬಸ್ ನಿಲ್ದಾಣಗಳಲ್ಲಿ ಬಜೆಟ್ ನೇರ ಪ್ರಸಾರ, ವಿಶೇಷವೇನು -
ರಷ್ಯಾದಿಂದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಅನುಮತಿ ಕೊಟ್ಟ ಅಮೆರಿಕ












Click it and Unblock the Notifications