Ellu Holige Recipe: ಮಕರ ಸಂಕ್ರಾಂತಿಗೆ ಎಳ್ಳು ಹೋಳಿಗೆ ತಯಾರಿಸುವ ವಿಧಾನ
ಹಿಂದೂ ಸಂಪ್ರದಾಯದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಇದು ವರ್ಷದ ಮೊದಲನೇ ಹಬ್ಬವಾಗಿದ್ದು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಈ ವರ್ಷ ಜನವರಿ 15ರಂದು ಆಚರಿಸಲಾಗುತ್ತದೆ. ಈ ದಿನ ನಾನಾ ಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಲಾಗುತ್ತದೆ. ಈ ಖಾದ್ಯಗಳಲ್ಲಿ ಎಳ್ಳು ಹೋಳಿಗೆ ಮಾಡುವುದು ರೂಢಿ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಎಳ್ಳು ಹೋಳಿಗೆಯನ್ನು ತಯಾರಿಸಿ ಹಬ್ಬವನ್ನು ಆಚರಿಸುತ್ತಾರೆ. ನೀವೇನಾದರೂ ಹಬ್ಬ ಆಚರಿಸುತ್ತಿದ್ದು ನಿಮಗೆ ಎಳ್ಳು ಹೋಳಿಗೆ ಮಾಡುವ ಆಸೆ ಇದ್ದರೆ ನಾವು ನಿಮಗೆ ಮಾಡುವ ವಿಧಾನವನ್ನು ಹೇಳಿ ಕೊಡುತ್ತೇವೆ. ಇದನ್ನು ಅನುಸರಿಸಿ ಮನೆಯಲ್ಲೇ ಹೋಳಿಗೆ ಮಾಡಬಹುದು. ಹಾಗಾದರೆ ತಡ ಮಾಡುವುದು ಬೇಡ, ಎಳ್ಳು ಹೋಳಿಗೆ ಮಾಡುವುದು ಹೇಗೆ ಅನ್ನೋದನ್ನು ತಿಳಿಯೋಣ.

ಬೇಕಾಗುವ ಪದಾರ್ಥಗಳು:
*ಬಿಳಿ ಎಳ್ಳು ಒಂದು ಕಪ್
*ಬೆಲ್ಲ ಅರ್ಧ ಕಪ್
* ಶೆಂಗಾ ಅರ್ಧ ಕಪ್
*ಮೈದಾ ಹಿಟ್ಟು ಒಂದು ಕಪ್
*ಏಲಕ್ಕಿ 2
* ತುಪ್ಪ ಸ್ವಲ್ಪ
* ಎಣ್ಣೆ

ತಯಾರಿಸುವ ವಿಧಾನ
* ಮೊದಲಿಗೆ ಎಳ್ಳನ್ನು ಸಣ್ಣ ಉರಿಯಲ್ಲಿ ಕೆಂಪಾಗುವವರೆಗೆ ಹುರಿದುಕೊಳ್ಳಿ
*ಬಳಿಕ ಶೆಂಗಾವನ್ನು ಹುರಿದು ಒಂದು ಪಾತ್ರೆಗೆ ತೆಗೆದುಕೊಳ್ಳಿ
* ನಂತರ ಇದನ್ನು ತಣ್ಣಗಾಗಲು ಬಿಡಿ
* ಮೈದಾ ಹಿಟ್ಟಿಗೆ ನೀರು ಹಾಕಿ ಚಾಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಂಡು ಪಾತ್ರೆಗೆ ಎಣ್ಣೆ ಹಚ್ಚಿ ಅದರಲ್ಲಿ ಇದನ್ನು ಇಟ್ಟು ಮುಚ್ಚಿಡಿ.
* ಒಂದು ಮಿಕ್ಸಿ ಜಾರ್ಗೆ ಹುರಿದ ಎಳ್ಳು, ಶೆಂಗಾ ಹಾಕಿ ರುಬ್ಬಿಕೊಳ್ಳಿ
* ಬಳಿಕ ಇದಕ್ಕೆ ಬೆಲ್ಲ ಸೇರಿಸಿ ರುಬ್ಬಿ ಏಲಕ್ಕಿ ಪುಡಿ ಹಾಕಿ ಒಂದು ಪಾತ್ರೆಗೆ ತೆಗೆದುಕೊಳ್ಳಿ
* ಇದಕ್ಕೆ ಸ್ವಲ್ಪ ಬಿಸಿಯಾದ ನೀರನ್ನು ಸ್ವಲ್ಪ ಸ್ವಲ್ಪ ಹಾಕಿ ಕಲಸಿ ಹೂರಣ ರೆಡಿ ಮಾಡಿಕೊಳ್ಳಿ
* ಮೈದಾ ಹಿಟ್ಟನ್ನು ಚಿಕ್ಕ ಚಿಕ್ಕ ಉಂಟೆ ಮಾಡಿಕೊಂಡು ಅದರಲ್ಲಿ ಹೂರಣ ತುಂಬಿ ಮುಚ್ಚಿ.
* ಒಂದು ಕಾಗದದ ಮೇಲೆ ಈ ಉಂಡೆಯನ್ನು ಚೆನ್ನಾಗಿ ಚಪಾತಿ ಆಕಾರದಲ್ಲಿ ಹರಡಿ
* ಹೀಗೆ ಹರಡುವಾಗ ಕೈಗೆ ಹಾಗೂ ಹಾಳೆಗೂ ಎಣ್ಣೆಯನ್ನು ಹಚ್ಚಿಕೊಳ್ಳಿ
* ಒಲೆಯ ಮೇಲೆ ಹೆಂಚನ್ನು ಇಟ್ಟು ಸಣ್ಣ ಉರಿಯಲ್ಲಿ ಈ ಹೋಳಿಗೆಯನ್ನು ಬೇಯಿಸಿ, ನಂತರ ಇದರ ಮೇಲೆ ತುಂಬಾ ಹಾಕಿದರೆ ಬಿಸಿ ಬಿಸಿ ಎಳ್ಳು ಹೋಳಿಗೆ ಸವಿಯಲು ಸಿದ್ಧ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications