Andhra Style mango Dal Recipe: ಆಂಧ್ರ ಶೈಲಿಯ ಮಾವಿನಕಾಯಿ ದಾಲ್ ರೆಸಿಪಿ: ಮಾಡಿದರೆ ಬೆರಳು ಚೀಪಿ ತಿಂತೀರಾ...
ನೀವು ಬೆಳಿಗ್ಗೆ ತಿಂಡಿಗೆ ಮನೆಯಲ್ಲಿ ದೋಸೆ, ಇಡ್ಲಿ, ಪೂರಿ, ಚಪಾತಿ ಮಾಡ್ತೀರಾ? ಈ ತಿಂಡಿಗೆ ಯಾವಾಗಲೂ ಚಟ್ನಿ, ಸಾಂಬಾರ್ ಮಾಡಬೇಡಿ. ಒಮ್ಮೆ ದಾಲ್ ಮಾಡಿ ತಿನ್ನಿ. ಅದ್ರಲ್ಲೂ ಆಂಧ್ರ ಶೈಲಿಯ ಮಾವಿನಕಾಯಿ ದಾಲ್ ಒಮ್ಮೆ ಟ್ರೈ ಮಾಡಿ. ಇದರ ರುಚಿ ಮುಂದೆ ಏನೂ ಕೂಡ ಬೇಡ.
ಈಗ ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ ಪ್ರತಿಯೊಬ್ಬರ ಮನೆಯಲ್ಲಿ ಒಂದಾದರೂ ಮಾವಿನ ಹಣ್ಣು ಇದ್ದೇ ಇರುತ್ತದೆ. ನಿಮ್ಮ ಮನೆಯಲ್ಲೂ ಇದ್ದರೆ ಆ ಮಾವಿನಕಾಯಿಯಿಂದ ದಾಲ್ ಮಾಡಿ. ಈ ಮಾವಿನ ದಾಲ್ ದೋಸೆಯೊಂದಿಗೆ ಮಾತ್ರವಲ್ಲದೆ ಚಪಾತಿ, ಅನ್ನದೊಂದಿಗೂ ಕೂಡ ಅದ್ಭುತವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದನ್ನು ಮಾಡುವುದು ತುಂಬಾ ಸುಲಭ.

ಹಾಗಾದರೆ ತಡ ಮಾಡುವುದು ಬೇಡ. ಆಂಧ್ರ ಶೈಲಿಯ ಮಾವಿನಕಾಯಿ ದಾಲ್ ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ನೀವು ಕೂಡ ಮನೆಯಲ್ಲಿ ಒಂದು ಬಾರಿ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
ಅಗತ್ಯವಿರುವ ವಸ್ತುಗಳು:
* ಮೊಸರು - 1/2 ಕಪ್
* ಹೆಸರು ಬೇಳೆ ದಾಲ್ - 1/2 ಕಪ್
* ಈರುಳ್ಳಿ - 1 (ಸಣ್ಣದಾಗಿ ಹೆಚ್ಚಿದ)
* ಹಸಿರು ಮೆಣಸಿನಕಾಯಿ - 3
* ಟೊಮೇಟೊ - 1 (ಸಣ್ಣದಾಗಿ ಹೆಚ್ಚಿದ)
* ಚಿಕ್ಕ ಮಾವು - 1
* ಅರಿಶಿನ ಪುಡಿ - 1 ಚಿಟಿಕೆ
* ಸಾಂಬಾರ್ ಪುಡಿ - 1 tbsp
* ಉಪ್ಪು - 1 tbsp
* ನೀರು - ಅಗತ್ಯವಿರುವ ಪ್ರಮಾಣ

ಒಗ್ಗರಣೆಗಾಗಿ....
* ತುಪ್ಪ - 2 ಟೇಬಲ್ಸ್ಪೂನ್
* ಸಾಸಿವೆ - 1 tbsp
* ಜೀರಿಗೆ - 1/2 ಟೀಸ್ಪೂನ್
* ಇಂಗು ಪುಡಿ - ಸ್ವಲ್ಪ
* ಬೆಳ್ಳುಳ್ಳಿ - 5
* ಒಣಮೆಣಸಿನಕಾಯಿ - 2
* ಕರಿಬೇವಿನ ಎಲೆಗಳು - ಸ್ವಲ್ಪ
* ಕೊತ್ತಂಬರಿ ಸೊಪ್ಪು - ಸ್ವಲ್ಪ
* ಈರುಳ್ಳಿ 1

ಪಾಕವಿಧಾನ:
* ಮೊದಲು ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು, ಹೆಸರು ಬೇಳೆಯನ್ನು ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಅದನ್ನು ಹೊರಗಡೆ ತೆಗೆದು ನೀರಿನಲ್ಲಿ ಎರಡು ಬಾರಿ ತೊಳೆಯಿರಿ.
* ದಾಲ್ ತೊಳೆದ ನಂತರ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೇಟೊ, ತುರಿದ ಮಾವಿನಕಾಯಿ, ಅರಿಶಿನ ಪುಡಿ, ಸಾಂಬಾರ್ ಪುಡಿ, ಉಪ್ಪು ನೀರು ಸೇರಿಸಿ ಕುಕ್ಕರ್ ಮುಚ್ಚಿ ಮತ್ತು 2-3 ಸೀಟಿ ಆಗುವವರೆಗೆ ಬಿಡಿ.
* ವಿಶಿಲ್ ಆದ ಬಳಿಕ ಕುಕ್ಕರ್ ತೆರೆದು ಜೇನು ತುಪ್ಪ ಹಾಕಿ ತೆಳುವಾಗುವವರೆಗೆ ಕಲಸಿ.
* ನಂತರ ಬೇಕಾದಷ್ಟು ನೀರು ಹಾಕಿ ಕಲಸಿ ಮತ್ತೆ ಒಲೆಯಲ್ಲಿ ಕುದಿಸಿ.
* ನಂತರ ಒಲೆಯಲ್ಲಿ ಬಾಣಲೆ ಇಟ್ಟು ಒಗ್ಗರಣೆಗೆ ಬೇಕಾದಷ್ಟು ಎಣ್ಣೆ ಹಾಕಿ ಅದು ಬಿಸಿಯಾದಾಗ ಸಾಸಿವೆ, ಜೀರಿಗೆ, ಇಂಗು ಪುಡಿ, ಕರಿಬೇವಿನ ಎಲೆ, ಬೆಳ್ಳುಳ್ಳಿ, ಒಣಮೆಣಸಿನಕಾಯಿ ಹಾಕಿ ಬಾಡಿಸಿ.
* ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಕುದಿಯುವ ದಾಲ್ಗೆ ಬೆರೆಸಿ ಕೊತ್ತಂಬರಿ ಸೊಪ್ಪನ್ನು ಹಾಕಿದರೆ, ರುಚಿಕರವಾದ ಆಂಧ್ರ ಶೈಲಿಯ ಮಾವಿನಕಾಯಿ ದಾಲ್ ಸವಿಯಲು ಸಿದ್ದ.
-
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ -
ಕರ್ನಾಟಕ ಬಜೆಟ್ 2026: ನಮ್ಮ ಮೆಟ್ರೋ 41 ಕಿ.ಮೀ ಹೆಚ್ಚುವರಿ ಮಾರ್ಗ ಶೀಘ್ರವಾಗಿ ಪೂರ್ಣ -
Gold Rate Today: ಕರ್ನಾಟಕದ ಬೆಂಗಳೂರಿನಲ್ಲಿ ಬಂಗಾರ ದರ ಇಳಿಕೆ: ಇಲ್ಲಿದೆ ಮಾರ್ಚ್ 6ರ ದರಪಟ್ಟಿ -
Karnataka Budget 2026 PDF: ಕರ್ನಾಟಕ ಬಜೆಟ್ 2026-27 ಪಿಡಿಎಫ್ ಡಾಕ್ಯುಮೆಂಟ್ ಇಲ್ಲಿ ಡೌನ್ಲೋಡ್ ಮಾಡಿ -
ಸಂಜು ನಿಜವಾದ ಮ್ಯಾಚ್ ವಿನ್ನರ್, ವಿಶ್ವದ ನಂ.1 ಟಿ20 ಬ್ಯಾಟರ್ ಅಭಿಷೇಕ್ ಮೇಲೆ ನಂಬಿಕೆಯಿಡಿ: ರವಿಶಾಸ್ತ್ರಿ ಮಹತ್ವದ ಸಲಹೆ -
ಹೊಸ 800 ಕೆಪಿಎಸ್ ಶಾಲೆ, ಇಂಗ್ಲಿಷ್ ಭಾಷಾ ತರಬೇತಿ: ಕರ್ನಾಟಕ ಬಜೆಟ್ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭರಪೂರ ಘೋಷಣೆ -
Karnataka Budget 2026: 100 ಹೊಸ ಸ್ಕೈವಾಕ್, ಟನಲ್ ರಸ್ತೆ ಸೇರಿ ಕರ್ನಾಟಕ ಬಜೆಟ್ನಲ್ಲಿ ಬೆಂಗಳೂರಿಗೆ ಸಿಕ್ಕಿದ್ದೇನು? -
Karnataka Property: ಇ-ಆಸ್ತಿ, ಏಕೀಕೃತ ಆಸ್ತಿ ತೆರಿಗೆ ಸಂಯೋಜನೆ: ಕರ್ನಾಟಕದಲ್ಲಿ ಆಸ್ತಿ ನಿರ್ವಹಣೆಗೆ ಹೊಸ ನಿಯಮ -
ರೈತರಿಗೆ ಮಾಲ್, ಮಂಡ್ಯ ಸಾವಯ ಕೃಷಿ: ಅಡಿಕೆ - ತೆಂಗು ಬೆಳಗಾರರಿಗೂ ಬಂಪರ್, ಮೇಕೆದಾಟು ಯೋಜನೆಗೆ ಅಸ್ತು












Click it and Unblock the Notifications