Andhra Style mango Dal Recipe: ಆಂಧ್ರ ಶೈಲಿಯ ಮಾವಿನಕಾಯಿ ದಾಲ್ ರೆಸಿಪಿ: ಮಾಡಿದರೆ ಬೆರಳು ಚೀಪಿ ತಿಂತೀರಾ...
ನೀವು ಬೆಳಿಗ್ಗೆ ತಿಂಡಿಗೆ ಮನೆಯಲ್ಲಿ ದೋಸೆ, ಇಡ್ಲಿ, ಪೂರಿ, ಚಪಾತಿ ಮಾಡ್ತೀರಾ? ಈ ತಿಂಡಿಗೆ ಯಾವಾಗಲೂ ಚಟ್ನಿ, ಸಾಂಬಾರ್ ಮಾಡಬೇಡಿ. ಒಮ್ಮೆ ದಾಲ್ ಮಾಡಿ ತಿನ್ನಿ. ಅದ್ರಲ್ಲೂ ಆಂಧ್ರ ಶೈಲಿಯ ಮಾವಿನಕಾಯಿ ದಾಲ್ ಒಮ್ಮೆ ಟ್ರೈ ಮಾಡಿ. ಇದರ ರುಚಿ ಮುಂದೆ ಏನೂ ಕೂಡ ಬೇಡ.
ಈಗ ಮಾವಿನ ಹಣ್ಣಿನ ಸೀಸನ್ ಆಗಿರುವುದರಿಂದ ಪ್ರತಿಯೊಬ್ಬರ ಮನೆಯಲ್ಲಿ ಒಂದಾದರೂ ಮಾವಿನ ಹಣ್ಣು ಇದ್ದೇ ಇರುತ್ತದೆ. ನಿಮ್ಮ ಮನೆಯಲ್ಲೂ ಇದ್ದರೆ ಆ ಮಾವಿನಕಾಯಿಯಿಂದ ದಾಲ್ ಮಾಡಿ. ಈ ಮಾವಿನ ದಾಲ್ ದೋಸೆಯೊಂದಿಗೆ ಮಾತ್ರವಲ್ಲದೆ ಚಪಾತಿ, ಅನ್ನದೊಂದಿಗೂ ಕೂಡ ಅದ್ಭುತವಾಗಿರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇದನ್ನು ಮಾಡುವುದು ತುಂಬಾ ಸುಲಭ.

ಹಾಗಾದರೆ ತಡ ಮಾಡುವುದು ಬೇಡ. ಆಂಧ್ರ ಶೈಲಿಯ ಮಾವಿನಕಾಯಿ ದಾಲ್ ಮಾಡುವುದು ಹೇಗೆ ಅನ್ನೋದನ್ನು ನೋಡೋಣ. ನೀವು ಕೂಡ ಮನೆಯಲ್ಲಿ ಒಂದು ಬಾರಿ ಇದನ್ನು ಟ್ರೈ ಮಾಡಿ. ನಿಮ್ಮ ಅನುಭವವನ್ನು ನಮ್ಮೊಂದಿಗೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.
ಅಗತ್ಯವಿರುವ ವಸ್ತುಗಳು:
* ಮೊಸರು - 1/2 ಕಪ್
* ಹೆಸರು ಬೇಳೆ ದಾಲ್ - 1/2 ಕಪ್
* ಈರುಳ್ಳಿ - 1 (ಸಣ್ಣದಾಗಿ ಹೆಚ್ಚಿದ)
* ಹಸಿರು ಮೆಣಸಿನಕಾಯಿ - 3
* ಟೊಮೇಟೊ - 1 (ಸಣ್ಣದಾಗಿ ಹೆಚ್ಚಿದ)
* ಚಿಕ್ಕ ಮಾವು - 1
* ಅರಿಶಿನ ಪುಡಿ - 1 ಚಿಟಿಕೆ
* ಸಾಂಬಾರ್ ಪುಡಿ - 1 tbsp
* ಉಪ್ಪು - 1 tbsp
* ನೀರು - ಅಗತ್ಯವಿರುವ ಪ್ರಮಾಣ

ಒಗ್ಗರಣೆಗಾಗಿ....
* ತುಪ್ಪ - 2 ಟೇಬಲ್ಸ್ಪೂನ್
* ಸಾಸಿವೆ - 1 tbsp
* ಜೀರಿಗೆ - 1/2 ಟೀಸ್ಪೂನ್
* ಇಂಗು ಪುಡಿ - ಸ್ವಲ್ಪ
* ಬೆಳ್ಳುಳ್ಳಿ - 5
* ಒಣಮೆಣಸಿನಕಾಯಿ - 2
* ಕರಿಬೇವಿನ ಎಲೆಗಳು - ಸ್ವಲ್ಪ
* ಕೊತ್ತಂಬರಿ ಸೊಪ್ಪು - ಸ್ವಲ್ಪ
* ಈರುಳ್ಳಿ 1

ಪಾಕವಿಧಾನ:
* ಮೊದಲು ಕುಕ್ಕರ್ ಅನ್ನು ಒಲೆಯ ಮೇಲೆ ಇಟ್ಟು, ಹೆಸರು ಬೇಳೆಯನ್ನು ಹಾಕಿ ಸ್ವಲ್ಪ ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಅದನ್ನು ಹೊರಗಡೆ ತೆಗೆದು ನೀರಿನಲ್ಲಿ ಎರಡು ಬಾರಿ ತೊಳೆಯಿರಿ.
* ದಾಲ್ ತೊಳೆದ ನಂತರ ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೇಟೊ, ತುರಿದ ಮಾವಿನಕಾಯಿ, ಅರಿಶಿನ ಪುಡಿ, ಸಾಂಬಾರ್ ಪುಡಿ, ಉಪ್ಪು ನೀರು ಸೇರಿಸಿ ಕುಕ್ಕರ್ ಮುಚ್ಚಿ ಮತ್ತು 2-3 ಸೀಟಿ ಆಗುವವರೆಗೆ ಬಿಡಿ.
* ವಿಶಿಲ್ ಆದ ಬಳಿಕ ಕುಕ್ಕರ್ ತೆರೆದು ಜೇನು ತುಪ್ಪ ಹಾಕಿ ತೆಳುವಾಗುವವರೆಗೆ ಕಲಸಿ.
* ನಂತರ ಬೇಕಾದಷ್ಟು ನೀರು ಹಾಕಿ ಕಲಸಿ ಮತ್ತೆ ಒಲೆಯಲ್ಲಿ ಕುದಿಸಿ.
* ನಂತರ ಒಲೆಯಲ್ಲಿ ಬಾಣಲೆ ಇಟ್ಟು ಒಗ್ಗರಣೆಗೆ ಬೇಕಾದಷ್ಟು ಎಣ್ಣೆ ಹಾಕಿ ಅದು ಬಿಸಿಯಾದಾಗ ಸಾಸಿವೆ, ಜೀರಿಗೆ, ಇಂಗು ಪುಡಿ, ಕರಿಬೇವಿನ ಎಲೆ, ಬೆಳ್ಳುಳ್ಳಿ, ಒಣಮೆಣಸಿನಕಾಯಿ ಹಾಕಿ ಬಾಡಿಸಿ.
* ನಂತರ ಕತ್ತರಿಸಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ. ಕುದಿಯುವ ದಾಲ್ಗೆ ಬೆರೆಸಿ ಕೊತ್ತಂಬರಿ ಸೊಪ್ಪನ್ನು ಹಾಕಿದರೆ, ರುಚಿಕರವಾದ ಆಂಧ್ರ ಶೈಲಿಯ ಮಾವಿನಕಾಯಿ ದಾಲ್ ಸವಿಯಲು ಸಿದ್ದ.
-
ಮನೆಯಲ್ಲಿ ಕಸದ ಬುಟ್ಟಿ ಎಲ್ಲಿ ಇಡಬೇಕು? ಈ ವಾಸ್ತು ನಿಯಮಗಳು ತಿಳಿದುಕೊಳ್ಳಿ -
Pomegranate Juice Benefits: 6 ದಿನಗಳಲ್ಲಿ ಕಾಣುವ ಆರೋಗ್ಯ ಬದಲಾವಣೆಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್












Click it and Unblock the Notifications