ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಕೆಲಸ ಖಾಲಿ ಇದೆ
ಬೆಂಗಳೂರು, ಜೂನ್ 06 : ಪರಿಸರ ಕ್ಷೇತ್ರದಲ್ಲಿ ಅನುಭವವಿದ್ದು ಪರಿಸರದ ಉಳಿಸುವಿಕೆಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸಲು ನಿಮಗೆ ಆಸಕ್ತಿ ಇದೆಯೆ?. ಹಾಗಾದರೆ ನಿಮಗಾಗಿ ಕೆಲಸ ಖಾಲಿ ಇದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಫೇಸ್ ಬುಕ್ ಖಾತೆಯಲ್ಲಿ ಈ ಕುರಿತು ಗುರುವಾರ ಪ್ರಕಟಣೆ ನೀಡಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಜೂನ್ 14 ಕೊನೆಯ ದಿನವಾಗಿದೆ.
ಪರಿಸರ ಕ್ಷೇತ್ರದಲ್ಲಿ ಅನುಭವವಿದ್ದು ಪರಿಸರದ ಉಳಿಸುವಿಕೆಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸಲು ನಿಮಗೆ ಆಸಕ್ತಿ ಇದೆಯೆ?. ಹಾಗಿದ್ದರೆ ಇದೊಂದು ನಿಮಗೆ ಸುವರ್ಣಾವಕಾಶ. ಇಂದೇ ಅರ್ಜಿ ಸಲ್ಲಿಸಿ ಎಂದು ಫೋಸ್ಟ್ ಹಾಕಲಾಗಿದೆ.

ಯಾವ-ಯಾವ ಹುದ್ದೆಗಳು?
* ಅರಣ್ಯೀಕರಣ ಸಮಾಲೋಚಕರು
* ಜಲಾನಯನ ಸಮಾಲೋಚಕರು
* ಸಮುದಾಯ ಸಮನ್ವಯಕಾರರು
* ಸಿಎಸ್ಆರ್&ಔಟ್ ರಿಚ್ ಸಮಾಲೋಚಕರು
* ಐಟಿ ಸಮಾಲೋಚಕರು
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ವೆಬ್ ಸೈಟ್ಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದದೆ.












Click it and Unblock the Notifications