ಬಿಪಿಒ, ಐಟಿ ವಲಯದ ವೈಭವ ದಿನಗಳು ಮುಗಿದವು: ಎಐಸಿಟಿಇ ಅಧ್ಯಕ್ಷ
ಉದ್ಯೋಗದ ವಿಚಾರದಲ್ಲಿ ಎಂಜಿನಿಯರಿಂಗ್ ಹಾಗೂ ಎಂಬಿಎ ವಿದ್ಯಾರ್ಥಿಗಳಿಗೆ ಭವಿಷ್ಯ ಕರಾಳವಾಗಿದೆ. ದೊಡ್ಡ ಅವಕಾಶಗಳಾಗಿದ್ದ ಐಟಿ ಹಾಗೂ ಬಿಪಿಒ ವಲಯಗಳಲ್ಲಿ ಇನ್ನೂ ಭಾರೀ ನೇಮಕಾತಿಗಳು ಆಗುವ ಸಾಧ್ಯತೆಯಿಲ್ಲ ಎಂದು ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಷನ್ (ಎಐಸಿಟಿಇ) ಅಧ್ಯಕ್ಷ ಅನಿಲ್ ಸಹಸ್ರಬುಧೆ ಸಂದರ್ಶನವೊಂದರಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.
ಟಿವಿ ಚಾನೆಲ್ ವೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಬೃಹತ್ ಕೈಗಾರಿಕೆಗಳಲ್ಲಿ ಉದ್ಯೋಗಾವಕಾಶಗಳು ಒಂದು ಹಂತಕ್ಕೆ ಬಂದು ನಿಂತುಬಿಟ್ಟಿವೆ. ಈಗ ಭರವಸೆ ಏನಿದ್ದರೂ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯಮಗಳ ಬಗ್ಗೆಯೇ ಎಂದು ಹೇಳಿದ್ದಾರೆ.
ಸಮೀಕ್ಷೆಗಳ ಪ್ರಕಾರ, ಐಟಿ ಮತ್ತು ಬಿಪಿಒ ವಲಯದ ಉದ್ಯೋಗಾವಕಾಶಗಳಲ್ಲಿ ಭಾರೀ ಇಳಿಕೆ ಆಗಿದೆ. ಈಗೇನಿದ್ದರೂ ಸ್ಟಾರ್ಟ್ ಅಪ್ ಗಳಲ್ಲಿ ಉದ್ಯೋಗ ಸೃಷ್ಟಿ ಆಗಬೇಕಿದೆ. ಫಾರ್ಮಾ ವಲಯದಲ್ಲೂ ಎಚ್ಚರಿಕೆಯ ಲಕ್ಷಣಗಳು ಗೋಚರಿಸುತ್ತಿವೆ.

ಈಗ ಎಂಬಿಎ ಹಾಗೂ ಬಿ ಟೆಕ್ ಕೋರ್ಸ್ ಗಳಿಗೆ ಬೇಡಿಕೆ ಇರುವಂತೆ ಕಂಡುಬರುತ್ತಿರುವುದು ನೀರ ಮೇಲಿನ ಗುಳ್ಳೆಯಂತೆ. ಇನ್ನು ಎರಡು ವರ್ಷಗಳಲ್ಲಿ ಇದು ಒಡೆದು ಹೋಗುತ್ತದೆ ಎಂದಿದ್ದಾರೆ ಸಹಸ್ರಬುಧೆ.
"ಫಾರ್ಮಾ ಸೀಟುಗಳು ಎಲ್ಲವೂ ಭರ್ತಿ ಆಗುತ್ತಿವೆ. ಇವುಗಳಿಗೆ ಭಾರೀ ಬೇಡಿಕೆ ಇರಲಿವೆ ಎಂಬ ನಿರೀಕ್ಷೆ ಜನರಲ್ಲಿದೆ. ಆದರೆ ಮ್ಯಾನೇಜ್ ಮೆಂಟ್ ಹಾಗೂ ಎಂಜಿನಿಯರಿಂಗ್ ಕೋರ್ಸ್ ಗಳಿಗಾದ ಗತಿಯೇ ಇನ್ನು ಒಂದೆರಡು ವರ್ಷದಲ್ಲಿ ಇದಕ್ಕೂ ಆಗಲಿದೆ" ಎಂದು ಅವರು ಹೇಳಿದ್ದಾರೆ.
AICTE ಅಂಕಿ- ಅಂಶದ ಪ್ರಕಾರ, 2016-17ರಲ್ಲಿ ಶೇ ಐವತ್ತಕ್ಕಿಂತ ಹೆಚ್ಚು ಎಂಬಿಎ ಪದವೀಧರರು ಕ್ಯಾಂಪಸ್ ಪ್ಲೇಸ್ ಮೆಂಟ್ ನಲ್ಲಿ ಆಯ್ಕೆ ಆಗಿಲ್ಲ. ಇನ್ನು ಮತ್ತೊಂದು ಸಮೀಕ್ಷೆ ಪ್ರಕಾರ, ದೇಶದ ಶೇ 95ರಷ್ಟು ಎಂಜಿನಿಯರ್ ಗಳು ಉದ್ಯೋಗಕ್ಕೆ ಸೂಕ್ತರಲ್ಲ.
ಇನ್ನು ಟಿ.ವಿ.ಮೋಹನ್ ದಾಸ್ ಪೈ ಹೇಳುವಂತೆ, ದೇಶದಲ್ಲಿ ಹತ್ತು ಕೋಟಿ ಮಂದಿ ಇಪ್ಪತ್ತೊಂದರಿಂದ ಮೂವತ್ತೈದರ ಹರೆಯದವರಿಗೆ ಸರಿಯಾದ ಕೌಶಲ ಇಲ್ಲ. ಇಂಥವರು ಭಾರತದ ಆರ್ಥಿಕತೆಗೆ ಸೂಕ್ತವೇ ಅಲ್ಲ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video












Click it and Unblock the Notifications