Vijayadashami 2023: ಶುಭ ಮುಹೂರ್ತ, ಇತಿಹಾಸ, ಆಚರಣೆ ಮತ್ತು ದಸರಾ ಮಹತ್ವ ಇಲ್ಲಿದೆ
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ದಸರಾ ಅಥವಾ ವಿಜಯದಶಮಿ ಒಂದಾಗಿದೆ. ಇದನ್ನು ದೇಶದಾದ್ಯಂತ ಬಹಳ ವೈಭವ ಮತ್ತು ಉತ್ಸಾಹದಿಂದ ವಿವಿಧ ನಗರಗಳಲ್ಲಿ ತಮ್ಮದೇ ಆದ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸುವ ಮೂಲಕ ಆಚರಿಸಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಅಶ್ವಿನ್ ಮಾಸದ ಶುಕ್ಲ ಪಕ್ಷದ ದಶಮಿ ತಿಥಿಯಂದು ಅಂದರೆ ಅಕ್ಟೋಬರ್ 24 ರಂದು ದಸರಾವನ್ನು ಆಚರಿಸಲಾಗುತ್ತದೆ.
ವಿಜಯದಶಮಿ: ದಿನಾಂಕ ಮತ್ತು ಸಮಯ
ದಶಮಿ ತಿಥಿ ಅಕ್ಟೋಬರ್ 23ರಂದು ಸಂಜೆ 05:44ರಿಂದ ಪ್ರಾರಂಭವಾಗಿ ಅಕ್ಟೋಬರ್ 24ರಂದು ಮಧ್ಯಾಹ್ನ 03:14ಕ್ಕೆ ಕೊನೆಗೊಳ್ಳುತ್ತದೆ. ವಿಜಯ್ ಮುಹೂರ್ತ ಅಕ್ಟೋಬರ್ 24ರಂದು ಮಧ್ಯಾಹ್ನ 01:26 ರಿಂದ ಮಧ್ಯಾಹ್ನ 02:12 ಇರಲಿದೆ. ಅಪರಾಹ್ನ ಪೂಜೆಯ ಸಮಯ ಅಕ್ಟೋಬರ್ 24ರಂದು ಮಧ್ಯಾಹ್ನ 12:40 ರಿಂದ ಮಧ್ಯಾಹ್ನ 02:59ರವರೆಗೆ ಇರಲಿದೆ.

ದಸರಾ 2023: ಮಹತ್ವ
ಹಿಂದೂಗಳಲ್ಲಿ ದಸರಾ ಮಹತ್ತರವಾದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಶ್ರೀರಾಮನು ರಾವಣನನ್ನು ಕೊಂದ ಶುಭದಿನ ಇದು. ಹೀಗಾಗಿ ದಸರಾವನ್ನು ವಿಜಯದಶಮಿ ಎಂದೂ ಕರೆಯುತ್ತಾರೆ. ದಸರಾ ಎಂದರೆ ದಶಾ - 10 ತಲೆಗಳು ಮತ್ತು ಹರ - ಎಂದರೆ ರಾವಣನ ಸೋಲು ಎಂದರ್ಥ.
ದಸರಾ 2023: ಇತಿಹಾಸ
ಹಿಂದೂ ಧರ್ಮಗ್ರಂಥದ ಪ್ರಕಾರ, ಶ್ರೀರಾಮನು ತನ್ನ ಬೃಹತ್ ಸೈನ್ಯದೊಂದಿಗೆ ಒಂಬತ್ತು ದಿನಗಳ ಕಾಲ ಹೋರಾಡಿದ ನಂತರ ರಾಕ್ಷಸ ರಾಜ ರಾವಣನನ್ನು ಸಂಹಾರ ಮಾಡಿದನು. ಶ್ರೀರಾಮನು ವಿಜಯದಶಮಿಯ ದಿನದಂದು ಅವನನ್ನು ಸೋಲಿಸಿ ಧರ್ಮವನ್ನು ಸ್ಥಾಪಿಸಿದನು. ರಾವಣ ರಾಮನ ಪತ್ನಿ ಸೀತಾ ದೇವಿಯನ್ನು ಅಪಹರಿಸಿ, ಸೀತಾದೇವಿಯನ್ನು ತನ್ನ ರಾಜ್ಯವಾದ ಲಂಕಾಕ್ಕೆ ಕರೆದೊಯ್ದು ಅವಳನ್ನು ತನ್ನ ವಶದಲ್ಲಿಟ್ಟುಕೊಂಡಿದ್ದನು. ಶ್ರೀರಾಮನ ಅನೇಕ ಪ್ರಯತ್ನಗಳ ನಂತರ ಅವನು ಅವಳನ್ನು ಹುಡುಕಲಾಗಲಿಲ್ಲ. ಆದರೆ ಹನುಮಂತ ಸೀತಾಮಾತೆಯನ್ನು ಲಂಕೆಯಲ್ಲಿ ಕಂಡನು.

ರಾಮನನ್ನು ಸ್ಮರಿಸುತ್ತಾ ಮೌನವಾಗಿ ಅಳುತ್ತಿದ್ದ ಸೀತಾಮಾತೆಯ ಬಳಿ ಬಂದು ಹನುಮನು ಮಾತನಾಡಿದಾಗ ಸೀತಾಮಾತೆ ಆತನನ್ನು ನಂಬಲಿಲ್ಲ. ಆಗ ಹನುಮಂತನು ಆಕೆಗೆ ಶ್ರೀರಾಮನ ಉಂಗುರವನ್ನು ನೀಡಿದನು. ಆಗ ಸೀತಾಮಾತೆ ಹನುಮಂತ ನಿಜವಾಗಿ ಶ್ರೀರಾಮನ ಸಂದೇಶವಾಹಕನೆಂದು ನಂಬಿದಳು. ಸೀತಾಮಾತೆ ಲಂಕೆಯಲ್ಲಿ ಇರುವುದನ್ನು ತಿಳಿದ ಶ್ರೀರಾಮನು ಸೀತಾ ದೇವಿಯನ್ನು ತಲುಪಲು ರಾಮೇಶ್ವರಂನಿಂದ ಲಂಕೆಗೆ ಸೇತುವೆಯನ್ನು ನಿರ್ಮಿಸಿದನು ಮತ್ತು ತನ್ನ ಹೆಂಡತಿಯನ್ನು ಮರಳಿ ತನ್ನ ಬಳಿಗೆ ತರಲು ಲಂಕಾದ ರಾಜ ರಾವಣನೊಂದಿಗೆ ಹೋರಾಡಿದನು. ಕೊನೆಗೆ ರಾವಣನನ್ನು ಸಂಹರಿಸಿದನು.
ರಾವಣನನ್ನು ಕೊಲ್ಲುವ ಮೊದಲು ರಾಮನು ಹವನ ಮಾಡಿದ್ದನೇ?
ನವರಾತ್ರಿಯ ಒಂಬತ್ತನೇ ಮತ್ತು ಕೊನೆಯ ದಿನದಂದು ರಾವಣನೊಂದಿಗಿನ ಯುದ್ಧವನ್ನು ಗೆಲ್ಲಲು ಶ್ರೀರಾಮನು ದುರ್ಗಾದೇವಿಯನ್ನು ಮೆಚ್ಚಿಸಲು ಹವನ ಅಥವಾ ಯಜ್ಞವನ್ನು ಮಾಡಿದನು.
ದಸರಾ 2023: ವಿವಿಧ ನಗರಗಳಲ್ಲಿ ದಸರಾವನ್ನು ಹೇಗೆ ಆಚರಿಸಲಾಗುತ್ತದೆ?
ದೆಹಲಿಯಲ್ಲಿ ರಾಮಲೀಲಾ ಮೈದಾನದಲ್ಲಿ ನವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶುಕ್ಲ ಪಕ್ಷದ ದಶಮಿ ತಿಥಿಯಂದು ಜನರು ರಾವಣ ಪ್ರತಿಕೃತಿಯನ್ನು ಸುಡುತ್ತಾರೆ. ಈ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉತ್ಸವದಲ್ಲಿ ಭಾಗವಹಿಸುತ್ತಾರೆ ಮತ್ತು ಈ ಅದ್ಭುತವಾದ ಮಹೋತ್ಸವವನ್ನು ವೀಕ್ಷಿಸುತ್ತಾರೆ.

ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯ ಒಂಬತ್ತು ದಿನ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ. ಇಲ್ಲಿ ದುರ್ಗಾ ಪೂಜೆ ಅತ್ಯಂತ ಜನಪ್ರಿಯ ಹಬ್ಬವಾಗಿದೆ. ನವರಾತ್ರಿಯ ಕೊನೆಯ ಮತ್ತು ಹತ್ತನೇ ದಿನದಂದು, ಭಕ್ತರು ದುರ್ಗಾ ದೇವಿಯ ವಿಗ್ರಹವನ್ನು ಹತ್ತಿರದ ನದಿಯಲ್ಲಿ ಮುಳುಗಿಸಿ ಆಶೀರ್ವಾದ ಪಡೆಯುತ್ತಾರೆ. ದುರ್ಗಾದೇವಿಯು ತನ್ನ ಉಗ್ರ ರೂಪದಿಂದ ರಾಕ್ಷಸ ಮಹಿಷಾಸುರನನ್ನು ಕೊಂದು ಯುದ್ಧವನ್ನು ಗೆದ್ದಳು. ಹೀಗಾಗಿ ಈ ದಿನವನ್ನು ಕೆಡುಕಿನ ಮೇಲೆ ಒಳಿತಿನ ವಿಜಯವನ್ನು ಆಚರಿಸುವ ದಿನ ಎಂದು ಆಚರಿಸಲಾಗುತ್ತದೆ.
ಆಯುಧ ಪೂಜೆ - ದಕ್ಷಿಣ ಭಾರತದ ಜನರು ದಸರಾ ದಿನದಂದು ತಮ್ಮ ಆಯುಧಗಳು, ವಾಹನ ಮತ್ತು ಯಂತ್ರಗಳನ್ನು ಪೂಜಿಸುವ ಮೂಲಕ ಈ ದಿನವನ್ನು ಬಹಳ ಗೌರವದಿಂದ ಆಚರಿಸುತ್ತಾರೆ.
ಮೈಸೂರು ದಸರಾ- ವಿಶ್ವವಿಖ್ಯಾತ ಮೈಸೂರು ದಸರಾವನ್ನು ವಿಜಯದಶಮಿಯ ದಿನದಂದು ಕರ್ನಾಟಕದ ಮೈಸೂರಿನಲ್ಲಿ ಆಚರಿಸಲಾಗುವುದು. ರಾಕ್ಷಸ ಮಹಿಷಾಸುರನನ್ನು ಕೊಂದ ಚಾಮುಂಡೇಶ್ವರಿ ದೇವಿಗೆ ಪ್ರಾರ್ಥನೆ ಸಲ್ಲಿಸಲು ಜನ ಸಾಗರವೇ ಹರಿದು ಬರುತ್ತದೆ.
ಬಸ್ತಾರ್ನಲ್ಲಿ ದಸರಾ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಮತ್ತು ಪ್ರದರ್ಶನಗಳ ಮೂಲಕ ಆಚರಿಸಲಾಗುತ್ತದೆ. ಅವರು ದಂತೇಶ್ವರಿ ದೇವಿಯನ್ನು ಬಹಳ ಭಕ್ತಿ ಮತ್ತು ಸಮರ್ಪಣೆಯಿಂದ ಪೂಜಿಸುತ್ತಾರೆ.
ಕೇರಳದಲ್ಲಿ, ಮೊದಲ ಬಾರಿಗೆ ಚಿಕ್ಕ ಮಕ್ಕಳಿಗೆ ಶಿಕ್ಷಣವನ್ನು ಪರಿಚಯಿಸಿವವರು ವಿದ್ಯಾರಂಭಂ ದಿನವನ್ನು ಆಚರಿಸಲಾಗುತ್ತದೆ. ತಮ್ಮ ಮಕ್ಕಳ ಹೆಸರನ್ನು ಮೊದಲ ಬಾರಿಗೆ ಬರೆದು ಸರಸ್ವತಿ ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ದಸರಾ 2023: ಪೂಜಾ ವಿಧಿಗಳು
1. ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಬೇಕು
2. ಮನೆಯನ್ನು ಸ್ವಚ್ಛಗೊಳಿಸಿ ಮತ್ತು ಶ್ರೀರಾಮನಿಗೆ ಪ್ರಾರ್ಥನೆ ಸಲ್ಲಿಸಿ.
3. ಹಸುವಿನ ಸೆಗಣಿ ಅನ್ನು ತಂದು ಮೇಘನಾದ ಮತ್ತು ಕುಂಭಕಾರನೊಂದಿಗೆ ರಾವಣನ ವಿಗ್ರಹವನ್ನು ಮಾಡಿ.
4. ದೇಸಿ ತುಪ್ಪದಿಂದ ದೀಪವನ್ನು ಬೆಳಗಿಸಿ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಿ.
5. ನಮ್ಮಿಂದ ಎಲ್ಲಾ ಅನಿಷ್ಟಗಳನ್ನು ತೊಡೆದುಹಾಕಿ ಎಂದು ಹೂವುಗಳನ್ನು ಅರ್ಪಿಸಿ ಮತ್ತು ಶ್ರೀರಾಮನನ್ನು ಪ್ರಾರ್ಥಿಸಿ.
6. ಕೆಲವರು ಈ ವ್ರತಗಳನ್ನು ಮಾಡುವಾಗ ತಮ್ಮ ಕೆಟ್ಟ ಅಭ್ಯಾಸಗಳನ್ನು ಬಿಡುವುದಾಗಿ ಪ್ರತಿಜ್ಞೆ ಮಾಡುತ್ತಾರೆ.
7. ಅನೇಕ ಜನರು ತಮ್ಮ ಮನೆಯನ್ನು ಪ್ರವೇಶ ದ್ವಾರದಲ್ಲಿ ರಂಗೋಲಿ ಹಾಕಿ ಅಲಂಕರಿಸುತ್ತಾರೆ.
8. ಸಂಜೆ 11 ಅಥವಾ 21 ರಂದು ಮಣ್ಣಿನ ದೀಪಗಳನ್ನು ಹಚ್ಚಿ ಮತ್ತು ನಿಮ್ಮ ಮನೆಯನ್ನು ದೀಪಗಳಿಂದ ಅಲಂಕರಿಸಿ.
-
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ? -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
IPL 2026 Ticket: ಐಪಿಎಲ್ ಟಿಕೆಟ್ ಖರೀದಿ ಕುರಿತು ಬೆಂಗಳೂರು ಪೊಲೀಸರಿಂದ ಕ್ರಿಕೆಟ್ ಪ್ರೇಮಿಗಳಿಗೆ ಮಹತ್ವದ ಸಲಹೆ -
By-Election: ದಾವಣಗೆರೆ ದಕ್ಷಿಣದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ನಿಶ್ಚಿತ; ಬಸವರಾಜ ಬೊಮ್ಮಾಯಿ ವಿಶ್ವಾಸ -
ಆರ್ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಕೇವಲ 42 ಎಸೆತಗಳಲ್ಲಿ 94 ರನ್ ಸಿಡಿಸಿದ ಅಭಿಷೇಕ್ ಶರ್ಮಾ: ಭಾರೀ ವೈರಲ್












Click it and Unblock the Notifications