Get Updates
Get notified of breaking news, exclusive insights, and must-see stories!

Vijaya Ekadashi 2024: ದಿನಾಂಕ, ಮಹತ್ವ, ಮಂಗಳಕರ ಸಮಯ, ಪೂಜಾ ವಿಧಾನ ತಿಳಿಯಿರಿ

ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಏಕಾದಶಿ ದಿನವನ್ನು ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ಉಪವಾಸವನ್ನು ಆಚರಿಸುವುದರಿಂದ ವಿಷ್ಣು ದೇವನ ಆಶೀರ್ವಾದವನ್ನು ಲಭಿಸುತ್ತದೆ ಮತ್ತು ಮೋಕ್ಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷ ಏಕಾದಶಿಯನ್ನು ವಿಜಯ ಏಕಾದಶಿ ಎಂದು ಕರೆಯಲಾಗುತ್ತದೆ.

ಇದು ಹಿಂದೂಗಳು ಮಂಗಳಕರವೆಂದು ಆಚರಿಸಲಾಗುವ ಏಕಾದಶಿ ವ್ರತಗಳಲ್ಲಿ ಒಂದಾಗಿದೆ. ಈ ಏಕಾದಶಿ ವ್ರತವನ್ನು ಆಚರಿಸುವುದರಿಂದ ಓರ್ವ ವ್ಯಕ್ತಿಯು ಎಲ್ಲಾ ಕಾರ್ಯಗಳಲ್ಲಿ ಜಯವನ್ನು, ಅದೃಷ್ಟವನ್ನು ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. ವಿಜಯ ಏಕಾದಶಿ ದಿನದಂದು ಭಗವಾನ್‌ ವಿಷ್ಣುವನ್ನು ವಿಧಿ - ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ವಿಜಯ ಏಕಾದಶಿ 2024ರ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತು ವಿಶೇಷತೆಗಳನ್ನು ತಿಳಿಯೋಣ.

 Vijaya Ekadashi 2024: Know date, significance, auspicious time and pooja method in kannada

ವಿಜಯ ಏಕಾದಶಿಯ ಉಪವಾಸವನ್ನು ಯಾವಾಗ ಆಚರಿಸಲಾಗುತ್ತದೆ?

ವಿಜಯ ಏಕಾದಶಿ ತಿಥಿಯು ಮಾರ್ಚ್ 6 ರಂದು ಬೆಳಿಗ್ಗೆ 6:31 ಕ್ಕೆ ಪ್ರಾರಂಭವಾಗಲಿದೆ. ಏಕಾದಶಿ ತಿಥಿ ಮರುದಿನ ಮಾರ್ಚ್ 7 ರಂದು ಬೆಳಿಗ್ಗೆ 4:14 ಕ್ಕೆ ಕೊನೆಗೊಳ್ಳಲಿದೆ. ಆದರೆ ಉದಯ ಕಾಲದಿಂದ ಏಕಾದಶಿ ತಿಥಿ ಮಾರ್ಚ್ 6 ರಂದು ಇಡೀ ದಿನ ನಡೆಯಲಿದೆ. ಆದ್ದರಿಂದ ವಿಜಯ ಏಕಾದಶಿಯ ಉಪವಾಸವನ್ನು ಮಾರ್ಚ್ 6 ರಂದು ಆಚರಿಸಲಾಗುತ್ತದೆ.

ವಿಜಯ ಏಕಾದಶಿಯ ಮಹತ್ವ

ವಿಜಯ ಏಕಾದಶಿಯಂದು ಈ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯು ವಿಜಯವನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಲಂಕಾವನ್ನು ವಶಪಡಿಸಿಕೊಳ್ಳುವ ಇಚ್ಛೆಯೊಂದಿಗೆ ಶ್ರೀರಾಮನು ಈ ಏಕಾದಶಿಯಂದು ಸಮುದ್ರ ತೀರದಲ್ಲಿ ಬಕದಾಲ್ಭ್ಯ ಮುನಿಯ ಆದೇಶದಂತೆ ಉಪವಾಸವನ್ನು ಆಚರಿಸಿದನು. ಇದರಿಂದಾಗಿ ರಾವಣನ ವಧೆಯಾಯಿತು ಮತ್ತು ರಾಮಚಂದ್ರನು ವಿಜಯಶಾಲಿಯಾದನು.

 Vijaya Ekadashi 2024: Know date, significance, auspicious time and pooja method in kannada

ವಿಜಯ ಏಕಾದಶಿ ಪೂಜಾ ವಿಧಾನ

-ವಿಜಯ ಏಕಾದಶಿಯ ಒಂದು ದಿನ ಮುಂಚಿತವಾಗಿ ಪೂಜಾ ಸ್ಥಳವನ್ನು ಶುದ್ಧಗೊಳಿಸಬೇಕು.

-ವಿಜಯ ಏಕಾದಶಿಯ ದಿನದಂದು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ಇದರ ನಂತರ ಪೂಜಾ ಸ್ಥಳವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ನಂತರ ಅದರ ಮೇಲೆ ಏಳು ಧಾನ್ಯಗಳನ್ನು ಇರಿಸಿ.

- ಇದರ ನಂತರ ಅಲ್ಲಿ ಬೆಳ್ಳಿ, ತಾಮ್ರ ಅಥವಾ ಮಣ್ಣಿನ ಪಾತ್ರೆಯನ್ನು ಇಡಿ

- ಇಷ್ಟೆಲ್ಲ ಆದ ನಂತರ ವಿಷ್ಣುವಿನ ವಿಗ್ರಹವನ್ನು ಸ್ಥಾಪಿಸಿ.

- ನಂತರ ವಿಷ್ಣುವನ್ನು ಧೂಪ, ದೀಪ, ಶ್ರೀಗಂಧ, ಹಣ್ಣುಗಳು, ಹೂವುಗಳು ಮತ್ತು ತುಳಸಿ ಇತ್ಯಾದಿಗಳಿಂದ ಪೂಜಿಸಿ.

- ಉಪವಾಸ ಆಚರಿಸುವುದರ ಜೊತೆಗೆ ವಿಜಯ ಏಕಾದಶಿ ಉಪವಾಸದ ಕಥೆಯನ್ನು ಪಠಿಸಿ.

- ಶ್ರೀ ಹರಿಯ ನಾಮವನ್ನು ಜಪಿಸುತ್ತಾ ರಾತ್ರಿ ಜಾಗರಣೆಯಲ್ಲಿರಿ.

-ಈ ದಿನದಂದು 'ವಿಷ್ಣು ಸಹಸ್ರನಾಮ' ಪಠಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+