Vijaya Ekadashi 2024: ದಿನಾಂಕ, ಮಹತ್ವ, ಮಂಗಳಕರ ಸಮಯ, ಪೂಜಾ ವಿಧಾನ ತಿಳಿಯಿರಿ
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಏಕಾದಶಿ ದಿನವನ್ನು ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ಉಪವಾಸವನ್ನು ಆಚರಿಸುವುದರಿಂದ ವಿಷ್ಣು ದೇವನ ಆಶೀರ್ವಾದವನ್ನು ಲಭಿಸುತ್ತದೆ ಮತ್ತು ಮೋಕ್ಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷ ಏಕಾದಶಿಯನ್ನು ವಿಜಯ ಏಕಾದಶಿ ಎಂದು ಕರೆಯಲಾಗುತ್ತದೆ.
ಇದು ಹಿಂದೂಗಳು ಮಂಗಳಕರವೆಂದು ಆಚರಿಸಲಾಗುವ ಏಕಾದಶಿ ವ್ರತಗಳಲ್ಲಿ ಒಂದಾಗಿದೆ. ಈ ಏಕಾದಶಿ ವ್ರತವನ್ನು ಆಚರಿಸುವುದರಿಂದ ಓರ್ವ ವ್ಯಕ್ತಿಯು ಎಲ್ಲಾ ಕಾರ್ಯಗಳಲ್ಲಿ ಜಯವನ್ನು, ಅದೃಷ್ಟವನ್ನು ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. ವಿಜಯ ಏಕಾದಶಿ ದಿನದಂದು ಭಗವಾನ್ ವಿಷ್ಣುವನ್ನು ವಿಧಿ - ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ವಿಜಯ ಏಕಾದಶಿ 2024ರ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತು ವಿಶೇಷತೆಗಳನ್ನು ತಿಳಿಯೋಣ.

ವಿಜಯ ಏಕಾದಶಿಯ ಉಪವಾಸವನ್ನು ಯಾವಾಗ ಆಚರಿಸಲಾಗುತ್ತದೆ?
ವಿಜಯ ಏಕಾದಶಿ ತಿಥಿಯು ಮಾರ್ಚ್ 6 ರಂದು ಬೆಳಿಗ್ಗೆ 6:31 ಕ್ಕೆ ಪ್ರಾರಂಭವಾಗಲಿದೆ. ಏಕಾದಶಿ ತಿಥಿ ಮರುದಿನ ಮಾರ್ಚ್ 7 ರಂದು ಬೆಳಿಗ್ಗೆ 4:14 ಕ್ಕೆ ಕೊನೆಗೊಳ್ಳಲಿದೆ. ಆದರೆ ಉದಯ ಕಾಲದಿಂದ ಏಕಾದಶಿ ತಿಥಿ ಮಾರ್ಚ್ 6 ರಂದು ಇಡೀ ದಿನ ನಡೆಯಲಿದೆ. ಆದ್ದರಿಂದ ವಿಜಯ ಏಕಾದಶಿಯ ಉಪವಾಸವನ್ನು ಮಾರ್ಚ್ 6 ರಂದು ಆಚರಿಸಲಾಗುತ್ತದೆ.
ವಿಜಯ ಏಕಾದಶಿಯ ಮಹತ್ವ
ವಿಜಯ ಏಕಾದಶಿಯಂದು ಈ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯು ವಿಜಯವನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಲಂಕಾವನ್ನು ವಶಪಡಿಸಿಕೊಳ್ಳುವ ಇಚ್ಛೆಯೊಂದಿಗೆ ಶ್ರೀರಾಮನು ಈ ಏಕಾದಶಿಯಂದು ಸಮುದ್ರ ತೀರದಲ್ಲಿ ಬಕದಾಲ್ಭ್ಯ ಮುನಿಯ ಆದೇಶದಂತೆ ಉಪವಾಸವನ್ನು ಆಚರಿಸಿದನು. ಇದರಿಂದಾಗಿ ರಾವಣನ ವಧೆಯಾಯಿತು ಮತ್ತು ರಾಮಚಂದ್ರನು ವಿಜಯಶಾಲಿಯಾದನು.

ವಿಜಯ ಏಕಾದಶಿ ಪೂಜಾ ವಿಧಾನ
-ವಿಜಯ ಏಕಾದಶಿಯ ಒಂದು ದಿನ ಮುಂಚಿತವಾಗಿ ಪೂಜಾ ಸ್ಥಳವನ್ನು ಶುದ್ಧಗೊಳಿಸಬೇಕು.
-ವಿಜಯ ಏಕಾದಶಿಯ ದಿನದಂದು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ಇದರ ನಂತರ ಪೂಜಾ ಸ್ಥಳವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ನಂತರ ಅದರ ಮೇಲೆ ಏಳು ಧಾನ್ಯಗಳನ್ನು ಇರಿಸಿ.
- ಇದರ ನಂತರ ಅಲ್ಲಿ ಬೆಳ್ಳಿ, ತಾಮ್ರ ಅಥವಾ ಮಣ್ಣಿನ ಪಾತ್ರೆಯನ್ನು ಇಡಿ
- ಇಷ್ಟೆಲ್ಲ ಆದ ನಂತರ ವಿಷ್ಣುವಿನ ವಿಗ್ರಹವನ್ನು ಸ್ಥಾಪಿಸಿ.
- ನಂತರ ವಿಷ್ಣುವನ್ನು ಧೂಪ, ದೀಪ, ಶ್ರೀಗಂಧ, ಹಣ್ಣುಗಳು, ಹೂವುಗಳು ಮತ್ತು ತುಳಸಿ ಇತ್ಯಾದಿಗಳಿಂದ ಪೂಜಿಸಿ.
- ಉಪವಾಸ ಆಚರಿಸುವುದರ ಜೊತೆಗೆ ವಿಜಯ ಏಕಾದಶಿ ಉಪವಾಸದ ಕಥೆಯನ್ನು ಪಠಿಸಿ.
- ಶ್ರೀ ಹರಿಯ ನಾಮವನ್ನು ಜಪಿಸುತ್ತಾ ರಾತ್ರಿ ಜಾಗರಣೆಯಲ್ಲಿರಿ.
-ಈ ದಿನದಂದು 'ವಿಷ್ಣು ಸಹಸ್ರನಾಮ' ಪಠಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು












Click it and Unblock the Notifications