Vijaya Ekadashi 2024: ದಿನಾಂಕ, ಮಹತ್ವ, ಮಂಗಳಕರ ಸಮಯ, ಪೂಜಾ ವಿಧಾನ ತಿಳಿಯಿರಿ
ಹಿಂದೂ ಧರ್ಮದಲ್ಲಿ ಏಕಾದಶಿಗೆ ವಿಶೇಷ ಮಹತ್ವವಿದೆ. ಏಕಾದಶಿ ದಿನವನ್ನು ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ಉಪವಾಸವನ್ನು ಆಚರಿಸುವುದರಿಂದ ವಿಷ್ಣು ದೇವನ ಆಶೀರ್ವಾದವನ್ನು ಲಭಿಸುತ್ತದೆ ಮತ್ತು ಮೋಕ್ಷ ಸಿಗುತ್ತದೆ ಎಂದು ಹೇಳಲಾಗುತ್ತದೆ. ಫಾಲ್ಗುಣ ಮಾಸದ ಕೃಷ್ಣ ಪಕ್ಷ ಏಕಾದಶಿಯನ್ನು ವಿಜಯ ಏಕಾದಶಿ ಎಂದು ಕರೆಯಲಾಗುತ್ತದೆ.
ಇದು ಹಿಂದೂಗಳು ಮಂಗಳಕರವೆಂದು ಆಚರಿಸಲಾಗುವ ಏಕಾದಶಿ ವ್ರತಗಳಲ್ಲಿ ಒಂದಾಗಿದೆ. ಈ ಏಕಾದಶಿ ವ್ರತವನ್ನು ಆಚರಿಸುವುದರಿಂದ ಓರ್ವ ವ್ಯಕ್ತಿಯು ಎಲ್ಲಾ ಕಾರ್ಯಗಳಲ್ಲಿ ಜಯವನ್ನು, ಅದೃಷ್ಟವನ್ನು ಮತ್ತು ಸಮೃದ್ಧಿಯನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ. ವಿಜಯ ಏಕಾದಶಿ ದಿನದಂದು ಭಗವಾನ್ ವಿಷ್ಣುವನ್ನು ವಿಧಿ - ವಿಧಾನಗಳ ಪ್ರಕಾರ ಪೂಜಿಸಲಾಗುತ್ತದೆ. ವಿಜಯ ಏಕಾದಶಿ 2024ರ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ ಮತ್ತು ವಿಶೇಷತೆಗಳನ್ನು ತಿಳಿಯೋಣ.

ವಿಜಯ ಏಕಾದಶಿಯ ಉಪವಾಸವನ್ನು ಯಾವಾಗ ಆಚರಿಸಲಾಗುತ್ತದೆ?
ವಿಜಯ ಏಕಾದಶಿ ತಿಥಿಯು ಮಾರ್ಚ್ 6 ರಂದು ಬೆಳಿಗ್ಗೆ 6:31 ಕ್ಕೆ ಪ್ರಾರಂಭವಾಗಲಿದೆ. ಏಕಾದಶಿ ತಿಥಿ ಮರುದಿನ ಮಾರ್ಚ್ 7 ರಂದು ಬೆಳಿಗ್ಗೆ 4:14 ಕ್ಕೆ ಕೊನೆಗೊಳ್ಳಲಿದೆ. ಆದರೆ ಉದಯ ಕಾಲದಿಂದ ಏಕಾದಶಿ ತಿಥಿ ಮಾರ್ಚ್ 6 ರಂದು ಇಡೀ ದಿನ ನಡೆಯಲಿದೆ. ಆದ್ದರಿಂದ ವಿಜಯ ಏಕಾದಶಿಯ ಉಪವಾಸವನ್ನು ಮಾರ್ಚ್ 6 ರಂದು ಆಚರಿಸಲಾಗುತ್ತದೆ.
ವಿಜಯ ಏಕಾದಶಿಯ ಮಹತ್ವ
ವಿಜಯ ಏಕಾದಶಿಯಂದು ಈ ವ್ರತವನ್ನು ಆಚರಿಸುವುದರಿಂದ ವ್ಯಕ್ತಿಯು ವಿಜಯವನ್ನು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ಲಂಕಾವನ್ನು ವಶಪಡಿಸಿಕೊಳ್ಳುವ ಇಚ್ಛೆಯೊಂದಿಗೆ ಶ್ರೀರಾಮನು ಈ ಏಕಾದಶಿಯಂದು ಸಮುದ್ರ ತೀರದಲ್ಲಿ ಬಕದಾಲ್ಭ್ಯ ಮುನಿಯ ಆದೇಶದಂತೆ ಉಪವಾಸವನ್ನು ಆಚರಿಸಿದನು. ಇದರಿಂದಾಗಿ ರಾವಣನ ವಧೆಯಾಯಿತು ಮತ್ತು ರಾಮಚಂದ್ರನು ವಿಜಯಶಾಲಿಯಾದನು.

ವಿಜಯ ಏಕಾದಶಿ ಪೂಜಾ ವಿಧಾನ
-ವಿಜಯ ಏಕಾದಶಿಯ ಒಂದು ದಿನ ಮುಂಚಿತವಾಗಿ ಪೂಜಾ ಸ್ಥಳವನ್ನು ಶುದ್ಧಗೊಳಿಸಬೇಕು.
-ವಿಜಯ ಏಕಾದಶಿಯ ದಿನದಂದು ಬೆಳಗ್ಗೆ ಬ್ರಹ್ಮ ಮುಹೂರ್ತದಲ್ಲಿ ಏಳಬೇಕು. ಇದರ ನಂತರ ಪೂಜಾ ಸ್ಥಳವನ್ನು ಚೆನ್ನಾಗಿ ಸ್ವಚ್ಛಗೊಳಿಸಬೇಕು. ನಂತರ ಅದರ ಮೇಲೆ ಏಳು ಧಾನ್ಯಗಳನ್ನು ಇರಿಸಿ.
- ಇದರ ನಂತರ ಅಲ್ಲಿ ಬೆಳ್ಳಿ, ತಾಮ್ರ ಅಥವಾ ಮಣ್ಣಿನ ಪಾತ್ರೆಯನ್ನು ಇಡಿ
- ಇಷ್ಟೆಲ್ಲ ಆದ ನಂತರ ವಿಷ್ಣುವಿನ ವಿಗ್ರಹವನ್ನು ಸ್ಥಾಪಿಸಿ.
- ನಂತರ ವಿಷ್ಣುವನ್ನು ಧೂಪ, ದೀಪ, ಶ್ರೀಗಂಧ, ಹಣ್ಣುಗಳು, ಹೂವುಗಳು ಮತ್ತು ತುಳಸಿ ಇತ್ಯಾದಿಗಳಿಂದ ಪೂಜಿಸಿ.
- ಉಪವಾಸ ಆಚರಿಸುವುದರ ಜೊತೆಗೆ ವಿಜಯ ಏಕಾದಶಿ ಉಪವಾಸದ ಕಥೆಯನ್ನು ಪಠಿಸಿ.
- ಶ್ರೀ ಹರಿಯ ನಾಮವನ್ನು ಜಪಿಸುತ್ತಾ ರಾತ್ರಿ ಜಾಗರಣೆಯಲ್ಲಿರಿ.
-ಈ ದಿನದಂದು 'ವಿಷ್ಣು ಸಹಸ್ರನಾಮ' ಪಠಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
-
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei












Click it and Unblock the Notifications