Varalakshmi Vrata 2023: ವರಲಕ್ಷ್ಮಿ ವ್ರತ ಪೂಜಾ ದಿನಾಂಕ, ಸಮಯ ಮತ್ತು ಆಚರಣೆಯ ಬಗ್ಗೆ ಮಾಹಿತಿ ಇಲ್ಲಿದೆ...
ವರಲಕ್ಷ್ಮಿ ವ್ರತ ಅಥವಾ ವರಲಕ್ಷ್ಮಿ ಆಚರಣೆ ಹಿಂದೂ ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣುವಿನ ಪತ್ನಿಯಾದ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸುವ ಹಬ್ಬವಾಗಿದೆ. ವರಲಕ್ಷ್ಮಿ ಉಪವಾಸವನ್ನು ಶ್ರಾವಣ ಶುಕ್ಲ ಪಕ್ಷದ ಕೊನೆಯ ಶುಕ್ರವಾರದಂದು ಆಚರಿಸಲಾಗುತ್ತದೆ.
ಪಾರ್ವತಿ ದೇವಿಯು ತನ್ನ ಪ್ರೀತಿಯ ಪತ್ನಿ ಮತ್ತು ತನ್ನ ಕುಟುಂಬದ ಸಮೃದ್ಧಿ ಮತ್ತು ಸಂತೋಷಕ್ಕಾಗಿ ಉಪವಾಸವನ್ನು ಆಚರಿಸುತ್ತಾಳೆ. ದಕ್ಷಿಣ ಭಾರತದಾದ್ಯಂತ ಮಹಿಳೆಯರು ಶ್ರಾವಣದ ಶುಕ್ಲ ಪಕ್ಷದಂದು ವರಲಕ್ಷ್ಮಿ ವ್ರತವನ್ನು ಆಚರಿಸುತ್ತಾರೆ. ಇದು ಈ ಭಾಗದ ಜನಪ್ರಿಯ ಸಂಪ್ರದಾಯಿಕ ಹಬ್ಬವೂ ಹೌದು. ಈ ದಿನ ಮಕ್ಕಳಾಗದ ಮಹಿಳೆಯರು ಮಕ್ಕಳ ಭಾಗ್ಯಕ್ಕಾಗಿ, ಸುಖ, ಶಾಂತಿ, ಸಂಪತ್ತು, ನೆಮ್ಮದಿಯ ಜೀವನಕ್ಕಾಗಿ ಆಶೀರ್ವದಿಸಬೇಕೆಂದು ವರಲಕ್ಷ್ಮಿಯನ್ನು ಪ್ರಾರ್ಥಿಸುತ್ತಾರೆ.

ವರಲಕ್ಷ್ಮೀ ವ್ರತ 2023 ದಿನಾಂಕಗಳು:-
ವರಲಕ್ಷ್ಮೀ ವ್ರತ 2023ರ ದಿನಾಂಕ ಆಗಸ್ಟ್ 25
ಸಿಂಹ ಲಗ್ನ ಪೂಜೆ ಮುಹೂರ್ತ (ಬೆಳಿಗ್ಗೆ) - 05:55 ರಿಂದ 07:42
ವೃಶ್ಚಿಕ ಲಗ್ನ ಪೂಜೆ ಮುಹೂರ್ತ (ಮಧ್ಯಾಹ್ನ) - 12:17 ರಿಂದ 12:36
ಕುಂಭ ಲಗ್ನ ಪೂಜೆ ಮುಹೂರ್ತ (ಸಂಜೆ) - 16:22 ರಿಂದ 17:50
ವೃಷಭ ಲಗ್ನ ಪೂಜೆ ಮುಹೂರ್ತ (ಮಧ್ಯರಾತ್ರಿ) - 10:50 ರಿಂದ 00:45
ವರಲಕ್ಷ್ಮೀ ವ್ರತದ ಮಹತ್ವ
ವರಲಕ್ಷ್ಮಿ ವ್ರತವನ್ನು ಈ ವರ್ಷ ಶುಕ್ರವಾರ ಆಗಸ್ಟ್ 25 ರಂದು ಆಚರಿಸಲಾಗುತ್ತದೆ. ಇದು ಲಕ್ಷ್ಮಿ ದೇವಿಗೆ ಸಮರ್ಪಿತವಾದ ಹಬ್ಬವಾಗಿದೆ. ಈ ದಿನ ಸಂಪತ್ತು ಮತ್ತು ಸಮೃದ್ಧಿಯ ದೇವತೆಯನ್ನು ಮೆಚ್ಚಿಸಲು ವಿಶೇಷವಾಗಿ ಲಕ್ಷ್ಮಿದೇವಿಯ ಪೂಜೆಯನ್ನು ಮಾಡಲಾಗುತ್ತದೆ. ಲಕ್ಷ್ಮಿ ದೇವಿಯ ರೂಪಗಳಲ್ಲಿ ಒಂದಾದ ವರಲಕ್ಷ್ಮಿಯನ್ನು ಪೂಜಿಸುವುದರಿಂದ ವರಗಳನ್ನು ನೀಡುತ್ತಾಳೆ. ಈ ದಿನ ವರಲಕ್ಷ್ಮೀ ವ್ರತ ಮಾಡುವುದರಿಂದ ತನ್ನ ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುತ್ತಾಳೆ ಎಂದು ನಂಬಲಾಗಿದೆ. ಆದ್ದರಿಂದ ದೇವಿಯ ಈ ರೂಪವನ್ನು ವರಲಕ್ಷ್ಮಿ ಎಂದು ಕರೆಯಲಾಗುತ್ತದೆ ಅಂದರೆ ವರಗಳನ್ನು ನೀಡುವ ಲಕ್ಷ್ಮಿ ದೇವತೆ.

ವರಲಕ್ಷ್ಮೀ ವ್ರತದ ಕಥೆ
ಇದು ಪರಮೇಶ್ವರನು ತನ್ನ ಪತ್ನಿ ಪಾರ್ವತಿಯಿಂದ ಕುಟುಂಬಕ್ಕೆ ಸಮೃದ್ಧಿ ಮತ್ತು ಸಂತೋಷವನ್ನು ಕೋರಲು ಮಾಡಬೇಕೆಂದು ಹೇಳಿದ ಪೂಜೆಯಾಗಿದೆ.
ಒಂದು ದಿನ ಪಾರ್ವತಿ ಪರಮೇಶ್ವರನಿಗೆ 'ಮಹಾದೇವಾ, ಪ್ರಪಂಚದಲ್ಲಿ ಸಕಲ ಸುಖಗಳನ್ನು ಕೊಟ್ಟು ಭಕ್ತರ ಕಷ್ಟವನ್ನು ಪರಿಹರಿಸಿ ಸೌಭಾಗ್ಯ ಸಂತೋಷಗಳನ್ನು ಉಂಟು ಮಾಡುವ ವ್ರತ ಯಾವುದು' ಎಂದು ಕೇಳಿದಳು. ಆಗ ಪರಮೇಶ್ವರ ವರಲಕ್ಷ್ಮೀವ್ರತವನ್ನು ಹೆಂಗಸರು, ಗಂಡಸರು, ಮಕ್ಕಳು ಮಾಡಬಹುದು. ಈ ವ್ರತವನ್ನು ಶ್ರಾವಣಮಾಸದ ಶುಕ್ಲಪಕ್ಷದಲ್ಲಿ ಹುಣ್ಣಿಮೆಗೆ ಹತ್ತಿರವಾದ ಶುಕ್ರವಾರದ ದಿನ ಮಾಡಬೇಕು. ಈ ವ್ರತ ಮಾಡಿದ ಬಕ್ತರ ಕೋರಿಕೆಗಳೆಲ್ಲ ಕೈಗೂಡಿ ಕಷ್ಟ ಕಾಯಕಗಳು ನಾಶವಾಗುತ್ತವೆ ಎಂದು ಹೇಳಿದನು.
ಜೊತೆಗೆ ಪಾರ್ವತಿಗೆ ಪರಮೇಶ್ವರನು ಕಥೆಯೊಂದನ್ನು ಹೇಳಿದನು. ಒಂದು ದಿನ ಮಹಾಲಕ್ಷ್ಮಿ ದರಿದ್ರಳಾದ ಚಾರುಮತಿ ಮಲಗಿದ್ದಾಗ ಕನಸಿನಲ್ಲಿ ಬಂದು ವರಲಕ್ಷ್ಮಿ ವ್ರತ ಮಾಡಿ ಸಂಕಷ್ಟಗಳಿಂದ ಮುಕ್ತಿ ಹೊಂದಿ ಧನ್ಯಳಾಗುವಂತೆ ಸೂಚಿಸಿದಳು. ಭೂಲೋಕದಲ್ಲಿ ಯಾರು ನನ್ನನ್ನು ಭಕ್ತಿಯಿಂದ ಪೂಜಿಸುತ್ತಾರೋ ಅವರೇ ಧನ್ಯರು! ಅವರೇ ಶೂರರು! ಅವರೇ ಪುಣ್ಯಶಾಲಿಗಳು, ಅವರೇ ಮಹಾತ್ಮರು, ಸಾಹಸಿಗಳು ಎಂದು ಉಪದೇಶಿಸಿ ಅಂತರ್ದಾನಳಾದಳು. ಅದರಂತೆ ನಿಯಮದಿಂದ ವ್ರತವನ್ನು ಮಾಡಿ ವರಲಕ್ಷ್ಮಿಯ ಕಟಾಕ್ಷದಿಂದ ಅಷ್ಟೈಶ್ವರ್ಯವನ್ನೂ ಪಡೆದಳು. ಆದ ಕಾರಣ ಈ ಲೋಕದಲ್ಲಿ ಯಾರು ಭಕ್ತಿಯಿಂದ ಈ ವ್ರತವನ್ನು ಆಚರಿಸುತ್ತಾರೋ ಅಂಥವರು ಅಖಂಡವಾದ ಐಶ್ವರ್ಯ ಪಡೆದು ವರಲಕ್ಷ್ಮಿಯ ಪ್ರಸಾದದಿಂದ ಭೋಗಭಾಗ್ಯಗಳನ್ನು ಅನುಭವಿಸುವರು ಎಂದು ನಂಬಲಾಗಿದೆ.

ವರಲಕ್ಷ್ಮೀ ಆಚರಣೆಯ ವಿಧಾನಗಳು
ಪುರುಷರು ಮತ್ತು ಮಹಿಳೆಯರು ವ್ರತವನ್ನು ಮಾಡಬಹುದಾದರೂ, ಸಾಮಾನ್ಯವಾಗಿ ಕುಟುಂಬದ ಮಹಿಳೆಯರು ತಮ್ಮ ಕುಟುಂಬದ ಸದಸ್ಯರ ಯೋಗಕ್ಷೇಮಕ್ಕಾಗಿ ಆಶೀರ್ವಾದವನ್ನು ಪಡೆಯಲು ಉಪವಾಸವನ್ನು ಆಚರಿಸುತ್ತಾರೆ.
ಈ ಮಂಗಳಕರ ದಿನದಂದು, ಮಹಿಳೆಯರು ಬೇಗನೆ ಎದ್ದು, ಧಾರ್ಮಿಕ ಉಪವಾಸವನ್ನು ಆಚರಿಸುತ್ತಾರೆ. ವರಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ. ಅದರಲ್ಲಿ ಅವರು ದೇವಿಗೆ ಸಿಹಿತಿಂಡಿಗಳು ಮತ್ತು ಹೂವುಗಳನ್ನು ಅರ್ಪಿಸುತ್ತಾರೆ.
ವರಲಕ್ಷ್ಮಿ ಪೂಜೆಯನ್ನು ಆಚರಿಸುವ ಮಹಿಳೆಯರು ಕೆಲವು ಆಹಾರಗಳನ್ನು ತಿನ್ನುವುದರಿಂದ ದೂರವಿರುತ್ತಾರೆ. ಅದು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತದೆ.
ಕಳಶ ಅಥವಾ ಹಿತ್ತಾಳೆಯ ಮಡಕೆಯನ್ನು (ದೇವತೆಯನ್ನು ಪ್ರತಿನಿಧಿಸುತ್ತದೆ) ಸೀರೆಯಿಂದ ಸುತ್ತಿ ಅಲಂಕರಿಸಲಾಗುತ್ತದೆ. ಕುಂಕುಮ ಮತ್ತು ಶ್ರೀಗಂಧದ ಪೇಸ್ಟ್ನಿಂದ ಸ್ವಸ್ತಿಕ ಚಿಹ್ನೆಯನ್ನು ಅಲಂಕರಿಸಲಾಗುತ್ತದೆ. ಸೀರೆಯಿಂದ ಅಲಂಕಾರಗೊಂಡ ಹಿತ್ತಾಳೆಯ ಮಡಕೆಗೆ ವರಲಕ್ಷ್ಮಿಯ ಮುಖವನ್ನಿರಿಸಿ ಪೂಜೆ ಮಾಡಲಾಗುತ್ತದೆ. ಕಲಶದ ಪಾತ್ರೆಯು ಹಸಿ ಅಕ್ಕಿ ಅಥವಾ ನೀರು, ನಾಣ್ಯಗಳು, ಐದು ವಿಧದ ಎಲೆಗಳು ಮತ್ತು ವೀಳ್ಯದೆಲೆಗಳಿಂದ ತುಂಬಿರುತ್ತದೆ.
ಕೊನೆಗೆ ಹಿತ್ತಾಳೆಯ ಮಡಕೆ ಬಾಯಿಗೆ ಕೆಲವು ಮಾವಿನ ಎಲೆಗಳನ್ನು ಇಟ್ಟು, ತೆಂಗಿನಕಾಯಿಗೆ ಅರಿಶಿನ ಹಚ್ಚಿ ಅದರ ಬಾಯಿ ಮುಚ್ಚುತ್ತಾರೆ. ವರಲಕ್ಷ್ಮಿ ಪೂಜೆಯ ಸಮಯದಲ್ಲಿ ಪವಿತ್ರ ದಾರವನ್ನು ಕಟ್ಟಲಾಗುತ್ತದೆ.
ಸಂಜೆಯ ಸಮಯದಲ್ಲಿ ದೇವಿಗೆ ಆರತಿಯನ್ನು ಅರ್ಪಿಸಲಾಗುತ್ತದೆ.
ಮರುದಿನ,ಹಿತ್ತಾಳೆಯ ಮಡಕೆ ನೀರನ್ನು ಮನೆಯ ಸುತ್ತಲೂ ಚಿಮುಕಿಸಲಾಗುತ್ತದೆ. ಅಕ್ಕಿ ಕಾಳುಗಳನ್ನು ಮರುದಿನ ಕುಟುಂಬದಲ್ಲಿ ಊಟ ಅಥವಾ ಪ್ರಸಾದವನ್ನು ತಯಾರಿಸಲು ಬಳಸಲಾಗುತ್ತದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications