ಅಕ್ಷರಗಳ ಖಜಾನೆ ಖಾಲಿ, ನಿಲ್ಲದು ನಿನ್ನ ವರ್ಣಿಸುವ ಖಯಾಲಿ
ನೀ,, ಒಂದು ಮುಗುಳ್ನಗೆಯಾಡಿದರೆ ಕಳೆದುಕೊಳ್ಳುವುದು ಏನೂ ಇಲ್ಲ. ಅಲ್ಲೆಲ್ಲೋ ವಿಜ್ಞಾನಿಗಳು ಪ್ರಪಂಚದ ಜನ್ಮಕ್ಕೆ ಕಾರಣ ಏನು ಎಂದು ಪತ್ತೆ ಹಚ್ಚಿದರಂತೆ, ಆದರೆ ನಿನ್ನ ಪ್ರೀತಿಯ ಸೆಳೆತಕ್ಕೆ ಕಾರಣ ಯಾವಾಗ ಹುಡುಕುತ್ತಾರೋ?
ಬಾಗಿಲು ಮುಚ್ಚಿದರೂ ಬೆಳಕಿನ ಕಿಂಡಿ ಒಂದಿದೆ. ಅದು ನಿನ್ನ ಕಣ್ಣ ಹೊಳಪೇ ಹೌದು... ಕಷ್ಟಪಡದೆಯೇ ಇಷ್ಟವಾಗವುದು ಅಂದ್ರೇ ಇದೇನಾ? ಇಷ್ಟ ಪಟ್ಟ ಮೇಲೆ ಕಷ್ಟ ಪಡುವುದು ಅಂದ್ರೆ ಇದೇನಾ? ಅದ್ಯಾಕೋ ಮತ್ತದೇ ಹಳೆಯ ಸಂದೇಶಗಳದ್ದೇ ಮೆಲುಕು.. ನೀ ನನ್ನೊಟ್ಟಿಗೆ ಇದ್ದಾಗ ವಿನಿಮಯವಾದ ಸಂದೇಶಗಳ ಲೆಕ್ಕ ಇಡಲು ಆಧುನಿಕ ಕಂಪ್ಯೂಟರ್ ಬಳಿಯೂ ಸಾಧ್ಯವಾಗಲಿಲ್ಲ.[ಹಾಡೋಣ ಬಾರಾ ಪ್ರೀತಿಯ ಚಿಲಿಪಿಲಿ...]

ಗೆಳತಿ,,, ಮೇಘ ಸಂದೇಶ ಕಳಿಸಲು ಮೋಡಗಳು ಮಾತು ಕೇಳುತ್ತಿಲ್ಲ. ನಿನ್ನ ಬೆರಳಿಗೆ ಉಂಗುರ ತೊಡಿಸಲು ಅಳತೆ ನನಗೆ ಗೊತ್ತಿಲ್ಲ. ಗುಲಾಬಿ ಕೀಳಲು ಮುಳ್ಳಿನ ಭಯ. ಪತ್ರ ಬರೆದು ರವಾನೆ ಮಾಡಲು ಅಕ್ಷರಗಳ ಭಂಡಾರ ಖಾಲಿ, ಆದರೂ ನಿಲ್ಲದು ನಿನ್ನ ವರ್ಣಿಸುವ ಖಯಾಲಿ..
ಮಡಿಸಿಟ್ಟ ಕಾಗದ ತುಂಡುಗಳಲ್ಲಿ ಎಲ್ಲೆಲ್ಲೂ ನಿನ್ನದೇ ಹೆಸರುಗಳು, ಸ್ನೇಹ-ಪ್ರೀತಿಯ ಸಾವಿರ ಕತೆ ಹೇಳುವ ಕೊನೆಯ ಪುಟದ ಗೀಟುಗಳು...ಕೊಂಚ ಉದ್ದಕ್ಕೆ ಬರೆದರೇ ಅವೇ ಸಂಗೀತದ ಸಂಕೇತಾಕ್ಷರಗಳು..
ಬಿಡಿಸಿಟ್ಟ ರಂಗೋಲಿಯಲ್ಲಿ ನಿನ್ನದೇ ಚಿತ್ರ ಕಾಣುತಿಹುದು..ಗುಯ್ ಗುಟ್ಟುವ ಗಾಳಿ ಸದ್ದಲ್ಲೂ ನಿನ್ನದೇ ಸ್ವರ...ನಡುಗಿಸುವ ಚಳಿಯಲ್ಲೂ ನಿನ್ನದೇ ಉಸಿರು... ಓಡುತ್ತಿರುವ ಕಾಲಕ್ಕೆ ನೀನೇ ಗಡಿಯಾರ.. ಹಸಿದ ಹೊಟ್ಟೆಗೆ ನಿನ್ನ ಚಿತ್ರವೇ ಆಹಾರ...[ಹೀಗೊಂದು ಪ್ರೇಮ ಪತ್ರ., ಮೊದಲ ಪುಟ]
ಬಿಂಕದ ಸಿಂಗಾರಿ, ಕನಸಿನ ಕನ್ಯೆ, ಬೆಳದಿಂಗಳ ಬಾಲೆ, ರಾಣಿ, ಮಹಾರಾಣಿ ಎಂದೆಲ್ಲ ನಿನ್ನ ವರ್ಣಿಸುವ ಹುಚ್ಚು ಸಾಹಸಕ್ಕೆ ಕೈ ಹಾಕಲ್ಲ. ಆ ಎಲ್ಲ ಪದಗಳು ನಿನಗೇ ಸರಿ ಸಾಟಿ ಇಲ್ಲ ಬಿಡು. ನಿನಗೆ ಒಂದು ಹೆಸರು ಕೊಡುವಷ್ಟು ದೊಡ್ಡವನು ನಾನಲ್ಲ,,, ಆ ತಾಕತ್ತು ನನ್ನ ಬಳಿ ಉಳಿದಿಲ್ಲ.
ನಿನಗೆ ನೀನೆ ಒಂದು ಹೆಸರು ಇಟ್ಟಿಕೊಂಡಿದ್ದೀಯ ಅಲ್ಲ.. ಕೊಟ್ಟುಕೊಂಡಿದ್ದೀಯ,, ಅದೇ ಸಾಕು ನನ್ನ ನೆನಪಿಗೆ, ಅದೇ ಸಾಕು ಈ ಬಂಧನಕೆ.. ಆ ಹೆಸರಲ್ಲೇ ಮಾತಿದೆ-ಮೌನವಿದೆ, ಸಿಟ್ಟಿದೆ-ಸಿಡುಕಿದೆ, ಭಾಷೆ ಇದೆ-ಅಭಿಲಾಷೆ ಇದೆ. ಶಕ್ತಿಯಿದೆ-ನಿರಾಸಕ್ತಿಯೂ ಇದೆ. ಆ ಹೆಸರೇ ಸಾಕು ಕೊನೆಯವರೆಗೆ ನಿನ್ನ ಕರೆಯಲು. ಅಷ್ಟಕ್ಕೂ ನಿನ್ನ ಅಸಲಿ ಹೆಸರಿನ ತಕರಾರು ನನಗೇಕೆ?
ಅಳಿಸಿ ಬಿಡು ಹಳೆಯ ಮಾಸಿದ ಚಿತ್ರಗಳನ್ನು... ಮೂಡಲಿ ಹೊಸ ಚಿತ್ತಾರ.. ಹಣೆ ಬರಹವನ್ನೇ ತಿದ್ದುವ ಸಾಮರ್ಥ್ಯವೇ ನಿನಗಿದೆಯಲ್ಲ ಅಷ್ಟು ಸಾಕು ಸುಂದರ ಬದುಕಿಗೆ.
ಇಳಿಸಂಜೆಯ ಹೊತ್ತಲ್ಲಿ ರಸ್ತೆಯ ಆ ಕಡೆ ನೀನು.. ಈ ಕಡೆ ನಾನು ನಡೆದುಕೊಂಡು ಹೋಗುತ್ತಿದ್ದರೆ ತಿರುಗುವ ಭೂಮಿಯೂ ಒಂದು ಕ್ಷಣ ಅಲ್ಲೇ ನಿಂತು ನಮ್ಮನ್ನು ತಿರುಗಿ ನೋಡಿದರೆ ಆಶ್ಚರ್ಯವಿಲ್ಲ. ಇನ್ನಾದರೂ ಕಾಲಕ್ಕೆ ಸವಾಲೆಸೆಯುವ ನಿನ್ನ ಜಾಣ್ಮೆಯನ್ನು ನನ್ನೊಂದಿಗೆ ಹಂಚಿಕೊಳ್ಳುವೆಯಾ?
-
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ












Click it and Unblock the Notifications