ಈ ಪ್ರೀತಿ ಒಂಥರಾ ಕಚಗುಳಿ, ಸದಾ ಲವಲವಿಕೆಯೆ ಪ್ರೀತಿ
ಈ ಪ್ರೀತಿ ಒಂಥರಾ ಕಚಗುಳಿ... ಇದು ಕೇವಲ ಯುವಪ್ರೇಮಿಗಳಿಗೆ ಸೀಮಿತವೇ? ಈ ಪ್ರಶ್ನೆಯನ್ನ ಪ್ರತಿಯೊಬ್ಬರೂ ಕೇಳಿಕೊಂಡರೆ ಒಳ್ಳೆಯದು ಅನ್ಸುತ್ತೆ.
ಪ್ರೀತಿಗೆ ಅಂಟಿಕೊಂಡಿರುವ ತುಂಟತನ, ಕಚಗುಳಿತನ ಮದುವೆ-ಮಕ್ಕಳು ಅಂತ ಆಗಿಬಿಟ್ಟರೆ ಸಾಕು ಕಣ್ಮರೆಯಾಗಿ ಬಿಡುತ್ತವೆ.
ಇದಕ್ಕೆ ಕಾರಣವೇನು ಅಂತ ಹುಡುಕುತ್ತಾ ಹೊರಟರೆ, ಅದಕ್ಕೆ ಕಾರಣ ನಾವೇ ಆಗಿರ್ತೀವಿ. ಮದುವೆಯಾಯ್ತು-ಮಕ್ಕಳೂ ಆದ್ವು ಇನ್ನೆಂತಹ ತುಂಟತನ, ಜವಾಬ್ದಾರಿಯಿಂದ ಇರ್ಬೇಕು ಅಂತ, ನಮ್ಮಲ್ಲಿಯ ತುಂಟತನಕ್ಕೆ ಫುಲ್-ಸ್ಟಾಪ್ ಹಾಕಿಬಿಡ್ತೀವಿ. ನಮಗರಿವಿಲ್ಲದೆ ಸಂಗಾತಿಯೊಂದಿಗೆ ಹಂಚಿಕೊಳ್ಳಬಹುದಾದ ಒಂದು ಜಬರದಸ್ತಾದ ರಸ ಘಳಿಗೆಗಳನ್ನ ಕಳೆದುಕೊಳ್ತೀವಿ.
ಒಂದು ಕ್ಷಣ ಯೋಚನೆ ಮಾಡಿ, ಮದುವೆ ಮುಂಚೆಯಾದ್ರೆ, ಸಂಗಾತಿಗಾಗಿ ಏನೆಲ್ಲಾ ಮಾಡ್ತೀವಿ, ಊಹಿಸಲಾಗದಂತಹ ಅನಿರೀಕ್ಷಿತ ಉಡುಗೊರೆ ಕೊಟ್ಟು ಸಂಗಾತಿಯನ್ನ ಬೆರಗು ಗೊಳಿಸ್ತೀವಿ.

ಆ ಉಡುಗೊರೆ ದುಬಾರಿಯದ್ದೇ ಆಗಿರಬೇಕು ಅಂತೇನು ಇಲ್ಲ. ಎಲ್ಲೋ ದೂರದಲ್ಲಿದ್ದಾಗ ಅರೆಕ್ಷಣದ ಭೇಟಿಗಾಗಿ ಅಷ್ಟು ದೂರದಿಂದ ಬಂದು ಸಂಗಾತಿಯ ಕಣ್ಣಲ್ಲಿ ಖುಷಿಯನ್ನ ತುಂಬಿಕೊಡುವ ಉಡುಗೊರೆಗೆ ಬೆಲೆಕಟ್ಟಲು ಸಾಧ್ಯವೆ? ಸಂಸಾರದ ಜಂಜಾಟಗಳಲ್ಲಿ, ಜವಾಬ್ದಾರಿಗಳಲ್ಲಿ ಕಳೆದು ಹೋಗಿ ಅಂತಹ ಅನುರಾಗದ ಅಪರೂಪದ ಕ್ಷಣಗಳನ್ನು ಸವಿಯದೆ ಹೋಗ್ತೀವಿ.
ಇನ್ನೇನು ಇಹಯಾತ್ರೆ ಮುಗಿಸಲು ಕೆಲವೇ ಕ್ಷಣಗಳು ಬಾಕಿಯಿದ್ದಾಗ ನಮ್ಮೆಲ್ಲಾ ಪ್ರೀತಿ-ಪಾತ್ರರಿಗೆ ಎಷ್ಟರ ಮಟ್ಟಿಗೆ ಪ್ರೀತಿ ವ್ಯಕ್ತಪಡಿಸಿದ್ವಿ? ಅಂತ ನಮ್ಮನ್ನು ನಾವೇ ಪ್ರಶ್ನಿಸಿ ಕೊಂಡರೆ, ಛೇ! ನಾನು ಇನ್ನೂ ಸೊಗಸಾಗಿ ಜೀವನ ಮಾಡಬಹುದಿತ್ತು ಅಂತ ಅನ್ನಿಸಿದರೆ, ಏನುಪಯೋಗ? ಆಗ ಏನು ಮಾಡಲಾಗದ ಸ್ಥಿತಿಯಲ್ಲಿರ್ತೀವಿ. ಬದುಕು ತನ್ನ ಗರ್ಭದಲ್ಲಿ ಏನೆಲ್ಲಾ ಅಡಗಿಸಿಟ್ಟು ಕೊಂಡಿದೆ, ಅದೆನ್ನೆಲ್ಲಾ ಪಡೆಯಬೇಕಂದರೆ ಪ್ರೀತಿಯಿಂದ, ಆಸ್ಥೆಯಿಂದ ಬದುಕಿದರೆ ಮಾತ್ರ ಸಾಧ್ಯ.

ಈ ಪ್ರೇಮಿಗಳ ದಿನ- ಪಾಶ್ಚಾತ್ಯರಿಂದ ಬಂದದ್ದು ಅಂತ ಮೂಗು ಮುರಿಯುವುದರ ಬದಲಾಗಿ, ನಮ್ಮ ಸಂಸ್ಕೃತಿಗೆ ಒಗ್ಗಿ ಕೊಳ್ಳುವ ಹಾಗೆ ಆಚರಿಸುವುದು ನಮ್ಮ ಕೈಯಲ್ಲೆ ಇದೆ.
ಪ್ರೀತಿಯಿಂದ ಪ್ರೀತಿಗಾಗಿ...
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications