Bevu Bella Payasa Recipe: ಬೇವಿನ ಪಾಯಸ ರೆಸಿಪಿ- ಯುಗಾದಿ ಹಬ್ಬಕ್ಕೆ ಯುಗಾದಿ ಪಚಡಿ ತಯಾರಿಸಿ
ಯುಗಾದಿ ಹಬ್ಬ ಬಂತು ಅಂದರೆ ಮನೆಯಲ್ಲಿ ಸಿಹಿ ತಿಂಡಿಗಳ ತಯಾರಿ ಶುರುವಾಗುತ್ತದೆ. ಬಗೆ ಬಗೆಯ ಸಿಹಿ ತಿನಿಸುಗಳನ್ನು ತಯಾರಿಸಿ ಹೊಸ ವರ್ಷ ಯುಗಾದಿಯನ್ನು ಬರಮಾಡಿಕೊಳ್ಳಲಾಗುತ್ತದೆ. ಹೀಗೆ ಯುಗಾದಿ ಹಬ್ಬವನ್ನು ಆಚರಿಸುವ ಪ್ರತಿಯೊಬ್ಬರಿಗೂ ಬೇವಿನ ಪಾಯಸದ ಬಗ್ಗೆ ತಿಳಿದಿಲ್ಲ. ಉತ್ತರ ಕರ್ನಾಟಕದಲ್ಲಿ ಬೇವಿನ ಪಾಯಸ ಮಾಡದೇ ಇದ್ದರೆ ಅದು ಯುಗಾದಿ ಹಬ್ಬ ಅನಿಸಿಕೊಳ್ಳುವುದೇ ಇಲ್ಲ. ಹಾಗಾದರೆ ಏನಿದು ಬೇವಿನ ಪಾಯಸ? ಹೇಗಿರುತ್ತೆ? ಹೇಗೆ ಮಾಡಲಾಗುತ್ತದೆ ಅನ್ನೋದನ್ನು ತಿಳಿಯೋಣ.
ಬೇವು ಕಹಿ, ಬೆಲ್ಲ ಸಿಹಿ, ಈ ಎರಡು ಸೇರಿದಾಗ ಜೀವನದಲ್ಲಿ ಸಿಹಿ ಕಹಿ, ಏಳು ಬೀಳು, ಸುಖ ದು:ಖ ಎಲ್ಲವನ್ನೂ ಸರಿಸಮಾನವಾಗಿ ಸ್ವೀಕರಿಸಬೇಕು ಅನ್ನೋದನ್ನು ಅರ್ಥೈಸುತ್ತದೆ. ಹೀಗಾಗಿ ಈ ಪಾಯಸವನ್ನು ಯುಗಾದಿ ಹಬ್ಬದಂದು ತಯಾರಿಸುವುದು ರೂಢಿ. ಸಾಮಾನ್ಯವಾಗಿ ಬೇವು ತುಂಬಾ ಕಹಿಯಾಗಿರುವುದರಿಂದ ಅದರ ಹೂವುಗಳನ್ನು ಬಳಸಿ ಬೇವಿನ ಪಾಯಸ ತಯಾರಿಸಲಾಗುತ್ತದೆ. ಹಾಗಾದರೆ ಇದನ್ನು ತಯಾರಿಸುವ ವಿಧಾನವನ್ನು ಈಗ ತಿಳಿಯೋಣ.

ಬೇಕಾಗುವ ಪದಾರ್ಥಗಳು:-
* ಬೇವಿನ ತಾಜಾ ಹೂವು 1 ಟೇಬಲ್ ಸ್ಪೂನ್
* ಹುಣಸೆ ಹಣ್ಣು 1 ಹಿಡಿ
* ಬೆಲ್ಲ 1 ಹಿಡಿ
* ಬಾದಾಮಿ 6-7
* ಒಣ ಕರ್ಜುರ 3-4
* ಪಿಸ್ತಾ 6-7
*ಗೋಡಂಬಿ 3-4
*ಒಣ ದ್ರಾಕ್ಷಿ 8-9
*ಜಾಯಿ ಕಾಯಿ ಪೌಡರ್ ಕಾಲ್ ಟೀ ಸ್ಪೂನ್
* ಒಣ ಶುಂಠಿ ಕಾಲ್ ಟೀ ಸ್ಪೂನ್
* ಕೆಂಪು ಕಲ್ಲು ಸಕ್ಕರೆ 1 ಟೇಬಲ್ ಸ್ಪೂನ್
* ಏಲಕ್ಕಿ 4
* ಮಾವಿನ ಕಾಯಿ(ಒಂದು ಟೇಬಲ್ ಸ್ಪೂನ್ ತುರಿದ ಮಾವಿನ ಕಾಯಿ ಹಾಗೂ ಮೂರು ಚಮಚ ಚಿಕ್ಕದಾಗಿ ಕಟ್ ಮಾಡಿದ ಮಾವಿನ ಕಾಯಿ)
*ಒಣಕೊಬ್ಬರಿ (ತುರಿದ ಒಣಕೊಬ್ಬರಿ ಎರಡು ಚಮಚ)
*ಪುಟಾಣಿ 5 ಟೇಬಲ್ ಸ್ಪೂನ್
*ಗಸಗಸೆ 1 ಟೇಬಲ್ ಸ್ಪೂನ್
*ಐಸ್ ವಾಟರ್(ತಣ್ಣನೆಯ ನೀರು ಎರಡು ಕಪ್)
* ಮೆಣಸಿನ ಪುಡಿ ಸ್ವಲ್ಪ
* ಉಪ್ಪಿ ಚಿಟಿಕೆಯಷ್ಟು
ತಯಾರಿಸುವ ವಿಧಾನ:-
* ಮೊದಲಿಗೆ ಹುಣಸೇಹಣ್ಣು ಅರ್ಧಗಂಟೆ ನೆನೆಹಾಕಿ ಚೆನ್ನಾಗಿ ಕಿವಿಚಿ ಸೋಸಿಕೊಂಡು ಒಂದು ಕಪ್ಪು ರಸ ತೆಗೆದುಕೊಳ್ಳಬೇಕು
* ಹುಣಸೆ ಹಣ್ಣಿನ ರಸಕ್ಕೆ ಒಂದು ಕಪ್ ಬೆಲ್ಲವನ್ನು ಹಾಕಿ ಕರಗುವವರೆಗೂ ಮಿಕ್ಸ್ ಮಾಡಿ
* ಬಳಿಕ ಇದಕ್ಕೆ ಸಣ್ಣದಾಗಿ ಕಟ್ ಮಾಡಿದ ಬಾದಾಮಿ, ಒಣ ಕರ್ಜುರ, ಪಿಸ್ತಾ, ಗೋಡಂಬಿ, ಒಣ ದ್ರಾಕ್ಷಿಯನ್ನು ಹಾಕಿ
* ಬಳಿಕ ಇದಕ್ಕೆ ಪೌಡರ್ ಮಾಡಿದ ಜಾಯಿ ಕಾಯಿ, ಒಣ ಶುಂಠಿ, ಕೆಂಪು ಕಲ್ಲು ಸಕ್ಕರೆ, ಏಲಕ್ಕಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ
* ತುರಿದ ಮಾವಿನ ಕಾಯಿ, ಒಣಕೊಬ್ಬರಿ ಹಾಗೂ ಚಿಕ್ಕದಾಗಿ ಕಟ್ ಮಾಡಿದ ಮಾವಿನ ಕಾಯಿ ಹಾಕಿ.
* ಒಂದು ಕಪ್ ಪುಟಾಣಿ/ಹುರಿಗಡಲೆ ತೆಗೆದುಕೊಂಡು ಪೌಡರ್ ಮಾಡಿ, ನೀರು ಹಾಕಿ ಚನ್ನಾಗಿ ಮಿಕ್ಸ್ ಮಾಡಿ ಗಸಗಸೆ ಹಾಕಿ ಕಲಸಿ. ಈಗಾಗಲೇ ತಯಾರಿಸಿದ ಮಿಶ್ರಣಕ್ಕೆ ಹಾಕಿ ಕಲಸಿ
* ಬಳಿಕ ಇದಕ್ಕೆ ಬೇವಿನ ಹೂವು ಹಾಕಿ, ಮೂರು ಲೋಟ ಐಸ್ ವಾಟರ್ ಹಾಕಿ ಸ್ವಲ್ಪ ಮೆಣಸಿನ ಪುಡಿ ಹಾಗೂ ಚಿಟಿಕೆ ಉಪ್ಪು ಹಾಕಿದರೆ ಬೇವಿನ ಪಾಯಸ ಸವಿಯಲು ಸಿದ್ಧ.
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ












Click it and Unblock the Notifications