ಸಿರಿ-ಸಂಭ್ರಮದ ಯುಗಾದಿಗೊಂದು ಮುನ್ನುಡಿ!
- ಮೊದಲು ಅಭ್ಯಂಜನ - ತೈಲ ಉಪಯೋಗದಿಂದ ಭೌತಿಕವಾಗಿ ತಲೆಯಿಂದ ಪಾದದವರೆವಿಗೆ ಸ್ನಾನ ಮಾಡುವುದರಿಂದ ಆಯಾಸ, ವಾತದ ದೋಷಗಳ ನಿವಾರಣೆಯಾಗುವುದು. ಪ್ರಸನ್ನತೆ, ಪುಷ್ಟಿ, ಆಯುರ್ವರ್ಧನೆ, ಸುಖ ನಿದ್ರೆಗಳು ಲಭಿಸುವುವು. ಅಲ್ಲದೇ ಚರ್ಮದ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಯೂ ಆಗುವುದು.
- ಗೃಹಾಲಂಕಾರ - ತಳಿರು ತೋರಣಗಳು, ಪತಾಕೆಗಳೂ ಮತ್ತು ರಂಗವಲ್ಲಿಯ ಸಹಾಯದಿಂದ ಮನೆಯ ಒಳಗೆ ಮತ್ತು ಹೊರಗೆ ಸಿಂಗಾರ
- ಸಂಕಲ್ಪ - ಇಷ್ಟ ದೇವತಾ ಪೂಜೆ
- ಹೋಮ - ಈ ಹಬ್ಬದಲ್ಲಿ ಹೋಮ ಮಾಡುವ ಅಗ್ನಿಗೆ ’ಯವಿಷ್ಠ’ ಎಂದು ಹೆಸರಿಸಿರುವರು. ’ಯವಿಷ್ಠ’ ಎಂದರೆ ಅತ್ಯಂತ ಕಿರಿಯವನು ಎಂದರ್ಥ. ಸೃಷ್ಟಿಯ ಪ್ರಾರಂಭದಲ್ಲಿ ಶಕ್ತಿಯು ಅತ್ಯಂತ ಸೂಕ್ಷ್ಮವೆಂದು ಉಪಾಸನೆ ಮಾಡಲ್ಪಡುತ್ತದೆ. ಅದರ ಪ್ರತೀಕವಾಗಿರುವ ಅಗ್ನಿಗೆ ಅತ್ಯಂತ ಕಿರಿಯವರು ಎಂದು ಸೂಚಿಸುವರು.
- ಪಂಚಾಂಗ ಶ್ರವಣ
- ದಾನ
- ವಿಶೇಷ ನೈವೇದ್ಯ - ಸಾಮಾನ್ಯವಾಗಿ ಬೇವು ಬೆಲ್ಲವನ್ನು ವಿಶೇಷವಾಗಿ ನೈವೇದ್ಯ ಮಾಡುವುದರ ಜೊತೆಗೆ ಹೋಳಿಗೆ ಅಥವಾ ಒಬ್ಬಟ್ಟನ್ನೂ ನೈವೇದ್ಯ ಮಾಡುವರು. ಕೆಲವು ಕಡೆ ಬೇವಿನೊಡನೆ ಕಲ್ಲು ಸಕ್ಕರೆ ಮತ್ತು ಮೆಣಸನ್ನೂ ಸೇರಿಸಿ, ಆ ಮಿಶ್ರಣವನ್ನು ನೈವೇದ್ಯ ಮಾಡಿ ಸೇವಿಸುವರು.












Click it and Unblock the Notifications