Ugadi Decoration: ಯುಗಾದಿ ಹಬ್ಬಕ್ಕೆ ಮನೆಯನ್ನು ಅಲಂಕರಿಸುವುದು ಹೇಗೆ?
ಯುಗಾದಿ ಹಿಂದೂ ಸಂಪ್ರದಾಯದಲ್ಲಿ ಹೊಸ ವರ್ಷದ ಆಗಮನವಾಗಿದೆ. ಈ ಹೊಸ ವರ್ಷವನ್ನು ವಿಭಿನ್ನವಾಗಿ ಸ್ವಾಗತಿಸಲು ಎಲ್ಲರು ಬಯಸುತ್ತಾರೆ. ಜೊತೆಗೆ ಈ ವರ್ಷದಲ್ಲಿ ತಮ್ಮ ಜೀವನ ಸಂತೋಷದಿಂದ ಕೂಡಿರಲಿ ಎಂದು ಪ್ರಾರ್ಥನೆ ಮಾಡುತ್ತಾರೆ. ಈ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಮನೆಯನ್ನು ಅಲಂಕರಿಸುವುದು ತುಂಬಾ ಮುಖ್ಯ. ಹಾಗಾದರೆ ಈ ದಿನ ಮನೆಯನ್ನು ಸರಳವಾಗಿ ಸುಂದರವಾಗಿ ಕಾಣಿಸಲು ಏನೆಲ್ಲಾ ಮಾಡಬಹುದು ಎಂದು ಈಗ ತಿಳಿಯೋಣ.

ರಂಗೋಲಿ
ಯುಗಾದಿ ಹಬ್ಬದಂದು ಮನೆಗೆ ಹಬ್ಬದ ಕಳೆ ಬರುವುದು ಮನೆ ಮುಂದೆ ಬಿಡಿಸುವ ರಂಗೋಲಿಯಿಂದ. ಒಂದು ಪುಟ್ಟದಾದ ಬಣ್ಣ ಬಣ್ಣದ ರಂಗೋಲಿಯನ್ನು ಮನೆಯ ಮುಂದೆ ಬಿಡಿಸಿದರೆ ಹಬ್ಬದ ಕಳೆ ಸಂತೋಷ ಇನ್ನಷ್ಟು ಹೆಚ್ಚಾಗಲಿದೆ. ರಂಗೋಲಿ ಬಿಡಿಸುವ ಮುನ್ನ ಆ ಸ್ಥಳಕ್ಕೆ ಸಗಣಿ ನೀರು ಹಾಕುವುದು ಸಕರಾತ್ಮಕತೆಯನ್ನು ಆಕರ್ಷಿಸುತ್ತದೆ.

ಪ್ರವೇಶ ದ್ವಾರದ ಅಲಂಕಾರ
ಯುಗಾದಿಯನ್ನು ಆಚರಿಸಲು ಅಲಂಕಾರದ ಭಾಗವಾಗಿ ಅನೇಕ ಸಾಂಪ್ರದಾಯಿಕ ವಸ್ತುಗಳನ್ನು ಬಳಸಲಾಗುತ್ತದೆ. ಮಾವಿನ ಎಲೆಗಳು, ಬಾಳೆ ಮರ, ಬೇವಿನ ಎಲೆಗಳು, ಚೆಂಡು ಹೂವುಗಳು ಇತ್ಯಾದಿಗಳನ್ನು ಪ್ರಧಾನವಾಗಿ ಪ್ರವೇಶದ್ವಾರವನ್ನು ಅಲಂಕರಿಸಲು ಬಳಸಲಾಗುತ್ತದೆ. ಯಾಕೆಂದರೆ ಮಾವಿನ ಎಲೆಗಳು, ಚೆಂಡು ಹೂವುಗಳು ಮತ್ತು ಬಾಳೆ ಮರಗಳನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಇವು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತರುತ್ತವೆ. ಅಲ್ಲದೆ ಬೇವಿನ ಎಲೆಗಳು ನಕಾರಾತ್ಮಕತೆಯನ್ನು ನಾಶಮಾಡುತ್ತವೆ. ಹೀಗಾಗಿ ಪ್ರವೇಶದ್ವಾರದಲ್ಲಿ ಬಾಗಿಲಿನ ಎರಡೂ ಬದಿಯಲ್ಲಿ ಸಣ್ಣ ಬಾಳೆಹಣ್ಣನ್ನು ಕಟ್ಟಿ ಸುತ್ತಲೂ ಬೇವಿನ ಎಲೆಗಳನ್ನು ನೇತು ಹಾಕುವುದು ಶುಭವೆಂದು ನಂಬಲಾಗುತ್ತದೆ. ಪ್ರವೇಶದ್ವಾರದಲ್ಲಿ ಎರಡೂ ಬದಿಗಳಲ್ಲಿ ಎರಡು ಬಟ್ಟಲು ನೀರು ಇಟ್ಟು, ಅವುಗಳಲ್ಲಿ ಚಂಡು ಹೂವುಗಳನ್ನು ಹಾಕಿ ಸಾಂಪ್ರದಾಯಿಕ ಮತ್ತು ಸಮಕಾಲೀನ ನೋಟವನ್ನು ನೀಡಬಹುದು.

ವರ್ಣರಂಜಿತ ಪರದೆಗಳು
ನೀವು ಪ್ರವೇಶದ್ವಾರದಲ್ಲಿ ವರ್ಣರಂಜಿತ ಪರದೆಗಳನ್ನು ಬಳಸಬಹುದು. ಹಬ್ಬದ ಮತ್ತು ವರ್ಣರಂಜಿತ ನೋಟವನ್ನು ನೀಡಲು ಇವುಗಳನ್ನು ಮನೆಯ ಪ್ರವೇಶ ದ್ವಾರ, ಕಿಟಕಿಗಳಿಗೂ ವರ್ಣರಂಜಿತ ಪರದೆಗಳನ್ನು ಹಾಕಿ ಹಬ್ಬದ ಕಳೆಯನ್ನು ಹೆಚ್ಚಿಸಬಹುದು.
ಬಣ್ಣ ಬಣ್ಣದ ಲೈಟ್
ಮನೆಯ ಅಲಂಕಾರದ ಭಾಗವಾಗಿ ನೀವು ಪ್ರವೇಶದ್ವಾರದಲ್ಲಿ ಅಥವಾ ಬಾಲ್ಕನಿಯಲ್ಲಿ ಬಣ್ಣ ಬಣ್ಣದ ಲೈಟ್ಗಳನ್ನು ಹಾಕಬಹುದು. ಇದರೊಂದಿಗೆ ಆಕಾಶ ಬುಟ್ಟಿ ದೀಪಗಳು ಕೂಡ ಹಬ್ಬದ ಕಳೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಇದಲ್ಲದೆ ಕಾಗದ ಅಥವಾ ಬಟ್ಟೆಯಿಂದ ತಯಾರಿಸಿದ ವಸ್ತುಗಳನ್ನು ಮನೆಯ ಒಳಗೆ ನೇತುಹಾಕಬಹುದು.

ಹಿತ್ತಾಳೆಯ ಗಂಟೆಗಳು
ಹಿತ್ತಾಳೆಯ ಗಂಟೆಗಳು ಸುಂದರವಾಗಿ ಕಾಣುತ್ತವೆ ಮತ್ತು ನಿಮ್ಮ ಮನೆಗೆ ಸಾಂಪ್ರದಾಯಿಕ ನೋಟವನ್ನು ನೀಡುತ್ತವೆ. ನೀವು ಇವುಗಳನ್ನು ನಿಮ್ಮ ಮನೆಯ ಹೊರಗೆ ನೇತುಹಾಕಬಹುದು ಅಥವಾ ವಿಂಡ್ ಚೈಮ್ಗಳಿಗೆ ಬದಲಿಯಾಗಿ ನಿಮ್ಮ ಮನೆಯ ಅಲಂಕಾರದ ಭಾಗವಾಗಿ ಹಾಕಬಹುದು.
ಹಿತ್ತಾಳೆ ಮತ್ತು ಮಣ್ಣಿನ ಎಣ್ಣೆ ದೀಪಗಳು
ದೀಪಗಳು ಹಬ್ಬದ ಅಲಂಕಾರದ ಪ್ರಮುಖ ಅಂಶಗಳಾಗಿವೆ. ಈ ಮಣ್ಣಿನ ದೀಪಗಳಿಂದ ನೀವು ರಂಗೋಲಿಯನ್ನು ಅಲಂಕರಿಸಬಹುದು. ನಿಮ್ಮ ಬಾಲ್ಕನಿ ಮತ್ತು ವಾಸದ ಕೋಣೆಯಲ್ಲಿ ನೀವು ಈ ದೀಪಗಳನ್ನು ಬಳಸಬಹುದು. ಎಣ್ಣೆ ದೀಪಗಳನ್ನು ಬಳಸುವಾಗ ಯಾವುದೇ ಬೆಂಕಿ ಅವಘಡವನ್ನು ತಪ್ಪಿಸಲು ಹತ್ತಿರದಲ್ಲಿ ಬಟ್ಟೆ ಅಥವಾ ಯಾವುದೇ ಸುಡುವ ವಸ್ತುಗಳು ಇರದಂತೆ ನೋಡಿಕೊಳ್ಳಿ.

ತುಳಸಿ ಗಿಡದ ಅಲಂಕಾರ
ತುಳಸಿ ಗಿಡ ಶುಭಕರವಾಗಿದ್ದು ಹಬ್ಬದ ಅಲಂಕಾರಕ್ಕೆ ಸರಿದೂಗಿಸಬಹುದು. ತುಳಸಿಯನ್ನು ಸ್ವಚ್ಛಗೊಳಿಸಿ. ಗಿಡಕ್ಕೆ ಅರಿಶಿನ ಸೇರಿಸಿ. ಅದರ ಮುಂದೆ ಪಾತ್ರೆಯನ್ನಿಟ್ಟು ಅದರ ಸುತ್ತಲೂ ಹೂವಿನ ರಂಗೋಲಿಯನ್ನು ಮಾಡಬಹುದು ಅಥವಾ ರಂಗೋಲಿಯ ಮೇಲೆ ತುಳಸಿ ಪಾತ್ರೆಯನ್ನು ಇಡಬಹುದು.
ಗೋಡೆಯ ಅಲಂಕಾರ
ನಿಮ್ಮ ಮನೆಯ ಗೋಡೆಗಳನ್ನು ಚಿತ್ರಿಸುವ ಮೂಲಕ ನೀವು ಹೊಸ ವರ್ಷವನ್ನು ಪ್ರಾರಂಭಿಸಬಹುದು. ಇದು ನಿಮ್ಮ ಮನೆಗೆ ಹೊಸ ನೋಟವನ್ನು ನೀಡುತ್ತದೆ. ಪರ್ಯಾಯವಾಗಿ ನಿಮ್ಮ ಮನೆಗೆ ಹೊಸ ನೋಟವನ್ನು ನೀಡಲು ನೀವು ಗೋಡೆಯ ಫಲಕ ಅಥವಾ ವಾಲ್ಪೇಪರ್ ಅನ್ನು ಬಳಸಬಹುದು.
ಧೂಪದ್ರವ್ಯ ಕಡ್ಡಿಗಳು ಮತ್ತು ಕರ್ಪೂರ ಬಳಕೆ
ಹಬ್ಬದಂದು ಧೂಪದ್ರವ್ಯ ಕಡ್ಡಿಗಳು ಮತ್ತು ಕರ್ಪೂರವನ್ನು ಹಚ್ಚುವುದರಿಂದ ನಿಮ್ಮ ಮನೆಯ ಸುವಾಸನೆ ಹೆಚ್ಚಾಗುತ್ತದೆ. ಇದರಿಂದ ದುರ್ವಾಸನೆ ಹಾಗೂ ಕೀಟಗಳು ದೂರವಾಗುತ್ತವೆ. ನೀವು ವಿವಿಧ ರೀತಿಯ ಗಾಳಿ ಶುದ್ಧೀಕರಣ ದ್ರವ್ಯಗಳನ್ನೂ ಬಳಸಬಹುದು.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications